ಜಗತ್ತಿನ ಗಮನ ಸೆಳೆದ ಯಾರು ಈ ಗ್ರೇಟಾ ಥನ್ಬರ್ಗ್..!
ಹಿಂದೆಂದಿಗಿಂತಲೂ ಜಾಗತಿಕ ಹವಾಮಾನ ಬದಲಾವಣೆ ವಾಪಕ ಪರಿಣಾಮ ಬೀರುತ್ತಿದೆ, ಭೂಮಿ ಮೇಲೆ ಅನೇಕ ವನ್ಯ ಜೀವಿಗಳು ಹಾಗೂ ಸಂತತಿಗಳು ಕಾಣೆಯಾಗುತ್ತಿವೆ, ಉತ್ತರ ಧ್ರುವದಲ್ಲಿ ಹಿಮ ಗಡ್ಡೆಗಳು ಕರುಗುತ್ತಿವೆ, ಅಮೆಜಾನ್ ಕಾಡುಗಳು ಕಾಡ್ಗಿಚ್ಚಿನಿಂದ ನಾಶವಾಗುತ್ತಿವೆ, ಅದೇ ರೀತಿಯಾಗಿ ಪ್ರವಾಹ ಹಾಗೂ ಬರ ಎನ್ನುವುದು ಸಾಮಾನ್ಯ ಎನ್ನುವಂತಾಗಿದೆ. ಹೀಗೆ ಜಾಗತಿಕ ಹವಾಮಾನ ಬದಲಾವಣೆಯ ಪರಿಣಾಮ ಮಾತ್ರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ.ಈ ಎಲ್ಲ ಪರಿಣಾಮಗಳು ಮಾನವ ನಿರ್ಮಿತ ಕೃತಕ ಸೃಷ್ಟಿಗಳಾಗಿವೆ.
ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಕುರಿತ ಆಸಕ್ತಿಕರ ಸಂಗತಿಗಳು
ಆಧುನಿಕ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ಜನಪ್ರಿಯತೆಯನ್ನು ಪಡೆದವರು. ಇದರ ಜೊತೆಗೆ ಅವರೊಬ್ಬ ಅಪ್ಪಟ ಸ್ತ್ರೀವಾದಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಸಾಮಾಜಿಕ ಸುಧಾರಕಿಯಾಗಿದ್ದರು. ಸಾವಿತ್ರಿಬಾಯಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಬಾಲಕಿಯರ ಮೊದಲ ಶಾಲೆಯನ್ನು ಪ್ರಾರಂಭಿಸಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದರು.
ಚಂದ್ರಯಾನ-2 ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು
ಭಾರತದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ-2, ಇಂದು ಸರಿ ಸುಮಾರು ಮಧ್ಯಾಹ್ನ 2.43 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಆ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಖ್ಯಾತಿಯನ್ನು ಪಡೆದಿದೆ. ಚಂದ್ರಯಾನ ತನ್ನ ಗುರಿಯನ್ನು ಸಾಧಿಸಲು 54 ದಿನಗಳನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಎರಡು ದಶಕಗಳ ನಂತರ ಮುಂಬೈ ಕರ್ನಾಟಕಕ್ಕೆ ಒಲಿದ ಕ್ಯಾಬಿನೆಟ್ ದರ್ಜೆ ಭಾಗ್ಯ.!
ಪ್ರಧಾನಿ ನರೇಂದ್ರ ಮೋದಿಯವರ ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ ಧಾರವಾಡದ ಸಂಸದ ಪ್ರಹ್ಲಾದ ಜೋಶಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ದೊರೆತಿದೆ. ಆ ಮೂಲಕ ಬರೋಬ್ಬರಿ ಎರಡು ದಶಕಗಳ ನಂತರ ಮುಂಬೈ ಕರ್ನಾಟಕದ ಭಾಗಕ್ಕೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಒಲಿದು ಬಂದಿದೆ.
'ನಾನು ಒಪ್ಪುವುದಿಲ್ಲ' ಲೋಕ' ಫಲಿತಾಂಶದ ಮೇಲೆ ಮಮತಾ ಬ್ಯಾನರ್ಜೀ ಕವಿತೆ
ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ದೇಶಾದ್ಯಂತ ಜಯಭೇರಿ ಗಳಿಸಿದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಬಂಗಾಳಿ, ಹಿಂದಿ, ಹಾಗೂ ಇಂಗ್ಲೀಶ್ ನಲ್ಲಿ 'ನಾನು ಒಪ್ಪುವುದಿಲ್ಲ' ಎನ್ನುವ ಶೀರ್ಷಿಕೆ ಅಡಿಯಲ್ಲಿ ಕವಿತೆ ಬರೆದಿದ್ದಾರೆ.ಈಗ ಇದನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
1996 ರಲ್ಲಿನ ಸೂತ್ರದನ್ವಯ ದಕ್ಷಿಣದಿಂದಲೇ ಈ ಬಾರಿ ಪ್ರಧಾನಿ... !
ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಧಾನಿಯನ್ನು ದಕ್ಷಿಣ ಭಾರತದಿಂದಲೇ ಆಯ್ಕೆ ಮಾಡುವ ನಿಟ್ಟಿನಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ದಕ್ಷಿಣ ಭಾರತದ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದಾರೆ.ಆ ನಿಟ್ಟಿನಲ್ಲಿ ಈಗ ಸರಣಿ ಸಭೆಯಗಳನ್ನು ಪ್ರಮುಖ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಯೋಧ ತೇಜ್ ಬಹದೂರ್ ಯಾದವ್ ನಾಮಪತ್ರ ರದ್ದು
ವಾರಾಣಸಿ ಲೋಕಸಭಾ ಕ್ಷೇತ್ರಕ್ಕೆ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ಯಾದವ್ ಅವರ ಅರ್ಜಿಯನ್ನು ಚುನಾವಣಾ ಆಯೋಗ ರದ್ದು ಪಡಿಸಿದೆ.ತೇಜ್ ಬಹದ್ದೂರ್ ಯಾದವ್ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಚುನಾವಣಾ ಆಯೋಗವು ಕೆಲವು ದಾಖಲೆಗಳನ್ನು ನೀಡಲು ಅಂತಿಮ ಗಡುವು ನೀಡಿತ್ತು.ಈಗ ಈ ಗಡುವು ಮೀರಿದ ಹಿನ್ನಲೆಯಲ್ಲಿ ಅವರ ಅರ್ಜಿಯನ್ನು ಆಯೋಗವು ರದ್ದು ಪಡಿಸಿದೆ.