)
medicinal plants: ಹೆಚ್ಚಿನ ಸಂಖ್ಯೆಯ ರೈತರು ಇಂತಹ ಸಸ್ಯ ಪ್ರಭೇದಗಳನ್ನು ಹೆಚ್ಚಾಗಿ ಬೆಳೆಸಲು ಆಕರ್ಷಿತರಾಗುತ್ತಿದ್ದಾರೆ.. ಇದಷ್ಟೇ ಅಲ್ಲದೆ ಈ ರೀತಿಯ ಸಸ್ಯಗಳನ್ನು ಬೆಳೆಯುವ ರೈತರಿಗೆ, ಭಾರತದ ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿಯು ಶೇಕಡಾ 30 ರಿಂದ 75 ರಷ್ಟು ಸಬ್ಸಿಡಿಗಳನ್ನು ನೀಡುತ್ತದೆ. ಈ ವ್ಯವಹಾರ ಕಲ್ಪನೆ ಯೋಜನೆಯಲ್ಲಿ, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಐದು ಔಷಧೀಯ ಸಸ್ಯ ತಳಿಗಳ ಬಗ್ಗೆ ವಿವರಣೆ ಇಲ್ಲಿದೆ
ಆಯುರ್ವೇದ ಕೃಷಿಯಿಂದ ರೈತರಿಗೆ ಲಾಭ:
ಭಾರತದ ಎರಡು ಪ್ರಮುಖ ಸಾಂಪ್ರದಾಯಿಕ ಔಷಧ ಪದ್ಧತಿಗಳಾದ ಆಯುರ್ವೇದ ಮತ್ತು ಯುನಾನಿಯಲ್ಲಿ ಅಶ್ವಗಂಧ ಸಸ್ಯದ ಬೇರುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅಶ್ವಗಂಧ ಪುಡಿ ಮತ್ತು ಮಾತ್ರೆಗಳು ಇದರ ಮೌಲ್ಯವರ್ಧಿತ ಉತ್ಪನ್ನಗಳಾಗಿವೆ. ಎಲೆಗಳು ಒಣಗಲು ಮತ್ತು ಉದುರಲು ಪ್ರಾರಂಭಿಸಿದಾಗ ಮತ್ತು ಒಳಗಿನ ಹಣ್ಣುಗಳು ಹಳದಿ-ಕೆಂಪು ಬಣ್ಣಕ್ಕೆ ತಿರುಗಿದಾಗ ಬೆಳೆ ಹಣ್ಣಾಗಿದೆ ಎಂದರ್ಥ. ಬಿತ್ತನೆ ಮಾಡಿದ 150-180 ದಿನಗಳ ನಂತರ, ಬೆಳೆಯನ್ನು ಕೊಯ್ಲು ಮಾಡಲಾಗುತ್ತದೆ ಇದರ ಮೂಲಕ ಆಯುರ್ವೇದ ಬೇರುಗಳು ದೊರೆಯುತ್ತವೆ.
ರೈತರಿಗೆ ಹೆಚ್ಚು ಲಾಭ ನೀಡುವ ಸಸ್ಯಗಳು
ಅಶ್ವಗಂಧ:
ಈ ಅಶ್ವಗಂಧ ಕೃಷಿ ಮಾಡಲು ಹೆಕ್ಟೇರ್ಗೆ ಸುಮಾರು 12,000 ರಿಂದ 14,000 ರೂ. ವೆಚ್ಚವಾಗುತ್ತದೆ. ಕೊಯ್ಲು ಮಾಡಿದ ನಂತರ, ಅವುಗಳನ್ನು ಸುಮಾರು 60-70 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ರೈತರು ಗಳಿಸಬಹುದು.
ಕುಲ್ಕೀರ:
ಕುಲ್ಕೀರ ಕೃಷಿ ಕ್ಷೇತ್ರದಲ್ಲಿ ಇದೊಂದು ನವೀನ ಉದ್ಯಮವಾಗಿದೆ. ಇದು ನಷ್ಟವನ್ನು ನಿವಾರಿಸುವುದಲ್ಲದೆ ಲಾಭದಾಯಕ ಆದಾಯವನ್ನು ಖಚಿತಪಡಿಸುತ್ತದೆ. ಸಾಮಾನ್ಯ ಬೆಳೆಗಳ ನಡುವೆ ಅಂತರ ಬೆಳೆಯಾಗಿ ಗುಲ್ಕೀರವನ್ನು ಬೆಳೆಸುವುದರಿಂದ ಉತ್ತಮ ಆದಾಯವನ್ನು ಪಡೆಯಬಹುದು.ಗುಲ್ಕರ ಬೆಳೆಯ ಪ್ರತೀ ಭಾಗವೂ ಉಪಯೋಗಕ್ಕೆ ಬರುತ್ತವೆ. ಗುಲ್ಕೀರದ ಹೂವುಗಳು, ಎಲೆಗಳು, ಕಾಂಡಗಳು ಮತ್ತು ಬೀಜಗಳು ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯವನ್ನು ಪಡೆಯುತ್ತವೆ. ಇದರ ಮೂಲಕ ಎಕರೆಗೆ 30 ಸಾವಿರದಿಂದ 40 ಸಾವಿರ ರೂ.ಗಳವರೆಗೆ ಗಳಿಸಬಹುದು.
ನಿಂಬೆಹಣ್ಣು:
ನೀವೆನಾದರೂ ಕೃಷಿಕ್ಷೇತ್ರದಲ್ಲಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭದ ವ್ಯವಹಾರವನ್ನು ರಚಿಸಲು ಆಸಕ್ತಿ ಹೊಂದಿದ್ದರೆ, ನಿಂಬೆಹಣ್ಣಿನ ಬೇಳೆ ಇದಕ್ಕೆ ಸೂಕ್ತ ಆಯ್ಕೆ. ಇದು ನಾಲ್ಕು ತಿಂಗಳಲ್ಲಿ ಬೆಳೆದು ಕೊಯ್ಲಿಗೆ ಸಿದ್ಧವಾಗುತ್ತದೆ. ಇದನ್ನು ಸೌಂದರ್ಯವರ್ಧಕಗಳು, ಸಾಬೂನುಗಳು, ಎಣ್ಣೆಗಳು ಮತ್ತು ಔಷಧಿಗಳು ಸೇರಿದಂತೆ ವಿವಿಧ ಉತ್ಪನ್ನಗಳಲ್ಲಿ ಒಂದು ಘಟಕಾಂಶವಾಗಿ ಬಳಸಲಾಗುತ್ತದೆ.
ಶತಾವರಿ:
ಇದೊಂದು ಆಯುರ್ವೇದದಲ್ಲಿ ಹೆಚ್ಚಾಗಿ ಬೆಳೆಯುವ ಸಸ್ಯವಾಗಿದ್ದು, ಶತಾವರಿ ರೈತರಿಗೆ ಸ್ಥಿರ ಆದಾಯವನ್ನು ನೀಡುವ ಲಾಭದ ಬೆಳೆಯಾಗಿದೆ. ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.ಈ ಸಸ್ಯದ ಒಣಗಿದ ಬೇರುಗಳನ್ನು ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಶತಾವರಿ ಕೃಷಿಯ ಒಂದು ಎಕರೆಯಲ್ಲಿ ಬರೊಬ್ಬರಿ ರೂ. 6 ಲಕ್ಷದವರೆಗೆ ಆದಾಯವನ್ನು ಪಡೆಯಬಹುದು.
ಜೆರೇನಿಯಂ:
ನಾವು ಕಡಿಮೆ ವೆಚ್ಚದಲ್ಲಿ ಜೆರೇನಿಯಂ ಬೆಳೆಯನ್ನು ಬೆಳೆಯಬಹುದು. ಜೆರೇನಿಯಂ ಸಸ್ಯದ ಹೂವುಗಳಿಂದ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಇದನ್ನು ಅರೋಮಾಥೆರಪಿ, ಸೌಂದರ್ಯವರ್ಧಕಗಳು, ಸುಗಂಧ ದ್ರವ್ಯಗಳು ಮತ್ತು ಪರಿಮಳಯುಕ್ತ ಸೋಪುಗಳಲ್ಲಿ ಬಳಸಲಾಗುತ್ತದೆ. ಈ ಸಸ್ಯದ ಇನ್ನೊಂದು ವಿಶೇಷತೆಯೆಂದರೆ ಇದನ್ನು ಅಂತರ ಬೆಳೆಯಾಗಿಯೂ ಸಹ ಬೆಳೆಯಬಹುದು. ಇದನ್ನು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಕೊಯ್ಲು ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಲೀಟರ್ ಜೆರೇನಿಯಂ ಎಣ್ಣೆಗೆ 20,000 ರೂ.ವರೆಗೆ ಬೆಲೆ ಸಿಗುತ್ತಿದೆ.