8th Pay Commission: ಈ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಕೊಕ್ಕೆ! ಪಿಂಚಣಿದಾರರಿಗೂ ಕಹಿ ಸುದ್ದಿ!

8th Pay Commission: ಹೊಸ ವೇತನ ಆಯೋಗದ ಅನುಷ್ಠಾನಕ್ಕಾಗಿ ಕಾತುರರಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಶಾಕಿಂಗ್ ಸುದ್ದಿ ಇದೆ.

Written by - Yashaswini V | Last Updated : Nov 12, 2025, 03:05 PM IST
  • ಹೊಸ ವೇತನ ಆಯೋಗದಡಿ ಕೆಲ ಉದ್ಯೋಗಿಗಳ ಕನಿಷ್ಠ ವೇತನ ಹೆಚ್ಚಾಗುವುದಿಲ್ಲ!
  • 8ನೇ ವೇತನ ಆಯೋಗದಲ್ಲಿ ಯಾರಿಗೆ ಸಂಬಳ ಹೆಚ್ಚಾಗಲ್ಲ
  • ಹೊಸ ವೇತನ ಆಯೋಗದಲ್ಲಿ ಪಿಂಚಣಿದಾರರಿಗೆ ಲಾಭವೋ? ನಷ್ಟವೋ?
8th Pay Commission: ಈ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಕೊಕ್ಕೆ! ಪಿಂಚಣಿದಾರರಿಗೂ ಕಹಿ ಸುದ್ದಿ!

8th Pay Commission salary hike exclusion: ಹೊಸ ವೇತನ ಆಯೋಗಕ್ಕಾಗಿ ಕೇಂದ್ರ ಸರ್ಕಾರ ಉಲ್ಲೇಖ ಅವಧಿ (TOR) ಜಾರಿಗೆ ತಂಡ ಬೆನ್ನಲ್ಲೇ 8ನೇ ವೇತನ ಆಯೋಗ ಸಮಿತಿ ರಚನೆಯ ಬಗ್ಗೆಯೂ ಭಾರೀ ಚರ್ಚೆ ಆರಂಭವಾಗಿದೆ. ಏತನ್ಮಧ್ಯೆ, ವೇತನ, ಪಿಂಚಣಿ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. 

Add Zee News as a Preferred Source

ಲಭ್ಯವಿರುವ ಮಾಹಿತಿಯ ಪ್ರಕಾರ, 8ನೇ ವೇತನ ಆಯೋಗದ ಅನುಷ್ಠಾನದ ಬಳಿಕವೂ ಕೆಲವು ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗುವುದಿಲ್ಲ. ಅಷ್ಟೇ ಅಲ್ಲದೆ, ಸುಮಾರು  69 ಲಕ್ಷ ಪಿಂಚಣಿದಾರರನ್ನು ಉಲ್ಲೇಖ ಅವಧಿಯ ಅಡಿಯಲ್ಲಿ ಹೊರಗಿಡಲಾಗಿದೆ ಎಂಬ ಶಾಕಿಂಗ್ ಮಾಹಿತಿ ಹೊರಬಹುತ್ತಿದೆ. 

ವರದಿಗಳ ಪ್ರಕಾರ, 8ನೇ ವೇತನ ಆಯೋಗದಲ್ಲಿ ಕೇಂದ್ರ ಸರ್ಕಾರ್ ನೌಕರರ ವೇತನ ಹಾಗೂ ಪಿಂಚಣಿದಾರರ ಪಿಂಚಣಿಯನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಹೊಸ ವೇತನ ಆಯೋಗದಡಿ ಫಿಟ್‌ಮೆಂಟ್ ಅಂಶ 1.92 ರಿಂದ 2.86ರ ನಡುವೆ ಇರುವ ನಿರೀಕ್ಷೆಯಿದೆ. ಆದರೆ, ಹೊಸ ವೇತನ ಆಯೋಗವು ಸರ್ಕಾರಿ ಸ್ವಾಮ್ಯದ ವಾಣಿಜ್ಯ ಉದ್ಯಮಗಳಾದ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ ಹಾಗಾಗಿ ಇವರ ವೇತನ ಹೆಚ್ಚಳಕ್ಕೆ ಕೊಕ್ಕೆ ಬೀಳುವ ಸಂಭವವಿದೆ ಎನ್ನಲಾಗುತ್ತಿದೆ. 

ಇದನ್ನೂ ಓದಿ- ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ

ವಾಸ್ತವವಾಗಿ, ಸರ್ಕಾರಿ ಸ್ವಾಮ್ಯದ ವಾಣಿಜ್ಯ ಉದ್ಯಮಗಳಾದ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಉದ್ಯೋಗಿಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಜಂಟಿಯಾಗಿ ವೇತನ ಪರಿಶ್ಕರಿಸುವುದರಿಂದ ಹೊಸ ವೇತನ ಆಯೋಗದ ಅನುಷ್ಠಾನದ ನಂತರ ಇದರ ಆಧಾರದಲ್ಲಿ ಇವರ ವೇತನ ಹೆಚ್ಚಾಗುವುದಿಲ್ಲ. ಇವರ ಹೊರತಾಗಿ 
ಸ್ವಾಯತ್ತ ಸಂಸ್ಥೆಗಳ ನೌಕರರ ಮೇಲೂ ಇದು ಪರಿಣಾಮ ಬೀರುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ- EPF ಖಾತೆಯಿಂದ ಹಣ ಹಿಂಪಡೆಯಲು 7 ಹೊಸ ನಿಯಮ ಜಾರಿ: ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ ಫುಲ್ ಡೀಟೇಲ್ಸ್

ಪಿಂಚಣಿದಾರರಿಗೂ ಕಹಿ ಸುದ್ದಿ: 
ಹೊಸ ವೇತನ ಆಯೋಗದ ಅಡಿಯಲ್ಲಿ ದೇಶಾದ್ಯಂತ 9 ಮಿಲಿಯನ್ ಪಿಂಚಣಿದಾರರನ್ನು ಹೊರಗಿಡಲಾಗಿದೆ ಎಂದು ನೌಕರರ ಸಂಘಗಳು ಆರೋಪಿಸುತ್ತಿವೆ. 8ನೇ ವೇತನ ಆಯೋಗದ ಅಧಿಸೂಚನೆ ಬಿಡುಗಡೆಯಾದ ನಂತರ ಅಖಿಲ ಭಾರತ ರಕ್ಷಣಾ ನೌಕರರ ಒಕ್ಕೂಟ ಈ ರೀತಿಯ ಆರೋಪ ಮಾಡಿದ್ದು, ಇದರಿಂದ ಪಿಂಚಣಿದಾರರು ತಮಗೆ ಸಿಗಬೇಕಾದ ವೇತನ, ಭತ್ಯೆಗಳಿಂದ ವಂಚಿತರಾಗಬಹುದು ಎನ್ನಲಾಗುತ್ತಿದೆ. 

ಆದಾಗ್ಯೂ, ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ. 8ನೇ ವೇತನ ಆಯೋಗದಲ್ಲಿ ಯಾವುದೇ ಪಿಂಚಣಿದಾರರನ್ನು ಕೈಬಿಡಲಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News