ರಾಮಮಂದಿರ ನಿರ್ಮಿಸದಿದ್ದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲಾಗುತ್ತದೆ-ಶಿವಸೇನಾ ಎಚ್ಚರಿಕೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ಶಿವಸೇನೆ "ಒಂದು ವೇಳೆ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ವಿಫಲವಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲಾಗುತ್ತದೆ "ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಎಚ್ಚರಿಕೆ ನೀಡಿದೆ.

Last Updated : Oct 9, 2018, 05:40 PM IST
 ರಾಮಮಂದಿರ ನಿರ್ಮಿಸದಿದ್ದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲಾಗುತ್ತದೆ-ಶಿವಸೇನಾ ಎಚ್ಚರಿಕೆ title=

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ಶಿವಸೇನೆ "ಒಂದು ವೇಳೆ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ವಿಫಲವಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯಲಾಗುತ್ತದೆ "ಎಂದು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಎಚ್ಚರಿಕೆ ನೀಡಿದೆ.
.
ಶಿವಸೇನೆಯ ಮುಖವಾಣಿ ಸಾಮ್ನಾದ ತನ್ನ ಸಂಪಾದಕೀಯದಲ್ಲಿ "ರಾಮ ಮಂದಿರ ಬನಾವೋ, ನಹಿ ತೊ ರಾಮ್ ನಾಮ್ ಸತ್ಯ ಹೈ," ಎನ್ನುವ ಶೀರ್ಷಿಕೆ ಅಡಿಯಲ್ಲಿ ಅದು ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತದೆ ಎಂದು ನಾವು ಭಾವಿಸಿದ್ದೆವು ಆದರೆ ಅದಾಗಲಿಲ್ಲ . ಈ ವಿಚಾರವಾಗಿ ಈಗ ಪ್ರಧಾನಿ ಮೋದಿ ಮತ್ತು ಇತರ ಹಿಂದುತ್ವದ ಜನರು ಯಾವ ಮಾತನ್ನು ಆಡುತ್ತಿಲ್ಲ.ಆದರೆ ಈಗ ರಾಮಮಂದಿರದ ವಿಷಯವನ್ನು ಕೇವಲ ಚುನಾವಣೆಯ ವಿಷಯವಾಗಿ ಮಾರ್ಪಡಿಸಲಾಗಿದೆ ಎಂದು ಸಂಪಾದಕೀಯ ತಿಳಿಸಿದೆ.

Trending News