ರಾಜಸ್ತಾನ್ ನಾಗರಿಕ ಸೇವಾ ಪರೀಕ್ಷೆಯಲ್ಲಿನ್ನು ಭಗವದ್ಗೀತೆ!

    

Last Updated : Apr 16, 2018, 05:38 PM IST
ರಾಜಸ್ತಾನ್ ನಾಗರಿಕ ಸೇವಾ ಪರೀಕ್ಷೆಯಲ್ಲಿನ್ನು ಭಗವದ್ಗೀತೆ! title=
ಸಾಂದರ್ಭಿಕ ಚಿತ್ರ

ಜೈಪುರ್: ರಾಜಸ್ತಾನ ನಾಗರಿಕ ಸೇವಾ ಪರೀಕ್ಷೆ 2018 ಪಠ್ಯಕ್ರಮದಲ್ಲಿ ಸಾಮಾನ್ಯ ಜ್ಞಾನದ ಪತ್ರಿಕೆಯಲ್ಲಿ  ಭಗವದ್ಗೀತೆಯಿಂದ ಕೆಲವು ಆಯ್ದ ಭಾಗಗಳನ್ನು ಆಯ್ದ ಭಾಗಗಳು 'ನೀತಿಶಾಸ್ತ್ರ' ಎಂಬ ಹೊಸ ಘಟಕದ ಮೂಲಕ ಸೇರಿಸಲಾಗಿದೆ. 

ಪಠ್ಯಕ್ರಮದಲ್ಲಿ ಭಗವದ್ಗೀತೆಯೊಂದಿಗೆ, ಮಹಾತ್ಮ ಗಾಂಧಿಯವರ ಜೀವನ, ರಾಷ್ಟ್ರೀಯ ನಾಯಕರು , ಸಾಮಾಜಿಕ ಸುಧಾರಕರು ಮತ್ತು ಆಡಳಿತಾಧಿಕಾರಿಗಳ ಜೀವನ ಚಿತ್ರಣವನ್ನು ಒಳಗೊಂಡಿದೆ.

ಆರ್.ಎ.ಎಸ್ 2018 ರ ಪರೀಕ್ಷೆಗಾಗಿ ತಯಾರಿ ನಡೆಸುವವರಿಗೆ ನಿರ್ವಹಣೆ ಮತ್ತು ಆಡಳಿತಾತ್ಮಕ ಪ್ರಶ್ನೆಗಳನ್ನು ಕೇಳಬಹುದು. ಈ ಸೇವಾ ಪರೀಕ್ಷೆಯ ಪಠ್ಯಕ್ರಮದಲ್ಲಿ ಕುರುಕ್ಷೇತ್ರಯುದ್ದಲ್ಲಿ  ಕೃಷ್ಣ ಮತ್ತು ಅರ್ಜುನ್ ನಡುವಿನ ಸಂವಾದಕ್ಕೆ ಸಂಬಂಧಿಸಿದ 18 ಅಧ್ಯಾಯಗಳನ್ನು ನಿಗದಿಪಡಿಸಲಾಗಿದೆ.ಆದ್ದರಿಂದ, ಇನ್ನು ಮುಂದೆ ಪರೀಕ್ಷೆಗಾಗಿ ತಯಾರಿ ನಡೆಸುವ ಅಭ್ಯರ್ಥಿಗಳುಇನ್ನು ಮುಂದೆ ಪುಸ್ತಕವನ್ನು ಸಂಪೂರ್ಣವಾಗಿ ಭಗವದ್ಗೀತೆ ಓದಬೇಕಾಗಿದೆ.

ರಾಜಸ್ಥಾನ ನಾಗರಿಕ ಸೇವಾ ಆಯೋಗವು 2018 ರ ಬಡ್ತಿಗಾಗಿ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿದೆ.ಅರ್ಜಿ ಸಲ್ಲಿಸುವುವ ಪ್ರಕ್ರಿಯೆಯನ್ನು ಇದೆ ಏಪ್ರಿಲ್ 12ರಿಂದ ಪ್ರಾರಂಭಿಸಿದೆ.

Trending News