ಶಾಕಿಂಗ್ ನ್ಯೂಸ್: ಕುಡಿಯಲು ದುಡ್ಡು ಕೊಡಲಿಲ್ಲ ಅಂತ ತಾಯಿಗೇ ಬೆಂಕಿ ಹಾಕಿದ ಮಗ!

ಆರೋಪಿಯನ್ನು ಬೆಂಗಳೂರಿನ ಅಶ್ವಥನಗರದ ನಿವಾಸಿ ಉತ್ತಮ್ ಕುಮಾರ್(20) ಎಂದು ಗುರುತಿಸಲಾಗಿದ್ದು, ಸದಾಶಿವ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Last Updated : Dec 10, 2018, 12:00 PM IST
ಶಾಕಿಂಗ್ ನ್ಯೂಸ್: ಕುಡಿಯಲು ದುಡ್ಡು ಕೊಡಲಿಲ್ಲ ಅಂತ ತಾಯಿಗೇ ಬೆಂಕಿ ಹಾಕಿದ ಮಗ! title=

ಬೆಂಗಳೂರು: ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಕಾರಣಕ್ಕೆ ಮಗನೇ ತಾಯಿಗೆ ಬೆಂಕಿ ಹಚ್ಚಿದ ಧಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಬೆಂಗಳೂರಿನ ಅಶ್ವಥನಗರದ ನಿವಾಸಿ ಉತ್ತಮ್ ಕುಮಾರ್(20) ಎಂದು ಗುರುತಿಸಲಾಗಿದ್ದು, ಸದಾಶಿವ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಚಂದನ್‌ಕುಮಾರ್‌ ಮದ್ಯ ಸೇವನೆಗಾಗಿ ಡಿ. 6ರಂದು ಹಣ ಕೇಳಿದ್ದ. ತಾಯಿ ಹಣ ಕೊಡಲು ನಿರಾಕರಿಸಿದ್ದರು. ಬಳಿಕ ಇಬ್ಬರ ನಡುವೆ ಸಾಕಷ್ಟು ವಾದ ವಿವಾದಗಳು ನಡೆದಿದೆ. ಇದರಿಂದ ಕೋಪಗೊಂಡ ಮಗ, ತನ್ನ ಬೈಕೈನಲ್ಲಿದ್ದ ಪೆಟ್ರೋಲ್‌ ತೆಗೆದುಕೊಂಡು ಬಂದು ತಾಯಿಯ ಮೇಲೆ ಎರಚಿದ್ದಲ್ಲದೆ ಲೈಟರ್‌ನಿಂದ ಬೆಂಕಿ ಹಚ್ಚಿದ್ದ. ಇದರಿಂದ ತಾಯಿಯ ಮುಖ, ಕೈ ಮತ್ತು ದೇಹದ ಇತರ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. 
 

Trending News