ನವದೆಹಲಿ: ಆಶ್ಚರ್ಯವೇ, ಹೌದು ಕಾಂಗ್ರೆಸ್ ಪಕ್ಷವು ಈಗ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಂದ ಸ್ಫೂರ್ತಿಗೊಂಡಿದೆ. ಅದೇಗೆ ಅಂತೀರಾ? ಇಲ್ಲಿ ನೋಡಿ.
ಕರ್ನಾಟಕದಲ್ಲಿ ಯಾವುದೇ ಪಕ್ಷವು ಬಹುಮತ ಬಂದಿರಲಿಲ್ಲ, ಈ ಸಂದರ್ಭದಲ್ಲಿ ರಾಜ್ಯದ ರಾಜ್ಯಪಾಲರು ಬಿಜೆಪಿಯ ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಆಮಂತ್ರಣ ನೀಡಿದ್ದರು. ಸರ್ಕಾರ ರಚಿಸಲು ಮ್ಯಾಜಿಕ್ ನಂಬರು ಇಲ್ಲದೆ ಇದ್ದರೂ ಸಹಿತ ಅವರಿಗೆ ಆಹ್ವಾನ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳ ಪಕ್ಷವು ಪಕ್ಷವು ಇದೇ ಸೂತ್ರವನ್ನು ಅನುಸರಿಸಿ ಗೋವಾ ಮತ್ತು ಬಿಹಾರದಲ್ಲಿ ತಮಗೆ ಪ್ರಸ್ತುತವಿರುವ ಸರ್ಕಾರವನ್ನು ವಿಸರ್ಜಿಸಿ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ಪಕ್ಷ ಬಹುಮತ ಇಲ್ಲದ ಕಾರಣದಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಲು ಮುಂದೆ ಬಂದಿದ್ದವು,ಜೊತೆಗೆ ಪತ್ರ ಸಮೇತ ಸರ್ಕಾರ ರಚನೆಯ ಹಕ್ಕುನ್ನು ರಾಜ್ಯಪಾಲರ ಬಳಿ ಮಂಡಿಸಿದ್ದರು. ಆದರೆ ರಾಜ್ಯಪಾಲರು ಮಾತ್ರ ಬಿಜೆಪಿಗೆ ಮಣೆ ಹಾಕಿದ್ದರು.ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಇದೇ ಮಾದರಿಯಲ್ಲಿ ಈಗ ಬಿಹಾರ್ ಮತ್ತು ಗೋವಾದಲ್ಲಿ ಸರ್ಕಾರ ರಚಿಸ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿವೆ.