BMRCL Update: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸುಮಾರು ಒಂದು ಕಿ.ಲೋ ಮೀಟರ್ ಉದ್ದ ರಸ್ತೆಯಷ್ಟು ಇದೇ ಏಪ್ರಿಲ್ 1 ರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
BMRCL RECRUITMENT 2023: BMRCL ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಇದರ ಅಂಗವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜುಲೈ 22, 23 ಮತ್ತು 30ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ.
ಬೈಯಪ್ಪನಹಳ್ಳಿ, SV ರಸ್ತೆ, ಕೃಷ್ಣರಾಜಪುರ, ವೈಟ್ ಫೀಲ್ಡ್ ಬೆಳಗ್ಗೆ 5 ಗಂಟೆಯಿಂದ ಬೆ.7 ಗಂಟೆವರೆಗೆ ಮೆಟ್ರೋ ಸ್ಥಗಿತ ಮೆಟ್ರೋ ವ್ಯತ್ಯಯದ ಬಗ್ಗೆ BMRCLನಿಂದ ಪ್ರಕಟಣೆ ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ
ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ದುರಂತ ಪ್ರಕರಣ. 10 ದಿನಗಳ ನಂತರ ಘಟನೆಗೆ ಕಾರಣ ಸಾಬೀತು. ನಾಳೆ ತಪ್ಪಿತಸ್ಥರ ವಿರುದ್ಧ ಆಗುತ್ತಾ ಕಠಿಣ ಕ್ರಮ..!? ನಾಳೆ BMRCL ಅಧಿಕಾರಿಗಳನ್ನ ಭೇಟಿ ಮಾಡಲಿರೋ IISc. ಪ್ರಕರಣದ ವರದಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ.
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ. ದುರಂತಕ್ಕೆ ಎಂಜಿನಿಯರ್ಗಳು, ಗುತ್ತಿಗೆದಾರರ ನಿರ್ಲಕ್ಷ್ಯವೇ..? ಪ್ರಕರಣದ ಬಗ್ಗೆ IISCಯಿಂದ ನಡೆಯಲಿದೆ ತನಿಖೆ. ಘಟನೆಗೆ ನಿಜವಾದ ಕಾರಣ ಏನು ಎನ್ನುವ ಬಗ್ಗೆ IISCಯಿಂದ ತನಿಖೆ. ಭಾರತೀಯ ವಿಜ್ಞಾನ ಸಂಸ್ಥೆ ಮೂಲಕ ತನಿಖೆ ನಡೆಸಲಿರೋ BMRCL.
Metro Pillar Collapse Case: ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈಗಲೇ ಯಾರದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
Metro pillar collapses: ತಾಯಿ ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತ ದುರ್ದೈವಿಗಳು. ಇಂದು ಬೆಳಗ್ಗೆ 10.30 ರ ಸುಮಾರಿಗೆ ಪತಿ ಲೋಹಿತ್ ಜೊತೆ ತೇಜಸ್ವಿನಿ ಹಾಗೂ ಅವಳಿ ಮಕ್ಕಳು ತೆರಳುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಕುಟುಂಬದ ಮೇಲೆ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದು ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ವಿನಿ ಹಾಗೂ ವಿಹಾನ್ ಮೃತಪಟ್ಟಿದ್ದಾರೆ
ಪ್ರಯಾಣಿಕರಿಂದ ಆಟೋ ಚಾಲಕರ ಬೇಕಾಬಿಟ್ಟಿ ಸುಲಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಾಗೂ BMRCL ಯೋಜನೆ ರೂಪಿಸಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೆಟ್ರೋ ನಿಲ್ದಾಣದ ಎದುರು ಪ್ರೀಪೇಯ್ಡ್ ಆಟೋ ನಿಲ್ದಾಣವನ್ನು ಆರಂಭಿಸಲು ಪ್ಲಾನ್ ಮಾಡಲಾಗುತ್ತಿದೆ.
Namma Metro Service Extension Till 2am on New Year 2023: ಡಿ.31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೊ ಸಂಚಾರ ಇರಲಿದೆ. ಕೊನೆಯ ಮೆಟ್ರೊ ಸಂಚಾರ ರಾತ್ರಿ 2 ಗಂಟೆಗೆ ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ. ಪ್ರತಿ 15 ನಿಮಿಷಕ್ಕೆ ಒಂದು ರೈಲು ಚಲಿಸಲಿದೆ ಎಂದು ಬಿಎಂಆರ್ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಸಂಕಷ್ಟದಿಂದ ನಷ್ಟಕ್ಕೆ ಸಿಲುಕಿದ್ದ ಮೆಟ್ರೋ ಸದ್ಯ ಚೇತರಿಸಿಕೊಂಡಿದೆ. ನಷ್ಟದ ಹೊಡೆತದಿಂದ ಹೊರಬಂದಿರುವ ನಮ್ಮ ಮೆಟ್ರೋ ಲಾಭದಲ್ಲಿದೆ. ಸದ್ಯ 6 ಕೋಟಿ ರೂ. ಲಾಭದಲ್ಲಿದೆ ಮೆಟ್ರೋ. ಸಾರ್ವಜನಿಕ ಸಾರಿಗೆ ಪೈಕಿ ಬಿಎಮ್ಆರ್ಸಿಎಲ್ ಮಾತ್ರ ಲಾಭದಲ್ಲಿದೆ. ಪ್ರತಿ ನಿತ್ಯ 5 ಲಕ್ಷ ಪ್ರಯಾಣಿಸುತ್ತಿದ್ದಾರೆ, ಸುಮಾರು 1 ಕೋಟಿ 20 ರೂ. ಸಂಗ್ರಹ, ತಿಂಗಳಿಗೆ 36 ಕೋಟಿ ರೂ. ಮೆಟ್ರೋ ಬೊಕ್ಕಸಕ್ಕೆ ಬೀಳುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.