Kashiyatre Special Package: ರಾಜ್ಯದಿಂದ ಕಾಶಿಯಾತ್ರೆಗೆ ತೆರಳುವವರಿಗೆ ರೈಲ್ವೇ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ ಸಹಯೋಗದೊಂದಿಗೆ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸಿದೆ.

Kashiyatre: ಕರ್ನಾಟಕದ ಜನರಿಗಾಗಿಯೇ ವಿಶೇಷವಾಗಿ ಭಾರತ ಗೌರವ ಪ್ರವಾಸಿ ರೈಲು ಯೋಜನೆ ಪರಿಚಯಿಸಿರುವ ಭಾರತೀಯ ರೈಲ್ವೆ ಇಲಾಖೆ ಒಟ್ಟು 22.500 ರೂ. ಗೆ ಎರಡು ಸುತ್ತಿನ ರೈಲು ಸೇವೆ ಮತ್ತು ವಿವಿಧ ಯಾತ್ರಾ ಸ್ಥಳಗಳ ಪರಿಚಯ ಮತ್ತು ರೂಮಿನ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, 22,500 ರೂ,.ಗಳಲ್ಲಿ 7,500 ರೂ. ರಿಯಾಯಿತಿಯನ್ನು ಕೂಡ ನೀಡಲಾಗುತ್ತಿದೆ.
ಒಂಬತ್ತು ಪವಿತ್ರ ದೇವಸ್ಥಾನಗಳಿಗೆ ಪ್ರವಾಸ:
ಆಗಸ್ಟ್ 21ರಿಂದ 29ರ ವರೆಗೆ ವಿಶೇಷ ರೈಲು ಸೇವೆ ಮುಂದಾಗಿರೋ ನೈರುತ್ಯ ರೈಲ್ವೆ ಇಲಾಖೆ ಈ ಪ್ರವಾಸದಲ್ಲಿ ಒಟ್ಟು ಒಂಬತ್ತು ಪವಿತ್ರ ದೇವಸ್ಥಾನಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲಿದೆ.
ಒಟ್ಟು 9 ದಿನಗಳ ಅವಧಿಯ ಪ್ರವಾಸ ಇದಾಗಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರೈಲ್ವೆ ಇಲಾಖೆಯಿಂದ ಮನವಿ ಮಾಡಲಾಗಿದೆ.
ಎಲ್ಲಿಂದ ಆರಂಭವಾಗಲಿದೆ ಪ್ರವಾಸ:
ಬೆಂಗಳೂರಿನ ಯಶವಂತಪುರ/ಎಸ್ಎಂವಿಟಿ ಬೆಂಗಳೂರಿನಿಂದ ರೈಲು ಸೇವೆ ಪ್ರಾರಂಭವಾಗಲಿದೆ. ಯಶವಂತಪುರ/ ಎಸ್ಎಂವಿಟಿ ಬೆಂಗಳೂರು, ತುಮಕೂರು, ಬಿರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಯಾತ್ರಾರ್ಥಿಗಳು ಈ ರೈಲು ಹತ್ತಲು ಅವಕಾಶವಿದೆ.
ಈ ಪ್ರವಾಸದಲ್ಲಿ ಒಳಗೊಂಡಿರುವ ಪ್ರಮುಖ ಸ್ಥಳಗಳು
* ವಾರಾಣಸಿ: ಕಾಶಿ ವಿಶ್ವನಾಥ ದೇವಾಲಯ, ತುಳಸಿ ಮಂದಿರ ಮತ್ತು ಸಂಕಟ ಮೋಚನ ಹನುಮಾನ್ ದೇವಾಲಯ
* ಅಯೋಧ್ಯೆ: ರಾಮ ಮಂದಿರ ಮತ್ತು ಹನುಮಾನ್ ಗಡಿ.
* ಗಯಾ ಮತ್ತು ಬೋಧಗಯಾ : ವಿಷ್ಣುಪಾದ ದೇವಾಲಯ ಮತ್ತು ಮಹಾಬೋಧಿ ದೇವಾಲಯ
* ಪ್ರಯಾಗರಾಜ್: ತ್ರಿವೇಣಿ ಸಂಗಮ ಮತ್ತು ಹನುಮಾನ್ ದೇವಸ್ಥಾನ.
ಕಾಶಿಯಾತ್ರೆಗೆ ತಗಲುವ ವೆಚ್ಚ:
ರೈಲ್ವೆ ಇಲಾಖೆ ಆರಂಭಿಸಿರುವ ಈ ವಿಶೇಷ ಕಾಶಿಯಾತ್ರೆ ನೇರ ರೈಲು ಸೇವೆಯನ್ನು ಪಡೆಯಲು ಪ್ರತಿ ವ್ಯಕ್ತಿಗೆ ಈ ಪ್ರವಾಸದ ವೆಚ್ಚ ₹22,500/- ಆಗಿದೆ. ಆದಾಗ್ಯೂ, ಕರ್ನಾಟಕ ಸರ್ಕಾರವು ಕರ್ನಾಟಕದ ನಿವಾಸಿಗಳಿಗೆ ಮಾತ್ರ ವಿಶೇಷವಾಗಿ ₹7,500/- ಸಬ್ಸಿಡಿಯನ್ನು ನೀಡಿದ್ದು, ಯಾತ್ರೆಯನ್ನು ಮತ್ತಷ್ಟು ಕೈಗೆಟುಕುವಂತೆ ಮಾಡಿದೆ.
ಪ್ರವಾಸದ ಪ್ರಮುಖ ವೈಶಿಷ್ಟ್ಯಗಳು:
•ಭಾರತ್ ಗೌರವ್ ಪ್ರವಾಸಿ ರೈಲಿನಲ್ಲಿ ಮೂರನೇ ಎಸಿ ದರ್ಜೆಯಲ್ಲಿ ಪ್ರಯಾಣ.
•ತಂಗುವ ಸ್ಥಳಗಳಲ್ಲಿ ಅವಳಿ/ತ್ರಿವಳಿ ಜನರು ಹಂಚಿಕೊಳ್ಳುವ ಆಧಾರದ ಮೇಲೆ ಎಸಿ ರಹಿತ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ.
•ಯಾತ್ರಾ ಸ್ಥಳಗಳಲ್ಲಿ ಸ್ನಾನ ಮತ್ತು ವಾಸ್ತವ್ಯಕ್ಕೆ ಎಸಿ ರಹಿತ ಕೊಠಡಿಗಳ ವ್ಯವಸ್ಥೆ.
•ಎಲ್ಲಾ ಊಟಗಳು (ಸಸ್ಯಾಹಾರಿ ಮಾತ್ರ) ಈ ಪ್ಯಾಕೇಜ್ನಲ್ಲಿ ಸೇರಿವೆ.
•ಎಸಿ ರಹಿತ ಬಸ್ಗಳ ಮೂಲಕ ಪ್ರವಾಸ ಮತ್ತು ಸ್ಥಳ ವೀಕ್ಷಣೆ.
•ಪ್ರತಿ ಕೋಚ್ಗೆ ಪ್ರವಾಸ ಮಾರ್ಗದರ್ಶಕರ ಸೇವೆ.
•ಎಲ್ಲಾ ಪ್ರಯಾಣಿಕರಿಗೆ ಪ್ರಯಾಣ ವಿಮೆ.
•ರೈಲಿನಲ್ಲಿ ಭದ್ರತಾ ವ್ಯವಸ್ಥೆ ಮತ್ತು ಎಲ್ಲಾ ಅನ್ವಯಿಕ ತೆರಿಗೆಗಳನ್ನು ಒಳಗೊಂಡಿದೆ.
ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಕಾಯ್ದಿರಿಸಲು, IRCTC ಕಚೇರಿಗಳನ್ನು ಸಂಪರ್ಕಿಸಬಹುದು:
•ಬೆಂಗಳೂರು: 9003141707 / 8595931290 / 8595931291
•ಮೈಸೂರು: 8595931294
•ಹುಬ್ಬಳ್ಳಿ: 8595931293
•ವೆಬ್ಸೈಟ್: www.irctctourism.com.