ಮಗಳ ಹೆಸರಿನಲ್ಲಿ ಕೇವಲ 2 ಸಾವಿರ ರೂ. ಹೂಡಿಕೆ ಮಾಡಿದರೆ ಮದುವೆ ಹೊತ್ತಿನಲ್ಲಿ ನಿಮಗೆ ಸಿಗುವುದು 11ಲಕ್ಷ !

ಹೆಣ್ಣು ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಈ ಯೋಜನೆಯಲ್ಲಿ  ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡಿದರೆ ಸಾಕು.   

Written by - Ranjitha R K | Last Updated : Oct 13, 2025, 07:33 PM IST
  • ಕೇಂದ್ರ ಸರ್ಕಾರದ ಜನಪ್ರಿಯ ಮತ್ತು ಪ್ರಮುಖ ಯೋಜನೆ
  • ಹೆಣ್ಣು ಮಗುವಿನ ಉತಮ ಭವಿಷ್ಯಕ್ಕಾಗಿ ರೂಪಿಸಿರುವ ಯೋಜನೆ
  • ಮದುವೆ ಹೊತ್ತಿನಲ್ಲಿ ನಿಮಗೆ ಸಿಗುವುದು 11ಲಕ್ಷ
ಮಗಳ ಹೆಸರಿನಲ್ಲಿ ಕೇವಲ 2 ಸಾವಿರ ರೂ. ಹೂಡಿಕೆ ಮಾಡಿದರೆ ಮದುವೆ ಹೊತ್ತಿನಲ್ಲಿ ನಿಮಗೆ ಸಿಗುವುದು 11ಲಕ್ಷ  !

ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿ,  ಜನಪ್ರಿಯ ಮತ್ತು ಪ್ರಮುಖ ಯೋಜನೆಯೊಂದನ್ನು ಜಾರಿಗೆ ತಂದಿದೆ. ನಿಮ್ಮ ಹೆಣ್ಣು ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಈ ಯೋಜನೆಯಲ್ಲಿ  ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡಿದರೆ ಸಾಕು. 

Add Zee News as a Preferred Source

ಈ ಯೋಜನೆಯಡಿಯಲ್ಲಿ, 10 ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆಗಳನ್ನು ತೆರೆಯಬಹುದು. ಕನಿಷ್ಠ ವಾರ್ಷಿಕ 250 ಮತ್ತು ಗರಿಷ್ಠ 1.5 ಲಕ್ಷ ಠೇವಣಿ ಇಡಬಹುದು. ಠೇವಣಿಗಳನ್ನು 15 ವರ್ಷಗಳವರೆಗೆ ಮಾಡಬೇಕು. ಆದರೆ ಖಾತೆಯು 21 ವರ್ಷಗಳವರೆಗೆ ಸಕ್ರಿಯವಾಗಿರುತ್ತದೆ. ಪ್ರಸ್ತುತ, ಸರ್ಕಾರವು ಈ ಯೋಜನೆಯಲ್ಲಿ ಮಾಡುವ ಹೂಡಿಕೆ ಮೇಲೆ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತದೆ. ಇದನ್ನು ತ್ರೈಮಾಸಿಕವಾಗಿ ಪರಿಷ್ಕರಿಸಲಾಗುತ್ತದೆ. ಈ ಯೋಜನೆಯಲ್ಲಿನ ಹೂಡಿಕೆಗಳು ತೆರಿಗೆ ಮುಕ್ತವಾಗಿದೆ. 

ಇದನ್ನೂ ಓದಿ : Car Loan : ದೀಪಾವಳಿಗೆ ಕಾರು ಖರೀದಿಸಬೇಕೆ? ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕುಗಳು ಇಲ್ಲಿವೆ

ಸುಕನ್ಯಾ ಸಮೃದ್ಧಿ ಯೋಜನೆ (SSY) ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಿ:
ನಿಮ್ಮ ಮಗಳಿಗೆ ಪ್ರಸ್ತುತ ಒಂದು ವರ್ಷ ವಯಸ್ಸಾಗಿದ್ದು, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (SSY) ಪ್ರತಿ ತಿಂಗಳು 2,000 ಠೇವಣಿ ಇಟ್ಟರೆ ವಾರ್ಷಿಕವಾಗಿ 24,000 ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಈ ಮೊತ್ತವನ್ನು 15 ವರ್ಷಗಳವರೆಗೆ ಠೇವಣಿ ಇಡುವುದರಿಂದ ಒಟ್ಟು 3.60 ಲಕ್ಷ ಹೂಡಿಕೆಯಾಗುತ್ತದೆ. 8.2% ಬಡ್ಡಿದರದಲ್ಲಿ ಸಂಯೋಜಿತವಾಗಿದ್ದರೆ, 21 ವರ್ಷಗಳ ನಂತರ 11.08 ಲಕ್ಷವಾಗುವುದು. ಇದರರ್ಥ ನೀವು ಠೇವಣಿಯ ಎರಡೂವರೆ ಪಟ್ಟು ಹೆಚ್ಚು ಆದಾಯ ಗಳಿಸುತ್ತೀರಿ. 16 ರಿಂದ 21 ನೇ ವರ್ಷದವರೆಗೆ ಯಾವುದೇ ಹೊಸ ಠೇವಣಿಗಳ ಅಗತ್ಯವಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಹಿಂದೆ ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿ ಸಂಗ್ರಹವಾಗುತ್ತಲೇ ಇರುತ್ತದೆ. ಇದರಿಂದಾಗಿ ಒಟ್ಟು ಮೊತ್ತವು 21 ವರ್ಷಗಳ ನಂತರ ಸುಮಾರು 11.08 ಲಕ್ಷಕ್ಕೆ ಏರುತ್ತದೆ. 

ಇದನ್ನೂ ಓದಿ : ನಗದು ರೂಪದಲ್ಲಿ ಹಣ ಪಾವತಿಸಿ ಚಿನ್ನ ಖರೀದಿಸಿದ್ರೆ ಜಿಎಸ್‌ಟಿ ಎಷ್ಟು..? ಆಭರಣ ಪ್ರಿಯರೇ ಈ ನಿಯಮದ ಬಗ್ಗೆ ಮೊದಲು ತಿಳಿದುಕೊಳ್ಳಿ

ಖಾತೆ ತೆರೆದ 21 ವರ್ಷಗಳ ನಂತರವೇ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದರೆ ಮಗಳು 18 ವರ್ಷ ತಲುಪಿ ಅವಳ ಶಿಕ್ಷಣಕ್ಕೆ ಹಣದ ಅಗತ್ಯವಿದ್ದರೆ, ಆ ಸಮಯಕ್ಕಿಂತ ಮೊದಲು 50% ಮೊತ್ತವನ್ನು ಹಿಂಪಡೆಯಬಹುದು. ಉಳಿದ ಮೊತ್ತವು ಮುಕ್ತಾಯದ ನಂತರ ಲಭ್ಯವಿದೆ.

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News