ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿ ಅವರೇ ಸಿದ್ದಪಡಿಸಿದ ಪ್ರಚಾರದ ತಂತ್ರ-ಬಿಜೆಪಿ ನಾಯಕ

   

Last Updated : Jul 18, 2018, 04:23 PM IST
ಸ್ವಾಮಿ ಅಗ್ನಿವೇಶ್ ಮೇಲಿನ ದಾಳಿ ಅವರೇ ಸಿದ್ದಪಡಿಸಿದ ಪ್ರಚಾರದ ತಂತ್ರ-ಬಿಜೆಪಿ ನಾಯಕ title=
Photo courtesy: ANI

ರಾಂಚಿ :ಸ್ವಾಮಿ ಅಗ್ನಿವೇಶ್ ಅವರು ತಮ್ಮ ಮೇಲೆ ನಡೆದ ದಾಳಿಯನ್ನು ಸ್ವತ ಅವರೇ ನಿರ್ಮಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಚಂದರೇಶ್ವರ ಪ್ರಸಾದ್ ಸಿಂಗ್ ತಿಳಿಸಿದ್ದಾರೆ.

ಸ್ವಾಮಿ ಅಗ್ನಿವೇಶ್ ಅವರು ಈಗ ಅಪ್ರಸ್ತುತರಾಗಿದ್ದಾರೆ ಇದು ಅವರಿಗೂ ಸಹಿತ ತಿಳಿದಿದೆ. ಆದ್ದರಿಂದ ಪೂರ್ವ ಯೋಚಿತವಾಗಿ ಅವರೇ ಇದನ್ನು ತಮ್ಮ ಪಾಪುಲಾರಿಟಿಗಾಗಿ  ಈ ದಾಳಿ ಮಾಡಿಸಿಕೊಂಡಿದ್ದಾರೆ. ಈ ವ್ಯಕ್ತಿ ವಿದೇಶಿ ಹಣದಿಂದಾಗಿ  ಭಾರತದ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ.ಆದ್ದರಿಂದ ಈ ದಾಳಿಗಾಗಿ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವುದರ ಕುರಿತಾಗಿ ತನಿಖೆಯನ್ನು ನಡೆಸಬೇಕು ಎಂದು ಅವರು ತಿಳಿಸಿದರು 

ಮಂಗಳವಾರದಂದು ಪಾಕುರ್ ಜಿಲ್ಲೆಯಲ್ಲಿ  ಸ್ವಾಮಿ ಅಗ್ನಿವೇಶ್ ಅವರು ಬಿಜೆಪಿ ಕಾರ್ಯಕರ್ತರು ಗುಂಪೊಂದು ಮಾರಣಾಂತಿಕ ಹಲ್ಲೆಯನ್ನು ನಡೆಸಿತ್ತು.

ಚಂದರೇಶ್ವರ ಪ್ರಸಾದ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ "ಅಗ್ನಿವೇಶ್  ಧರಿಸಿರುವ ಕೇಸರಿ ಉಡುಗೆ ಭಾರತೀಯರನ್ನು ಮೋಸಗೊಳಿಸಲು, ಅವರೊಬ್ಬ ಮೋಸಗಾರ ಆದರೆ ಸ್ವಾಮಿ ಅಲ್ಲ" ಎಂದು ಸಿಂಗ್ ಆರೋಪಿಸಿದ್ದಾರೆ.ಅಗ್ನಿವೇಶ್ ಮೇಲೆ ದಾಳಿ ಮಾಡಿದವರು ತಮ್ಮ ಪಕ್ಷಕ್ಕೆ ಯಾವುದೇ ರೀತಿಯಿಂದಲೂ ಸಂಬಂಧ ಹೊಂದಿಲ್ಲ ಎಂದು ಬಿಜೆಪಿ ತಿಳಿಸಿದೆ.
 

Trending News