)
ಭಾರತದ ಆರ್ಥಿಕ ನೀತಿಯಲ್ಲಿನ ಪ್ರಮುಖ ಸುಧಾರಣೆಗಳಲ್ಲಿ ಒಂದನ್ನು ಸರಕು ಮತ್ತು ಸೇವಾ ತೆರಿಗೆ (GST)ಯಲ್ಲಿನ ಬದಲಾವಣೆ ಎಂದು ಪರಿಗಣಿಸಲಾಗಿದೆ. ಮೋದಿ ಸರ್ಕಾರದ ಮುಂದಿನ ಹಂತದ GST ಸುಧಾರಣೆಗಳು ಉದ್ಯಮದಷ್ಟೇ ಅಲ್ಲ, ಸಾಮಾನ್ಯ ಗ್ರಾಹಕರು ಮತ್ತು ಹಣಕಾಸು ಮಾರುಕಟ್ಟೆಗಳ ಗಮನ ಸೆಳೆದಿವೆ. ಈ ಸುಧಾರಣೆಗಳು ಚಿಲ್ಲರೆ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತವೆಯೇ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI)ಬಡ್ಡಿದರಗಳನ್ನು ಕಡಿಮೆ ಮಾಡಲು ಪ್ರೇರೇಪಿಸುತ್ತವೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ?
ಪ್ರಸ್ತಾವಿತ ಸುಧಾರಣೆಗಳ ಅಡಿಯಲ್ಲಿ, ಅನೇಕ ಸರಕು ಮತ್ತು ಸೇವೆಗಳ ಮೇಲಿನ ಪರೋಕ್ಷ ತೆರಿಗೆಯ ಹೊರೆಯನ್ನು ಕಡಿಮೆ ಮಾಡಬಹುದು. ಗ್ರಾಹಕರು ಇದರಿಂದ ನೇರ ಲಾಭವನ್ನು ಪಡೆಯುವುದರೊಂದಿಗೆ ಹಣದುಬ್ಬರದ ಒತ್ತಡ ಕಡಿಮೆಯಾಗುತ್ತದೆ. GST ದರಗಳಲ್ಲಿನ ಕಡಿತದ ಸ್ವಲ್ಪ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಚಿಲ್ಲರೆ ಹಣದುಬ್ಬರದಲ್ಲಿ ಪರಿಹಾರವನ್ನು ಕಾಣಬಹುದು ಎಂದು ಆನಂದ್ ರಥಿ ಗ್ರೂಪ್ನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸುಜನ್ ಹಜ್ರಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸುಧಾರಣೆಗಳು ಸರ್ಕಾರದ ಆದಾಯದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಎಂಬುದರ ಮೇಲೆ ಒಟ್ಟಾರೆ ಪರಿಣಾಮವು ಅವಲಂಬಿತವಾಗಿರುತ್ತದೆ ಎನ್ನುವುದು ಕೂಡ ಸತ್ಯ.
ಹೊಸ ತೆರಿಗೆ ಸ್ಲ್ಯಾಬ್ಗಳ ಆದಾಯದ ಒತ್ತಡ ಮತ್ತು ಪ್ರಭಾವ :
ದರ ಕಡಿತವು ಸರ್ಕಾರದ ಆದಾಯವನ್ನು ಕಡಿಮೆ ಮಾಡಿದರೆ, ಹಣಕಾಸಿನ ಕೊರತೆಯು ಹೆಚ್ಚಾಗಬಹುದು. ಈ ಕೊರತೆಯು ದೀರ್ಘಾವಧಿಯಲ್ಲಿ ಹಣದುಬ್ಬರದ ಮೇಲೆ ಅಡ್ಡ ಪರಿಣಾಮವನ್ನೂ ಬೀರಬಹುದು. ವರದಿಯ ಪ್ರಕಾರ, ಉತ್ಪನ್ನಗಳು ಮತ್ತು ಐಷಾರಾಮಿ ವಸ್ತುಗಳ ಮೇಲೆ ಹೊಸ 40% ತೆರಿಗೆ ಸ್ಲ್ಯಾಬ್ ಅನ್ನು ರಚಿಸುವ ಸರ್ಕಾರದ ಪ್ರಸ್ತಾಪವು ಬೇರೆಡೆ ದರ ಕಡಿತದಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಬಹುದು. ಇದು ಒಟ್ಟಾರೆಯಾಗಿ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಬದಲು ವಿವಿಧ ಗ್ರಾಹಕ ವಿಭಾಗಗಳಲ್ಲಿ ತೆರಿಗೆ ಹೊರೆಯನ್ನು ವಿತರಿಸುತ್ತದೆ.
ಎಫ್ & ಬಿ ವರ್ಗದಿಂದ ಪರಿಹಾರ ಸಿಗುತ್ತದೆಯೇ? :
ಎಮ್ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ನ ಪ್ರಮುಖ ಅರ್ಥಶಾಸ್ತ್ರಜ್ಞೆ ಮಾಧವಿ ಅರೋರಾ ಹೇಳುವಂತೆ, ಜಿಎಸ್ಟಿ ಸುಧಾರಣೆಗಳ ಪರಿಣಾಮವು ಗ್ರಾಹಕರನ್ನು ಸಂಪೂರ್ಣವಾಗಿ ತಲುಪಿದರೆ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಒಂದು ವರ್ಷದ ಅವಧಿಯಲ್ಲಿ 50-60 ಬೇಸಿಸ್ ಪಾಯಿಂಟ್ಗಳವರೆಗೆ ಇಳಿಕೆಯಾಗಬಹುದು. ಇದಕ್ಕೆ ದೊಡ್ಡ ಕಾರಣವೆಂದರೆ ಆಹಾರ ಮತ್ತು ಪಾನೀಯ (ಎಫ್ & ಬಿ) ವರ್ಗದ ಅನೇಕ ವಸ್ತುಗಳು 12% ರಿಂದ 5% ಸ್ಲ್ಯಾಬ್ಗೆ ಇಳಿಯುತ್ತವೆ. ಆದರೆ, ಫೆಬ್ರವರಿ 2026 ರಿಂದ ಸಿಪಿಐ ಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಈಗ ಅತ್ಯಂತ ಮುಖ್ಯವಾದ ಪ್ರಶ್ನೆಯೆಂದರೆ ಆರ್ಬಿಐ ಬಡ್ಡಿದರಗಳನ್ನು ಕಡಿಮೆ ಮಾಡುತ್ತದೆಯೇ ಎನ್ನುವುದು. ಹಣದುಬ್ಬರದಲ್ಲಿ ಪರಿಹಾರ ಕಂಡುಬಂದರೆ, ಕೇಂದ್ರ ಬ್ಯಾಂಕ್ ಬೆಳವಣಿಗೆಯನ್ನು ಉತ್ತೇಜಿಸುವತ್ತ ಹೆಚ್ಚು ಗಮನಹರಿಸುತ್ತದೆ ಎನ್ನುತ್ತಾರೆ ತಜ್ಞರು. ಇನ್ನು ಮುಂದಿನ ನೀತಿ ಸಭೆಯಲ್ಲಿ ದರ ಕಡಿತವನ್ನು ಘೋಷಿಸಬಹುದು ಎನ್ನುವುದು ನೀತಿ ತಜ್ಞರ ಅಭಿಪ್ರಾಯ. ಜಿಎಸ್ಟಿ ಪುನರ್ರಚನೆಯ ಪರಿಣಾಮವು ಸ್ವಲ್ಪ ಹಣದುಬ್ಬರ ಕಡಿತ ಅಥವಾ ಆದಾಯ-ತಟಸ್ಥವಾಗಿದ್ದರೂ ಸಹ, ಪ್ರಸ್ತುತ ಪರಿಸ್ಥಿತಿಯಲ್ಲಿ ಆರ್ಬಿಐ ಈಗಾಗಲೇ 25–75 ಬೇಸಿಸ್ ಪಾಯಿಂಟ್ಗಳಷ್ಟು ದರಗಳನ್ನು ಕಡಿತಗೊಳಿಸುವ ಅವಕಾಶವನ್ನು ಹೊಂದಿದೆ ಎಂದು ಎನ್ನುತ್ತಾರೆ.
ಮಾರುಕಟ್ಟೆ ಮತ್ತು ಹೂಡಿಕೆದಾರರು ಏನು ಮಾಡಬೇಕು?:
ಜಿಎಸ್ಟಿ ಸುಧಾರಣೆಗಳು ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಆದರೆ ಅದರ ಸಂಪೂರ್ಣ ಪರಿಣಾಮವು ಮುಂದಿನ ಕೆಲವು ತಿಂಗಳುಗಳಿಂದ ತ್ರೈಮಾಸಿಕಗಳವರೆಗೆ ಕಂಡುಬರುತ್ತದೆ. ಆದ್ದರಿಂದ, ಜಿಎಸ್ಟಿ ಸುಧಾರಣೆಗಳನ್ನು ಮಾತ್ರ ದರ ಕಡಿತಕ್ಕೆ ಲಿಂಕ್ ಮಾಡುವುದು ಆತುರವಾಗುತ್ತದೆ. ಬೆಳವಣಿಗೆಯ ದರವು ತನ್ನ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ ಎಂದು ಆರ್ಬಿಐ ಭಾವಿಸಿದರೆ, ಜಿಎಸ್ಟಿ ಸುಧಾರಣೆಗಳ ಹೊರತಾಗಿ ಅದು ಪೂರ್ವಭಾವಿ ದರ ಕಡಿತವನ್ನು ಮಾಡಬಹುದು ಎಂದು ರೆಲಿಗೇರ್ ಬ್ರೋಕಿಂಗ್ನ ಎಸ್ವಿಪಿ (ಸಂಶೋಧನೆ) ಅಜೀತ್ ಮಿಶ್ರಾ, ಹೇಳಿದ್ದಾರೆ.