)
ಬೆಂಗಳೂರು : ಈ ಮುಖಗಳನ್ನು ಒಮ್ಮೆ ನೊಡ್ಕೊಂಡು ಬಿಡಿ. ಸರಿಯಾಗಿ ಮೀಸೆ ಸಹ ಬಂದಿಲ್ಲ. ಆದ್ರೂ ಇವರಿಗೆ ಕಳ್ಳತನ ಮಾಡೋ ಖಾಯಾಲಿ. ಅದು ಹಿಂದೂ ದೇವರ ಮೂರ್ತಿಗಳನ್ನು ಕದಿಯೋದು ಇವರ ಮೂಲ ಉದ್ದೇಶ.. ಅಸಲಿಗೆ ಮೂರ್ತಿಗಳನ್ನ ಏನ್ ಮಾಡ್ತಿದ್ರು..? ಇವುಗಳನ್ನೇ ಟಾರ್ಗೆಟ್ ಏಕೆ ಮಾಡಿದ್ರು..? ಬನ್ನಿ ನೋಡೋಣ..
ಹೌದು, ಇಂಥದೊಂದು ಶಾಕಿಂಗ್ ವಿಚಾರ ವರದಿಯಾಗಿರೋದು ಬೆಂಗಳೂರಿನ ಕಾಡುಗೋಡಿಯಲ್ಲಿ.ಉತ್ತರ ಪ್ರದೇಶದಿಂದ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದ ಮಹಮದ್ ರಬ್ಬಿ, ಮಹಮದ್ ಯುಸೂಫ್, ಮಹಮದ್ ಸಾಬ್ ಅನ್ನೋರು ಮೊದಲಿಗೆ ನಗರದಲ್ಲಿ ಚಿಕ್ಕಪುಟ್ಟ ಕೆಲಸ ಮಾಡ್ತಿದ್ರು. ನಂತರ ಹಣದಾಸೆಗೆ ಬಿದ್ದ ಈ ಮೂವರು ಕಾಪರ್ ವೈಯರ್ಗಳ ಕಳ್ಳತನ ಮಾಡೋಕೆ ಶುರುಮಾಡಿದ್ರು. ಯಾವಾಗ ದುಡ್ಡು ಬರೋಕೆ ಶುರುವಾಯ್ತೋ, ಈ ಮೂವರ ಕಣ್ಣು ಹಿಂದೂ ದೇವಾಲಯಗಳ ಮೂಲ ವಿಗ್ರಹಗಳ ಮೇಲೆ ಬಿದ್ದಿತ್ತು. ತಡರಾತ್ರಿ ಮಾಸ್ಕ್ ಧರಿಸಿ ದೇವಸ್ಥಾನಗಳಿಗೆ ನುಗ್ಗುತ್ತಿದ್ದ ಆರೋಪಿಗಳು, ಅಲ್ಲಿನ ಮೂಲ ದೇವರ ವಿಗ್ರಹ ಗಳನ್ನು ಕದಿಯುತ್ತಿದ್ರು.
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಜಿ ಸೊನ್ನೇನಹಳ್ಳಿಯ ಮಹೇಶ್ವರ ದೇವಾಲಯ. ಇಲ್ಲಿನ ಸಿದ್ದಾರ್ಥ ಲೇಔಟ್ ನ ಸಪ್ಪಲಮ್ಮ ದೇವಾಲಯ. ಹೊಸಕೋಟೆಯ ಶ್ರೀರಾಮ ದೇವಲಯದಲ್ಲಿ ಶ್ರೀರಾಮ, ಲಕ್ಷಣ, ಸೀತಾ, ಹನುಮಂತ, ವೆಂಕಟರಮಣ, ಮುನೇಶ್ವರ, ಸಪ್ಪಲಮ್ಮದೇವೆ, ಸಿಡಿ ಈರಣ್ಣ, ಸುಬ್ರಹ್ಮಣ್ಯ ಸ್ವಾಮಿ, ವಿಗ್ರಹಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ರು. ಕದ್ದ ವಿಗ್ರಹಗಳಲ್ಲಿ ಕೆಲವನ್ನು ಮಾರಾಟ ಮಾಡೋಕೆ ಹೋಗಿದ್ದ ವೇಳೆ ಪೊಲೀಸರ ಭಯದಲ್ಲಿ ವಿಗ್ರಹವನ್ನು ಚೀಲವೊಂದರಲ್ಲಿ ಸುತ್ತಿ ರಸ್ತೆ ಬದಿ ಎಸೆದು ಹೋಗಿದ್ರು.
ಸಾರ್ವಜನಿಕರ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಹೋದ ಕಾಡುಗೊಡಿ ಪೊಲೀಸರು, ಪರಿಶೀಲನೆ ನಡೆಸಿದ ವೇಳೆ ಆ ವಿಗ್ರಹದ ಮೇಲೆ ವ್ಯಕ್ತಿಯೊಬ್ಬನ ಫಿಂಗರ್ ಪ್ರಿಂಟ್ ಪತ್ತೆಯಾಗಿತ್ತು. ಅದನ್ನು ಮ್ಯಾಚ್ ಮಾಡಿದ ವೇಳೆ ಈ ಹಿಂದೆ ಪಕ್ಕದ ತಿರುಮಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ಬಿಡುಗಡೆ ಆಗಿರೋದು ಗೊತ್ತಾಗಿತ್ತು.
ತಕ್ಷಣ ಕಾರ್ಯಾಚರಣೆ ನಡೆಸಿದ ಕಾಡುಗೋಡಿ ಪೊಲೀಸರು ಮಹಮದ್ ರಬ್ಬಿ, ಮಹಮದ್ ಯುಸೂಫ್, ಮಹಮದ್ ಸಾಬ್ ಬಂಧಿಸಿದ್ದಾರೆ. ಸದ್ಯ ವಿಚಾರಣೆ ಮುಂದುವರೆಸಲಾಗಿದೆ. ಹಿಂದೂ ದೇವಾಲಯಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ರು ಅನ್ನೋದು ಮತ್ತಷ್ಟು ತನಿಖೆಯಿಂದ ಗೊತ್ತಾಗಬೇಕಿದೆ.