)
Bengaluru Water Bill: ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಕೆಲ ದಿನಗಳಿಂದ ನಡೆಯುತ್ತಿರುವ ಖುರ್ಚಿ ಕಾಳಗದ ನಡುವೆ ಸಿದ್ದರಾಮಯ್ಯ ಸಚಿವ ಸಂಪುಟವು ಗುರುವಾರ(ನ.27) ನಡೆದ ಮಹತ್ವದ ಸಭೆಯಲ್ಲಿ ಬಿಡಬ್ಲ್ಯೂಎಸ್ಎಸ್ಬಿ ನೀರಿನ ಬಿಲ್ ಡೀಫಾಲ್ಟರ್ಗಳಿಗೆ (ಗೃಹ ಮತ್ತು ವಾಣಿಜ್ಯ) ಒಂದು ಬಾರಿಯ ಇತ್ಯರ್ಥ ಯೋಜನೆಗೆ ಅನುಮೋದನೆ ನೀಡಿದೆ.
ಜಲಮಂಡಳಿಯಿಂದ (OTS) ಒಂದು ಬಾರಿ ಪರಿಹಾರ ಯೋಜನೆ:
ಬಿಡಬ್ಲ್ಯೂಎಸ್ಎಸ್ಬಿ ನೀರಿನ ಬಿಲ್ ಡೀಫಾಲ್ಟರ್ಗಳಿಗೆ ಒಂದು ಬಾರಿಯ ಇತ್ಯರ್ಥ ಯೋಜನೆಯಲ್ಲಿ ಬೆಂಗಳೂರಿನಲ್ಲಿ ಇನ್ನೂ ನೀರಿನ ಬಿಲ್ ಪಾವತಿಸದವರಿಗೆ ದಂಡ ಅಥವಾ ಯಾವುದೇ ರೀತಿಯ BWSSB ಡೀಫಾಲ್ಟರ್ಗಳಿಗೆ ಬಡ್ಡಿ ಇಲ್ಲದೆ ಬಾಕಿ ಪಾವತಿಸಲು ಮೂರು ತಿಂಗಳ ಕಾಲಾವಕಾಶ ಬಡ್ಡಿಯಿಲ್ಲದೆ ತಮ್ಮ ಬಾಕಿ ಪಾವತಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಯಲ್ಲೋ ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್
ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ್, 1965ರ ಬೆಂಗಳೂರು ನೀರು ಸರಬರಾಜು ನಿಯಮಗಳನ್ನು ಸಡಿಲಿಸಲು ಮತ್ತು ನೀರಿನ ಬಿಲ್ ಬಾಕಿದಾರರು ದಂಡ ಅಥವಾ ಬಡ್ಡಿಯಿಲ್ಲದೆ ತಮ್ಮ ಬಾಕಿ ಪಾವತಿಸಲು ಅವಕಾಶ ನೀಡಲು ಸಂಪುಟ ನಿರ್ಧರಿಸಿದೆ. ಸರ್ಕಾರಿ ಇಲಾಖೆಗಳಲ್ಲಿನ ಬಾಕಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.
"ಬಿಡಬ್ಲ್ಯೂಎಸ್ಎಸ್ಬಿ ನೀರಿನ ಬಿಲ್ ಡೀಫಾಲ್ಟರ್ಗಳಿಂದ (ಗೃಹ ಮತ್ತು ವಾಣಿಜ್ಯ) ಒಟ್ಟು 701 ಕೋಟಿ ರೂ. ಬಾಕಿ ಉಳಿದಿದ್ದು, ಇದರಲ್ಲಿ 439 ಕೋಟಿ ರೂ. ಮೂಲ ಮೊತ್ತವೂ ಸೇರಿದೆ. ನಾವು ಅವರಿಗೆ ನೀರಿನ ಬಿಲ್ನ ಬಾಕಿ ಮೊತ್ತವನ್ನು ಪಾವತಿಸಲು ಮೂರು ತಿಂಗಳ ಕಾಲಾವಕಾಶ ನೀಡುತ್ತೇವೆ". ಈ ವಿಷಯಕ್ಕೆ ಸಂಬಂಧಿಸಿದಂತೆ ವಿವರವಾದ ಆದೇಶ ಹೊರಡಿಸಲಾಗುವುದು ಎಂದವರು ತಿಳಿಸಿದರು.
ಇದನ್ನೂ ಓದಿ- ಕಬ್ಬನ್ ಪಾರ್ಕ್ನಲ್ಲಿ ಪುಷ್ಪ ಮೇಳ ಆರಂಭ
ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದವರಿಗೆ ಭರ್ಜರಿ ಕೊಡುಗೆ:
ಎಲ್ಲಾ ಬಿಡಬ್ಲ್ಯೂಎಸ್ಎಸ್ಬಿ ಡೀಫಾಲ್ಟರ್ಗಳಿಂದ ಬಾಕಿ ಇರುವ ಮೊತ್ತ 701.71 ಕೋಟಿ ರೂ.ಗಳಾಗಿದ್ದು, ಇದರಲ್ಲಿ ರೂ. 439 ಕೋಟಿ ಅಸಲು ಮತ್ತು ರೂ. 262.68 ಕೋಟಿ ಬಡ್ಡಿ ಸೇರಿವೆ. "ಒಂದು ಬಾರಿಯ ಇತ್ಯರ್ಥವು ಬಿಡಬ್ಲ್ಯೂಎಸ್ಎಸ್ಬಿ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಬಡ್ಡಿಯನ್ನು ಮನ್ನಾ ಮಾಡಲಾಗಿರುವುದರಿಂದ ಸಾರ್ವಜನಿಕರಿಗೆ ರಿಯಾಯಿತಿ ಸಿಗುತ್ತದೆ" ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.