)
LIC Best Scheme: ನೀವು ಜೀವನಪರ್ಯಂತ ರಕ್ಷಣೆಯ ಜೊತೆಗೆ ಉತ್ತಮ ಆದಾಯ ನೀಡುವ ಯೋಜನೆಯನ್ನು ಹುಡುಕುತ್ತಿದ್ದರೆ, LIC ಜೀವನ್ ಉಮಾಂಗ್ ಪಾಲಿಸಿ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಈ ಯೋಜನೆ ಜೀವನಪರ್ಯಂತ ರಕ್ಷಣೆಯನ್ನ ಒದಗಿಸುತ್ತದೆ. ಇದು 100 ವರ್ಷಗಳವರೆಗೆ ವಾರ್ಷಿಕ ಆದಾಯವನ್ನ ಸಹ ನೀಡುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 1,302 ರೂ. ಹೂಡಿಕೆ ಮಾಡುವ ಮೂಲಕ, ಅಂದರೆ ವರ್ಷಕ್ಕೆ ಸುಮಾರು 15,600 ರೂ. ಹೂಡಿಕೆ ಮಾಡಿ ನೀವು ದೊಡ್ಡ ಮೊತ್ತದ ಉಳಿತಾಯ ಮತ್ತು ಶಾಶ್ವತ ಆದಾಯವನ್ನ ಪಡೆಯಬಹುದು. ತಿಂಗಳಿಗೆ ಕೇವಲ 1,302 ರೂ. ಹೂಡಿಕೆ ಮಾಡುವ ಮೂಲಕ ನೀವು ಹೇಗೆ ದೊಡ್ಡಮಟ್ಟದ ಪ್ರಯೋಜನಗಳನ್ನ ಪಡೆಯಬಹುದು ಎಂಬುದರ ಬಗ್ಗೆ ತಿಳಿಯಿರಿ...
ಎಲ್ಐಸಿ ಜೀವನ್ ಉಮಂಗ್ ಯೋಜನೆ ಎಂದರೇನು?
ಎಲ್ಐಸಿ ಜೀವನ್ ಉಮಂಗ್ ಯೋಜನೆಯು 100 ವರ್ಷಗಳವರೆಗೆ ವಿಮಾ ರಕ್ಷಣೆಯನ್ನ ಒದಗಿಸುತ್ತದೆ. ಇದರರ್ಥ ನೀವು ಬದುಕಿರುವವರೆಗೂ (ಗರಿಷ್ಠ 100 ವರ್ಷಗಳವರೆಗೆ) ಪ್ರತಿ ವರ್ಷವೂ ನಿಗದಿತ ಮೊತ್ತವನ್ನ ಪಡೆಯುತ್ತೀರಿ. ಈ ಯೋಜನೆಯಲ್ಲಿ ನೀವು ಬೋನಸ್ ಮತ್ತು ಖಾತರಿಯ ಪ್ರಯೋಜನಗಳನ್ನ ಪಡೆಯುತ್ತೀರಿ. ಈ ಯೋಜನೆಯು ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸೂಕ್ತವಾಗಿದೆ. ಏಕೆಂದರೆ 90 ದಿನಗಳ ಮಗುವಿನಿಂದ 55 ವರ್ಷ ವಯಸ್ಸಿನ ಯಾರಾದರೂ ಇದರಲ್ಲಿ ಹೂಡಿಕೆ ಮಾಡಬಹುದು.
ವರ್ಷಕ್ಕೆ 40,000 ರೂ. ಗಳಿಸುವ ಯೋಜನೆ
ನೀವು 30ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ 30 ವರ್ಷಗಳವರೆಗೆ ಪ್ರತಿ ತಿಂಗಳು 1,302 ರೂ. ಠೇವಣಿ ಇಡುತ್ತೀರಿ ಎಂದಿಟ್ಟುಕೊಳ್ಳಿರಿ. ನೀವು ವರ್ಷಕ್ಕೆ 15,600 ರೂ. ಹೂಡಿಕೆ ಮಾಡುತ್ತೀರಿ, ಅಂದರೆ 30 ವರ್ಷಗಳಲ್ಲಿ ಒಟ್ಟು 4.68 ಲಕ್ಷ ರೂ. ಆಗುತ್ತದೆ. ನಿಮ್ಮ ಪ್ರೀಮಿಯಂ ಪಾವತಿ ಅವಧಿ ಪೂರ್ಣಗೊಂಡ ನಂತರ ನೀವು ಪ್ರತಿ ವರ್ಷ 40,000 ರೂ.ಗಳವರೆಗೆ ಖಾತರಿಯ ಆದಾಯ ಪಡೆಯಲು ಪ್ರಾರಂಭಿಸುತ್ತೀರಿ. ನೀವು 100 ವರ್ಷ ವಯಸ್ಸನ್ನ ತಲುಪುವವರೆಗೆ ಈ ಆದಾಯ ಮುಂದುವರಿಯುತ್ತದೆ. ನೀವು 30ನೇ ವಯಸ್ಸಿನಲ್ಲಿ ಈ ಯೋಜನೆ ಪ್ರಾರಂಭಿಸಿ 100 ವರ್ಷಗಳವರೆಗೆ ಬದುಕಿದರೆ ನೀವು ಒಟ್ಟು 27.60 ಲಕ್ಷ ರೂ.ಗಳವರೆಗೆ ಆದಾಯ ಪಡೆಯಬಹುದು.
100 ವರ್ಷಗಳವರೆಗಿನ ಜೀವ ವಿಮೆ, ತೆರಿಗೆ ಉಳಿತಾಯ
ಈ ಪಾಲಿಸಿಯೊಂದಿಗೆ ನೀವು ನಿಯಮಿತ ಆದಾಯವನ್ನ ಪಡೆಯುವುದಲ್ಲದೆ, ನಿಮ್ಮ ಉಳಿದ ಜೀವನಪರ್ಯಂತ ಅಂದರೆ 100 ವರ್ಷಗಳವರೆಗೆ ಜೀವ ವಿಮಾ ರಕ್ಷಣೆಯನ್ನ ಪಡೆಯುತ್ತೀರಿ. ಇದರೊಂದಿಗೆ ಈ ಯೋಜನೆಯಡಿ ಪಡೆದ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ನೀವು ಸೆಕ್ಷನ್ 80C ಅಡಿಯಲ್ಲಿ ಪ್ರೀಮಿಯಂ ಮೇಲೆ ಮತ್ತು ಸೆಕ್ಷನ್ 10(10D) ಅಡಿಯಲ್ಲಿ ಮೆಚ್ಯೂರಿಟಿ ಮೊತ್ತದ ಮೇಲೆ ತೆರಿಗೆ ವಿನಾಯಿತಿಯನ್ನ ಪಡೆಯಬಹುದು.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)