ಹಿಂದು ಮಹಾಸಭಾ ಕ್ಯಾಲೆಂಡರ್ನಲ್ಲಿ ಕುತುಬ್ ಮಿನಾರ್ ವಿಷ್ಣು ಸ್ತಂಭವಾದಾಗ!

     

Last Updated : Mar 20, 2018, 08:43 AM IST
ಹಿಂದು ಮಹಾಸಭಾ ಕ್ಯಾಲೆಂಡರ್ನಲ್ಲಿ ಕುತುಬ್ ಮಿನಾರ್ ವಿಷ್ಣು ಸ್ತಂಭವಾದಾಗ! title=

ನವದೆಹಲಿ: ಹಿಂದೂ ಮಹಾಸಭಾ ಬಿಡುಗಡೆಯಾದ ಕ್ಯಾಲೆಂಡರ್ ನಲ್ಲಿ ಐತಿಹಾಸಿಕ ಸ್ಮಾರಕಗಳನ್ನು ಮರು ನಾಮಕರಣ ಮಾಡುವುದರ ಮೂಲಕ ವಿವಾದವನ್ನು ಸೃಷ್ಟಿಸಿದೆ.

ಈ ಕ್ಯಾಲೆಂಡರ್ ನಲ್ಲಿ  ಕುತುಬ್ ಮಿನಾರ್ ನ್ನು ವಿಷ್ಣು ಸ್ತಂಬ ಎಂದು , ತಾಜ್ ಮಹಲ್ ನ್ನು  ತೇಜೋ ಮಹಾಲೇಯ್ ಶಿವ ಮಂದಿರ ಎಂದು ಅದೇ ರೀತಿಯಾಗಿ ಕಾಶಿಯ ಜ್ಞಾನವೈಪಿ ಮಸೀದಿಯನ್ನು 'ವಿಶ್ವನಾಥ ದೇವಾಲಯ' ವೆಂದು ಮರುನಾಮಕರಣಗೊಳಿಸಿದೆ.

ಈ ಕ್ಯಾಲೆಂಡರ್ ಹಿಂದೂ ಮಹಾಸಭಾದ ಆಲಿಘರ್ ಘಟಕದಿಂದ ಬಿಡುಗಡೆಯಾಗಿದ್ದು , ಈಗ ಹಲವು ಭಾರತೀಯ ಸ್ಮಾರಕಗಳ ಹೆಸರನ್ನು ಬದಲಾಯಿಸಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ವಿಶ್ವಪ್ರಸಿದ್ಧ ಕುತುಬ್ ಮಿನಾರ್ ತುಬ್ ಮತ್ತು ತಾಜ್ ಮಹಲ್  ಹೊರತಾಗಿ, ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿಯನ್ನು ಭೋಜಶಾಲಾ ಮತ್ತು ಜಾನ್ಪುರದ ಅಟಾಲಾ ಮಸೀದಿ ಎಂದು ಹೆಸರಿಸಿದೆ., 1992 ರಲ್ಲಿ ಬಾಬರಿ ಮಸೀದಿಯನ್ನು ರಾಮ ಜನ್ಮಭೂಮಿ ಎಂದು ಹೆಸರಿಸಿದೆ. 

ಕೇವಲ ಇಷ್ಟೇ ಅಲ್ಲದೆ ಕ್ಯಾಲೆಂಡರ್  ಮುಸ್ಲಿಂ ರ ಪವಿತ್ರ ಸ್ಥಳ ಮೆಕ್ಕಾವನ್ನು   ಹೋಗುತ್ತದೆ - ಪವಿತ್ರ ಮುಸ್ಲಿಂ ಮಕೇಶ್ವರ್ ಮಹಾದೇವ್ ಮಂದಿರ ಎಂದು ಪುನರ್ ನಾಮಕರಣಗೊಳಿಸಿದೆ.

Trending News