)
Free Gas Cylinder: ಬೆಳಕಿನ ಹಬ್ಬ ದೀಪಾವಳಿ ನಮ್ಮ ದೇಶದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕಾಗಿಯೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಬಡ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ಗಳನ್ನ ನೀಡುತ್ತಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಭಾಗವಾಗಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಈ ಉಚಿತ ಸಿಲಿಂಡರ್ಗಳನ್ನ ಘೋಷಿಸಿದೆ.
ಈ ವಿಶೇಷ ಘೋಷಣೆಯಿಂದ ಯುಪಿಯಲ್ಲಿ 1.75 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ಗಳು ಸಿಗಲಿವೆ. ಉತ್ತರ ಪ್ರದೇಶದಲ್ಲಿ ದೀಪಾವಳಿ ಮತ್ತು ಹೋಳಿ ಹಬ್ಬಗಳನ್ನ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಎರಡು ಹಬ್ಬಗಳಿಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನ ಒದಗಿಸಲಾಗುವುದು. ಈ ತಿಂಗಳು ಈ ಸಿಲಿಂಡರ್ ಅನ್ನ ವಿತರಿಸಲಾಗುತ್ತಿದೆ.
ಏನಿದು ಯೋಜನೆ ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಉತ್ತರ ಪ್ರದೇಶದ ಅರ್ಹ ಮಹಿಳೆಯರಿಗೆ ಒದಗಿಸಲಾಗುತ್ತಿರುವ ಯೋಜನೆಯಾಗಿದೆ. ಹಬ್ಬದ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ಗಳನ್ನ ನೀಡಲಾಗುತ್ತದೆ. ಫಲಾನುಭವಿಗಳು ಮೊದಲು ಏಜೆನ್ಸಿಯಿಂದ ಸಿಲಿಂಡರ್ ಖರೀದಿಸಬೇಕು. ನಂತರ ಸರ್ಕಾರವು ಆ ಸಿಲಿಂಡರ್ನ ಸಬ್ಸಿಡಿ ಮೊತ್ತವನ್ನ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ. ಈ ಸಿಲಿಂಡರ್ ಅನ್ನ ಸರ್ಕಾರದ ಮರುಪಾವತಿ ಮೂಲಕ ಉಚಿತವಾಗಿ ನೀಡಲಾಗುತ್ತದೆ.
ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿಯೂ ಯೋಜನೆ?
ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆ ಪ್ರಸ್ತುತ ಲಭ್ಯವಿಲ್ಲ. ಉತ್ತರ ಪ್ರದೇಶ ಸರ್ಕಾರ ಇದನ್ನ ನಿರ್ದಿಷ್ಟವಾಗಿ ಒದಗಿಸುತ್ತಿದೆ. ಈ ಯೋಜನೆಯ ಬಗ್ಗೆ ತಿಳಿದ ನಂತರ ತೆಲುಗು ರಾಜ್ಯಗಳ ಬಡ ಮಹಿಳೆಯರು ಸಹ ಇದೇ ರೀತಿಯ ಯೋಜನೆಯನ್ನ ತಮಗೂ ಜಾರಿಗೆ ತಂದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ತೆಲುಗು ರಾಜ್ಯಗಳಲ್ಲಿ ಉಚಿತ ಗ್ಯಾಸ್ ಸಿಲಿಂಡರ್ಗಳನ್ನ ನೀಡಲಾಗುತ್ತಿಲ್ಲ.