ಕಾರ್ಮಿಕ ಸಚಿವರೇ ಗಮನಿಸಿ! ಯುವಕರಿಗೆ ಅನ್ಯಾಯ, ಕನಿಷ್ಠ ವೇತನವೂ ಇಲ್ಲ, ಭರವಸೆ ನೀಡಿದ್ದ ಉದ್ಯೋಗವೂ ಇಲ್ಲ!

Labour News: ಭೂಮಿ ನೀಡಿದರೆ ಖಚಿತ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ರೈತರ ಭೂಮಿಯನ್ನೇ ಕಬಳಿಸಿದ್ದ ಕಾರ್ಖಾನೆ, ಇದೀಗ ಸ್ಥಳೀಯರನ್ನು ಕೆಲಸದಿಂದ ಕಿತ್ತೊಗೆದು ಹೊರ ರಾಜ್ಯಗಳಿಂದ ಕೆಲಸಕ್ಕೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದೆ. ಇದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಓದಲೇಬೇಕಾದ ಸುದ್ದಿ. 

Written by - Yashaswini V | Last Updated : Oct 8, 2025, 10:17 AM IST
  • ಕಾರ್ಮಿಕ ಸಚಿವರ ಜಿಲ್ಲೆಯಲ್ಲೇ ಸ್ಥಳೀಯ ಯುವಕರಿಗೆ ಅನ್ಯಾಯ
  • ಕಾರ್ಮಿಕ ಸಚಿವ ಸಂತೋಷ್ ಲಾಡ್ ತವರು ಜಿಲ್ಲೆಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡದ ಕಾರ್ಖಾನೆ
  • ಸ್ಥಳೀಯರಿಗೆ ಉದ್ಯೋಗ ಖಡಿತ ಮಾಡಿ, ಹೊರ ರಾಜ್ಯದ ಕಾರ್ಮಿಕರಿಗೆ ಕೆಲಸ ನೀಡಿದ ಕಂಪನಿ
ಕಾರ್ಮಿಕ ಸಚಿವರೇ ಗಮನಿಸಿ! ಯುವಕರಿಗೆ ಅನ್ಯಾಯ, ಕನಿಷ್ಠ ವೇತನವೂ ಇಲ್ಲ, ಭರವಸೆ ನೀಡಿದ್ದ ಉದ್ಯೋಗವೂ ಇಲ್ಲ!

Labour News: ಯುವಕರಿಗೆ ಉದ್ಯೋಗವನ್ನೂ ನೀಡದೆ, ಇರುವ ಸ್ಥಳೀಯ ನೌಕರರಿಗೆ ಕನಿಷ್ಠ ವೇತನವನ್ನೂ ಪಾವತಿಸದೆ, ಭೂಮಿ ನೀಡಿದ್ರೆ ಉದ್ಯೋಗ ಕೊಡ್ತಿವಿ ಅಂತ ನೀಡಿದ್ದ ಭರವಸೆಯನ್ನೂ ಈಡೇರಿಸದ ಕಾರ್ಖಾನೆ ಭೂಮಿ ಕೊಟ್ಟ ರೈತರಿಗೆ ಶಾಕ್ ನೀಡಿರುವ ಘಟನೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತವರು ಜಿಲ್ಲೆಯಲ್ಲಿ ನಡೆದಿದೆ.  

Add Zee News as a Preferred Source

ವಿಜಯನಗರದ ಹೊಸಪೇಟೆ ತಾಲೂಕಿನ ಹಾರುವನಹಳ್ಳಿ ಗ್ರಾಮದಲ್ಲಿರುವ ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿ, ಸ್ಥಳೀಯ 28 ಕಾರ್ಮಿಕರನ್ನ ಕೆಲಸದಿಂದ ವಜಾ ಮಾಡಿದ್ದು, ಇದೀಗ ಈ ಸ್ಥಾನಕ್ಕೆ ಹೊರ ರಾಜ್ಯದ ಬಿಹಾರದಿಂದ ಕಾರ್ಮಿಕರನ್ನ ಕರೆ ತಂದಿದೆ. ಸ್ಥಳೀಯ ಉದ್ಯೋಗಿಗಳನ್ನ ಕೆಲಸದಿಂದ ವಜಾ ಗೊಳಿಸಿರುವ ಪರಿಣಾಮ, ಉದ್ಯೋಗದ ಆಶಾಭಾವನೆಯಿಂದ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಆಘಾತವಾಗಿದೆ. 

ಕನಿಷ್ಠ ವೇತನವೂ ಇಲ್ಲ: 
ಕಾರ್ಮಿಕ ಕಾಯ್ದೆ ನಿಯಮವನ್ನೂ ಗಾಳಿಗೆ ತೂರಿರುವ ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿ, ಕಳೆದ 10-11 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಇಲ್ಲಿ ನೌಕರರಿಗೆ ತಿಂಗಳಿಗೆ ಕೇವಲ 8-9 ಸಾವಿರ ರೂ. ಮಾತ್ರ ವೇತನ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಸಾಯಿ ವಿಜಯ ಪ್ರಗತಿ ಸ್ಟೀಲ್ ಉದ್ಯೊಗ ಪ್ರೈ.ಲಿ.ಕಂಪನಿಯಲ್ಲಿ ಈ ಸಂಬಂಧ ಯಾರು ಪ್ರಶ್ನೆ ಮಾಡುತ್ತಾರೋ ಅಂತವರನ್ನ ಟಾರ್ಗೆಟ್ ಮಾಡಿ ಕೆಲಸದಿಂದ ವಜಾಗೊಳಿಸುವ ಶಿಕ್ಷೆ ನೀಡಲಾಗುತ್ತಿದೆ. ಕಂಪನಿಯ ನಡೆ ವಿರುದ್ಧ ಅಕ್ರೋಶ ಹೊರಹಾಕಿರುವ ರೈತರು ಕೂಡಲೇ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಇಲ್ಲಾಂದ್ರೆ ಕಾರ್ಖಾನೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಇನ್ನು ರೈತರ ಜಮೀನಿನ ಸನಿಹದಲ್ಲೇ ಕಾರ್ಖಾನೆ ಇರುವುದರಿಂದ ಕಾರ್ಖಾನೆಯಿಂದ ಹೊರಬರುವ ಧೂಳಿನಿಂದಾಗಿ ಅಕ್ಕ-ಪಕ್ಕದ ರೈತರ ಜಮೀನುಗಳಿಲ್ಲಿರುವ ಬೆಳೆಗಳಿಗ ಹಾನಿಯಾಗುತ್ತಿದೆ. ಆದರೂ, ಕೆಲಸ ಸಿಗುವ ಭರವಸೆಯಿಂದ ಈ ಕಾರ್ಖಾನೆಗೆ ಭೂಮಿ ನೀಡಲಾಗಿತ್ತು. ಆದರೆ, ಇತ್ತ ಸ್ಥಳೀಯರಿಗೆ ಕೆಲಸವನ್ನೂ ನೀಡದೆ, ಕನಿಷ್ಠ ವೇತನವನ್ನೂ ಪಾವತಿಸದೆ ಕಂಪನಿ ಭಾರೀ ಅನ್ಯಾಯ ಎಸಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾ.ಪಂ ಸದಸ್ಯ ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ. 

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News