Video: 5 ಸ್ಟಾರ್ ಹೋಟೆಲಿನಲ್ಲಿ BSP ನಾಯಕನ ಮಗನ ಗೂಂಡಾಗಿರಿ

ವಿಡಿಯೋ ವೈರಲ್ ಆದ ನಂತರ, ಆರ್.ಕೆ. ಪುರಂ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಅಕ್ಟೋಬರ್ 14ರಂದು ನಡೆದಿದೆ ಎಂದು ತಿಳಿದು ಬಂದಿದೆ.

Last Updated : Oct 16, 2018, 01:59 PM IST
Video: 5 ಸ್ಟಾರ್ ಹೋಟೆಲಿನಲ್ಲಿ BSP ನಾಯಕನ ಮಗನ ಗೂಂಡಾಗಿರಿ title=

ನವದೆಹಲಿ: ದೆಹಲಿಯ ಐದು ಪಂಚತಾರಾ ಹೋಟೆಲ್ ನಲ್ಲಿ ನಡೆದಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ಬಹುಜನ ಸಮಾಜವಾದಿ ಪಕ್ಷ(BSP)ದ ಮಾಜಿ ಸಂಸದನ ಮಗ ಪಿಸ್ತೂಲ್ ಹಿಡಿದು ಧಮ್ಕಿ ಹಾಕಿರುವ ಘಟನೆ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ನಡೆದಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಆದಾಗ್ಯೂ, ಈ ವಿಷಯದಲ್ಲಿ ಹೋಟೆಲ್ನಿಂದ ಯಾವುದೇ ದೃಢೀಕರಣವಿಲ್ಲ. ವಿಡಿಯೋ ವೈರಲ್ ಆದ ನಂತರ, ಆರ್.ಕೆ. ಪುರಂ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಅಕ್ಟೋಬರ್ 14ರಂದು ನಡೆದಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ. ಅಂಬೇಡ್ಕರ್ ನಗರದಿಂದ ಬಿಎಸ್ಪಿ ಸಂಸದ ರಾಕೇಶ್ ಪಾಂಡೆಯವರ ಪುತ್ರ ಆಶಿಶ್ ಪಾಂಡೆ ಗನ್ ಹಿಡಿದು ಜನರನ್ನು ಹೆದರಿಸಿರುವ ವ್ಯಕ್ತಿ ಎಂದು ಹೇಳಲಾಗಿದೆ. ಆರೋಪಿ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಲಕ್ನೋದಲ್ಲಿ ವಾಸಿಸುತ್ತಿದ್ದಾರೆಂದು ಹೇಳಲಾಗಿದೆ. ಆರೋಪಿಗಳನ್ನು ಹಿಡಿಯಲು ಅವರನ್ನು  ಹುಡುಕಿಕೊಂಡು ದೆಹಲಿ ಪೊಲೀಸರು ಲಕ್ನೌಗೆ ತೆರಳಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಮೂಲಗಳ ಪ್ರಕಾರ, ಆಶಿಶ್ ಪಾಂಡೆ ಹುಡುಗಿಯರೊಂದಿಗೆ ಹೋಟೆಲ್ ಹಯಾಟ್ಗೆ ಹೋಗಿದ್ದರು. ನಶೆಯಲ್ಲಿದ್ದ ಒಬ್ಬ ವ್ಯಕ್ತಿ ಮಹಿಳೆಯರ ಶೌಚಾಲಯದೊಳಗೆ ಪ್ರವೇಶಿಸಿದರು. ಅಲ್ಲಿ ಹುಡುಗಿಯರು ಅದನ್ನು ವಿರೋಧಿಸಿದರು. ಆದ್ದರಿಂದ ಆರೋಪಿಗಳು ಅಲ್ಲಿ ಜಗಳವಾಡಲು ಆರಂಭಿಸಿದರು. ಇದರ ನಂತರ ಆರೋಪಿ ಮಹಿಳೆಗೆ ಬೆದರಿಕೆ ಹಾಕಿದರು.

ಈ ಘಟನೆಯ ವೈರಲ್ ವೀಡಿಯೊದಲ್ಲಿ, ಆಶೀಶ್ ತನ್ನ ಕಾರಿನಿಂದ ಪಿಸ್ತೂಲ್ ತೆಗೆದುಕೊಂಡು ನಂತರ ಹೋಟೆಲ್ ಗೇಟ್ನಲ್ಲಿ ಕಪಲ್ ಕಡೆಗೆ ನೋಡಿದನು. ನಂತರ ಅವರು ಕಪಾಲ್ ನನ್ನು ನಿಂದಿಸಲು ಪ್ರಾರಂಭಿಸುತ್ತಾರೆ. ನಂತರ ಅವರಿಗೆ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಕಾರಿನಲ್ಲಿರುವ ಹುಡುಗಿಯರನ್ನು ವೀಡಿಯೊ ಚಿತ್ರೀಕರಣ ಮಾಡುತ್ತಾ ದಂಪತಿಗೆ ಬೆದರಿಕೆ ಹಾಕುತ್ತಿದ್ದಾರೆ. ಸುಮಾರು ಎರಡು ನಿಮಿಷಗಳ ಕಾಲ, ಆಶಿಶ್ ಮತ್ತು ಅವನ ಜೊತೆಗಿನ ಹುಡುಗಿಯರು ದಂಪತಿಗೆ ಬೆದರಿಕೆ ಹಾಕುತ್ತಿದ್ದಾರೆ. ಆಶೀಶ್ ಪಿಸ್ತೂಲ್ ಅನ್ನು ಕೈಯಲ್ಲಿ ಇಟ್ಟುಕೊಂಡು ಸ್ವಲ್ಪ ಸಮಯದ ನಂತರ, ದಂಪತಿಗಳಿಗೆ ಬೆದರಿಕೆಯೊಡ್ಡುವ ಮೂಲಕ ಅವರು ಅಲ್ಲಿಂದ ದೂರ ಹೋಗುತ್ತಾರೆ.

ಈ ವಿಷಯದ ಬಗ್ಗೆ ಮಾಹಿತಿ ನೀಡುವ ವೇಳೆ ಹೋಟೆಲ್ ಕಡೆಯಿಂದ ಈ ಬಗ್ಗೆ ಯಾವುದೇ ದೂರುಗಳನ್ನು ಸಲ್ಲಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವೀಡಿಯೊ ವೈರಲ್ ನಂತರ, ಆರ್.ಕೆ.ಪುರಂ ಪೊಲೀಸರು ಅವರು ಆರ್ಮ್ಸ್ ಆಕ್ಟ್ ಮತ್ತು ಶಾಂತಿಭಂಗ ಆಕ್ಟ್ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಮೂಲಕ ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಗುರುತಿಸಲಾಗಿದೆ, ಅವರನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. 

Trending News