ದುಬಾರಿ ದಂಡ ಕಟ್ಟೋಕೆ ರೆಡಿಯಾಗಿ: ಸಿಲಿಕಾನ್ ಸಿಟಿಯಲ್ಲಿ‌ ಮತ್ತೆ ಟೋಯಿಂಗ್ ಭೂತ..!?

Towing in Bengaluru: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಭೂತ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಷ್ಟೇಯಲ್ಲ, ಈ ಬಾರಿ ದಂಡದ ಪ್ರಮಾಣ ಕೂಡ ದುಬಾರಿಯಾಗಿರಲಿದೆ ಎನ್ನುವ ಮಾಹಿತಿಗಳು ಸಿಗುತ್ತಿವೆ. ಟೋಯಿಂಗ್ ಭೂತದ ಬಗೆಗಿನ ಬಿಗ್‌ ಅಪ್ಡೇಟ್ ಇಲ್ಲಿದೆ. 

Written by - Yashaswini V | Last Updated : Dec 10, 2025, 01:01 PM IST
  • ಈ ಬಾರಿ ಟೋಯಿಂಗ್ ವ್ಯವಸ್ಥೆ ವಿನೂತನ ರೀತಿಯಲ್ಲಿ ಬರಲಿದೆ.
  • ಇಷ್ಟು ದಿನ ಬೆಂಗಳೂರು ಟ್ರಾಫಿಕ್ ಪೊಲೀಸರು ಟೋಯಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು.
  • ಈಗ ನೇರವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ಟೋಯಿಂಗ್ ಮಾಡಿ ದಂಡ ವಿಧಿಸಲಿದೆ.
ದುಬಾರಿ ದಂಡ ಕಟ್ಟೋಕೆ ರೆಡಿಯಾಗಿ: ಸಿಲಿಕಾನ್ ಸಿಟಿಯಲ್ಲಿ‌ ಮತ್ತೆ ಟೋಯಿಂಗ್ ಭೂತ..!?

Towing in Bengaluru: ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟೋಯಿಂಗ್ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು ಮತ್ತು ವಿರೋಧ ಕೂಡ ವ್ಯಕ್ತವಾಗಿತ್ತು. ಸಾರ್ವಜನಿಕರು ಟೋಯಿಂಗ್ ಮಾಡುವುದರ ಬಗ್ಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಲನ್ನೂ ಏರಿತ್ತು. ಅದರ ನಂತರ ಟೋಯಿಂಗ್ ಮಾಡುತ್ತಿರಲಿಲ್ಲ. ಈಗ ಮತ್ತೆ ಟೋಯಿಂಗ್ ಶುರುವಾಗುತ್ತಿದೆ ಎನ್ನುವ ಮಾಹಿತಿಗಳು ಸಿಗುತ್ತಿವೆ.

Add Zee News as a Preferred Source

ಈ ಬಾರಿ ಟೋಯಿಂಗ್ ವ್ಯವಸ್ಥೆ ವಿನೂತನ ರೀತಿಯಲ್ಲಿ ಬರಲಿದೆ. ಇಷ್ಟು ದಿನ ಬೆಂಗಳೂರು ಟ್ರಾಫಿಕ್ ಪೊಲೀಸರು ಟೋಯಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಈಗ ನೇರವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವೇ ಟೋಯಿಂಗ್ ಮಾಡಿ ದಂಡ ವಿಧಿಸಲಿದೆ. ಎಲ್ಲೆಂದರಲ್ಲಿ ಗಾಡಿ ನಿಲ್ಲಿಸುವವರಿಗೆ ಡಬ್ಬಲ್ ಶಾಕ್ ಕಾದಿದೆ ಎಂದು ತಿಳಿದುಬರುತ್ತಿದೆ.

ಇದನ್ನೂ ಓದಿ- ಸದನದಲ್ಲೂ ನಾಟಿ ಕೋಳಿ ಸದ್ದು.. ಅಶೋಕ್‌ಗೆ ಸಿದ್ದು ಸವಿರುಚಿ ಪಾಠ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಪುನಃ ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಸದ್ದಿಲ್ಲದೆ ಟೋಯಿಂಗ್ ವ್ಯವಸ್ಥೆ ಜಾರಿಮಾಡಲು ಸಿದ್ಧತೆ ನಡೆಸಿರುವ ಗ್ರೇಟರ್ ಬೆಂಗಳೂರು ಅಥಾರಿಟಿ ಈಗಾಗಲೇ ಟೋಯಿಂಗ್ ವಾಹನ ಖರೀದಿಗೆ ಟೆಂಡರ್ ಕರೆದಿದೆ.

ಗ್ರೇಟರ್ ಬೆಂಗಳೂರು ಅಥಾರಿಟಿ ಜತೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಕೈಜೋಡಿಸಲಿದ್ದಾರೆ. ಈಗ ಗ್ರೇಟರ್ ಬೆಂಗಳೂರು ಅಥಾರಿಟಿ ಟೋಯಿಂಗ್ ಮಾಡಿದ್ರೆ ಎರಡುಪಟ್ಟು ದಂಡ ಕಟ್ಟಲೇಬೇಕಾಗುತ್ತದೆ. ದಂಡಕಟ್ಟಡ ವಾಹನಗಳನ್ನು ಕಸದ ಕ್ವಾರಿಗಳಲ್ಲಿ ಪಾರ್ಕ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಡಿಎ ಮೂಲಗಳು ತಿಳಿಸಿವೆ.

ಇದನ್ನೂ ಓದಿ- ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಬಾಯಿಗೆ ಬೀಗ ಹಾಕಿ ಎಂದು ಎಚ್ಚರಿಕೆ: ಕೈ ನಾಯಕರಿಗೆ ಹೈಕಮಾಂಡ್‌ ವಾರ್ನ್‌

ರಸ್ತೆ ಬದಿ ಅನಾವಶ್ಯಕವಾಗಿ ವಾಹನ ಪಾರ್ಕ್ ಮಾಡುವುದು ಮತ್ತು ಕಂಡಕಂಡಲ್ಲಿ ಪಾರ್ಕ್ ಮಾಡ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿ ಮಾಡುತ್ತಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News