)
money talks: ಇಂದಿನ ಕಾಲದಲ್ಲಿ ಯುವಕರು ಉತ್ತಮ ಶಿಕ್ಷಣ ಪಡೆದು, ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಲಕ್ಷಗಟ್ಟಲೇ ಸಂಬಳ ಬಂದರೂ, ತಿಂಗಳ ಕೊನೆಗೆ ಕೈಯಲ್ಲಿ ಉಳಿಯುವ ಹಣ ಬರಿ ಸೊನ್ನೆ! ಇಂತಹ ಘಟನೆಗೆ ಉದಾಹರಣೆ ಆಗಿದ್ದಾರೆ 30 ವರ್ಷದ ಯುವಕನೊಬ್ಬ. ಎಎಂಎಫ್ಐ ನೊಂದಾಯಿತ ಮ್ಯೂಚುಯಲ್ ಫಂಡ್ ತಜ್ಞರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ತಜ್ಞರ ಪ್ರಕಾರ, ಆ ಯುವಕ ತಿಂಗಳಿಗೆ ₹1.7 ಲಕ್ಷ ಸಂಬಳ ಪಡೆಯುತ್ತಿದ್ದಾನೆ. ಹೊಸ ಕಾರು, ಹೊಸ ಐಫೋನ್, ಸುಂದರ ಮನೆ — ಎಲ್ಲವೂ ಇದೆ. ಹೊಸದಾಗಿ ಮದುವೆಯೂ ಆಗಿದೆ. ಎಲ್ಲರಿಗೂ ಕಣ್ಣು ಕುಕ್ಕುವಂತಹ ಜೀವನದಂತಿದೆ. ಆದರೆ ವಾಸ್ತವದಲ್ಲಿ ಆತನ ಹಣಕಾಸಿನ ಸ್ಥಿತಿ ಕಳಪೆಯಾಗಿದೆ.
ಆತನ ಸಂಬಳದ ₹90,000 ರೂ ಕಾರು, ಮೊಬೈಲ್, ಮನೆ ಮುಂತಾದ ಇಎಂಐಗಳಿಗೆ ಹೋಗುತ್ತದೆ. ಇನ್ನೂ ₹30,000 ರೂ ವೀಕೆಂಡ್ ಟ್ರಿಪ್, ಡಿನ್ನರ್, ಫ್ಯಾಷನ್ ಖರ್ಚುಗಳಿಗೆ ಮುಗಿಯುತ್ತದೆ. ಉಳಿದದ್ದು? ಸೊನ್ನೆ! ಅಂದರೆ, ಉಳಿತಾಯವೇ ಇಲ್ಲ. ಆತನ ಜೀವನ ಸಂಪೂರ್ಣವಾಗಿ ಖರ್ಚಿನ ಚಕ್ರದಲ್ಲಿ ಸಿಕ್ಕಿಕೊಂಡಿದೆ.
ಆ ಯುವಕ ಹೇಳಿದ್ದೇನು ಗೊತ್ತಾ? — “ನಾನು ಇಷ್ಟು ವರ್ಷ ದುಡಿದು ಈ ಹಂತಕ್ಕೆ ಬಂದಿದ್ದೇನೆ, ಈಗ ಜೀವನವನ್ನು ಅನುಭವಿಸುವ ಸಮಯ. ಮನೆ ಖರೀದಿಸಿದ ನಂತರ ಸೇವಿಂಗ್ಸ್ ಪ್ರಾರಂಭಿಸುತ್ತೇನೆ” ಎಂದು ಹೇಳಿದ್ದಾನೆ. ಆದರೆ ಪೋಪಟಾನಿ ಅವರ ಅಭಿಪ್ರಾಯ ಬೇರೆ. ಅವರು ಎಚ್ಚರಿಕೆ ನೀಡಿದ್ದಾರೆ — “ಇಂದು ಭಾರತದಲ್ಲಿ ನಿರುದ್ಯೋಗಿಗಳಿಗೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ವ್ಯವಸ್ಥೆ ಹೆಚ್ಚು ಇಲ್ಲ. ಇಂದೇ ಸೇವಿಂಗ್ಸ್ ಪ್ರಾರಂಭಿಸದಿದ್ದರೆ, ನಾಳೆ ದೊಡ್ಡ ಕಷ್ಟ ಎದುರಾಗಬಹುದು.”
ಅವರು ಯುವಕರಿಗೆ ಕೆಲವು ಪ್ರಮುಖ ಸಲಹೆ ನೀಡಿದ್ದಾರೆ. ಮೊದಲನೆಯದಾಗಿ, ಪ್ರತಿ ತಿಂಗಳು ಉಳಿತಾಯಕ್ಕೆ ಆದ್ಯತೆ ಕೊಡಿ. ಎರಡನೆಯದಾಗಿ, ತುರ್ತು ಪರಿಸ್ಥಿತಿಗಾಗಿ ಎಮರ್ಜೆನ್ಸಿ ಫಂಡ್ ಇಡಿ. ಮತ್ತು ಮೂರನೆಯದಾಗಿ, ನಿವೃತ್ತಿ ಜೀವನಕ್ಕೂ ಈಗಿನಿಂದಲೇ ಯೋಜನೆ ಮಾಡಿಕೊಳ್ಳಿ.