)
ಇತ್ತೀಚಿನ ದಿನಗಳಲ್ಲಿ, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಹೆಸರು ಎಸ್ಬಿಐ ಪ್ರಕರಣವೊಂದರಲ್ಲಿ ಸುದ್ದಿಯಲ್ಲಿದೆ. ಅನಿಲ್ ಅಂಬಾನಿ ಅವರ ಕಂಪನಿಗಳ ಷೇರುಗಳ ಮೇಲೂ ಇದರ ಪರಿಣಾಮ ಕಂಡುಬಂದಿದೆ. ಆದರೆ ಈಗ ಸರ್ಕಾರಿ ಬ್ಯಾಂಕುಗಳಾದ ಎಸ್ಬಿಐ ಮತ್ತು ಕೆನರಾ ಬ್ಯಾಂಕ್ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಂಡ ರೀತಿ ಆಶ್ಚರ್ಯಕರವಾಗಿದೆ. ಎಸ್ಬಿಐ ಮತ್ತು ಕೆನರಾ ಬ್ಯಾಂಕ್ ಮೊದಲು ನೋಟಿಸ್ ನೀಡಿ ಈಗ ಅದನ್ನು ಹಿಂತೆಗೆದುಕೊಳ್ಳುವ ಮೂಲಕ ಯು-ಟರ್ನ್ ಹೊಡೆದಿದೆ. ಬ್ಯಾಂಕುಗಳು ಅನಿಲ್ ಅಂಬಾನಿ ವಿರುದ್ಧ ಅನಿಯಂತ್ರಿತ ಮತ್ತು ತಾರತಮ್ಯದ ರೀತಿಯಲ್ಲಿ ಹೇಗೆ ಕೆಲಸ ಮಾಡುತ್ತಿವೆ ಎಂಬುದನ್ನು ಇದು ತೋರಿಸುತ್ತದೆ.
ಅನಿಲ್ ಅಂಬಾನಿ ವಿರುದ್ಧ ಬ್ಯಾಂಕುಗಳ ಅನಿಯಂತ್ರಿತ ಕ್ರಮ :
ಎಸ್ಬಿಐ ಮೊದಲು ಅನಿಲ್ ಅಂಬಾನಿ ಕಂಪನಿ ರಿಲಯನ್ಸ್ ಕಮ್ಯುನಿಕೇಶನ್ನ 5 ಕಾರ್ಯನಿರ್ವಾಹಕೇತರ ನಿರ್ದೇಶಕರ ವಿರುದ್ಧ ಶೋ-ಕಾಸ್ ನೋಟಿಸ್ ನೀಡಿತು.ಆದರೆ ಈಗ ಆ ಶೋ-ಕಾಸ್ ನೋಟಿಸ್ ಅನ್ನು ಹಿಂಪಡೆಯಲಾಗಿದೆ. ಅದೇ ರೀತಿ, ಕೆನರಾ ಬ್ಯಾಂಕ್ ಕೂಡಾ ಜುಲೈ 10 ರಂದು ಬಾಂಬೆ ಹೈಕೋರ್ಟ್ ಮುಂದೆ ಮೊದಲು ನೋಟಿಸ್ ನೀಡಿ ನಂತರ ಬೇಷರತ್ತಾಗಿ ಹಿಂತೆಗೆದುಕೊಂಡಿತು. ಕೆನರಾ ಬ್ಯಾಂಕ್ ರಿಲಯನ್ಸ್ ಕಮ್ಯುನಿಕೇಶನ್ನ ಖಾತೆ ಮತ್ತು ಅನಿಲ್ ಅಂಬಾನಿಯನ್ನು ವಂಚನೆ ಎಂದು ವರ್ಗೀಕರಿಸಿದೆ. ಈಗ ಕೆನರಾ ಬ್ಯಾಂಕ್ ಅದನ್ನು ಬೇಷರತ್ತಾಗಿ ಹಿಂತೆಗೆದುಕೊಂಡಿದೆ.
ಅನಿಲ್ ಅಂಬಾನಿ ಮತ್ತು ಆರ್ಕಾಮ್ ವಿರುದ್ಧ ಬ್ಯಾಂಕುಗಳ ತಾರತಮ್ಯ ವರ್ತನೆ :
ಅನಿಲ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಕಮ್ಯುನಿಕೇಶನ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ನ ನೈಸರ್ಗಿಕ ನ್ಯಾಯದ ತತ್ವವನ್ನು ನಿರ್ಲಕ್ಷಿಸಿ, ಬ್ಯಾಂಕುಗಳು ನಿರಂಕುಶವಾಗಿ ವರ್ತಿಸಿವೆ ಅಲ್ಲದೆ ಕೈಗಾರಿಕೋದ್ಯಮಿ ವಿರುದ್ಧ ತಾರತಮ್ಯ ಮನೋಭಾವವನ್ನು ಅಳವಡಿಸಿಕೊಂಡಿವೆ. ಅನಿಲ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಕಮ್ಯುನಿಕೇಷನ್ ಬಗ್ಗೆ ಎಸ್ಬಿಐ ಅನಿಯಂತ್ರಿತ ನಿರ್ಧಾರಗಳನ್ನು ತೆಗೆದುಕೊಂಡ ರೀತಿ ಬ್ಯಾಂಕಿನ ಕೆಲಸದ ವಿಧಾನ, ಬ್ಯಾಂಕಿನ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ನಿಷ್ಪಕ್ಷಪಾತತೆಯನ್ನು ನೇರವಾಗಿ ಪ್ರಶ್ನಿಸುವಂತಿದೆ.
ಅನಿಲ್ ಅಂಬಾನಿಗೆ ತಮ್ಮ ಪರ ವಾದ ಮಂಡಿಸಲೂ ಅವಕಾಶ ನೀಡಲಿಲ್ಲ :
ಅನಿಲ್ ಅಂಬಾನಿ ಮತ್ತು ಅವರ ಕಂಪನಿಗೆ ಈ ವಿಷಯದಲ್ಲಿ ತಮ್ಮ ಪರವಾಗಿ ಮಂಡಿಸಲು ಅವಕಾಶವನ್ನೂ ನೀಡಲಿಲ್ಲ. ಬದಲಾಗಿ ಪಕ್ಷಪಾತದ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ವಿಷಯದಲ್ಲಿ ಅವರಿಗೆ ತಮ್ಮ ಪರವಾಗಿ ವಾದ ಮಂಡಿಸುವ ಅವಕಾಶ ಸಿಗಲಿಲ್ಲ. ಎಸ್ಬಿಐನ ಈ ವರ್ತನೆ ಬ್ಯಾಂಕಿನ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ಹಣಕಾಸು ಸಂಸ್ಥೆಯ ನಿರ್ಧಾರಗಳು ಖ್ಯಾತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.
ನ್ಯಾಯಾಂಗ, ನಿಯಂತ್ರಕ ಚೌಕಟ್ಟನ್ನು ಮೀರಿ ತೆಗೆದುಕೊಂಡ ನಿರ್ಧಾರ :
ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ವೈಯಕ್ತಿಕ ವಿಚಾರಣೆಗೆ ಅವಕಾಶವೂ ಸಿಗಲಿಲ್ಲ, ಇದು ಅವರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ. ನ್ಯಾಯಾಂಗ ಮತ್ತು ನಿಯಂತ್ರಕ ಚೌಕಟ್ಟನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ಎಸ್ಬಿಐ ಅನಿಲ್ ಅಂಬಾನಿ ಮತ್ತು ಆರ್ಕಾಮ್ ವಿರುದ್ಧ ಪಕ್ಷಪಾತದ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕೂ ಮೊದಲು, 2023 ರಲ್ಲಿ ಎಸ್ಬಿಐ ವರ್ಸಸ್ ರಾಜೇಶ್ ಅಗರ್ವಾಲ್, 2022 ರಲ್ಲಿ ಟಿ. ಟಕಾನೊ ವರ್ಸಸ್ ಸೆಬಿ, 2025 ರಲ್ಲಿ ಅಂಕಿತ್ ಭುವಲ್ಕಾ ವರ್ಸಸ್ ಐಡಿಬಿಐ ಬ್ಯಾಂಕ್ ಮತ್ತು 2024 ರಲ್ಲಿ ಮಿಲಿಂದ್ ಪಟೇಲ್ ವರ್ಸಸ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಅನೇಕ ಪ್ರಕರಣಗಳು ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ ಮುಂದೆ ಬಂದಿವೆ. ಈ ಎಲ್ಲಾ ಪ್ರಕರಣಗಳಲ್ಲಿ, ಎಲ್ಲಾ ದಾಖಲೆಗಳು ಸಾಬೀತುಪಡಿಸುವವರೆಗೆ ಖಾತೆಯನ್ನು ವಂಚನೆ ಎಂದು ಘೋಷಿಸಲಾಗಿಲ್ಲ, ಮತ್ತು ಆರೋಪಿತ ವ್ಯಕ್ತಿಗೆ ತನ್ನ ವಾದವನ್ನು ಮಂಡಿಸುವ ಅಗತ್ಯವನ್ನು ಒತ್ತಿ ಹೇಳಲಾಗಿತ್ತು. ಆದರೆ ಅನಿಲ್ ಅಂಬಾನಿ ಪ್ರಕರಣದಲ್ಲಿ ಇವೆಲ್ಲವನ್ನೂ ನಿರ್ಲಕ್ಷಿಸಲಾಗಿದೆ. ಜೊತೆಗೆ ಆರ್ಬಿಐ ಮಾರ್ಗಸೂಚಿಗಳನ್ನು ಸಹ ನಿರ್ಲಕ್ಷಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳನ್ನು ನೋಡುವುದಾದರೆ ಬ್ಯಾಂಕುಗಳು ಎಲ್ಲಾ ತತ್ವಗಳನ್ನು ಅನುಸರಿಸುವುದು ಅಗತ್ಯ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ಈ ಬದ್ಧ ನಿಯಮಗಳು ಮತ್ತು ಸೂಚನೆಗಳನ್ನು ನಿರ್ಲಕ್ಷಿಸುವ ಮೂಲಕ ಎಸ್ಬಿಐ ಕಾನೂನಿನ ನಿಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕ್ರಮ ಕೈಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ.
FRAUD ಎಂದು ಘೋಷಿಸಿದ್ದ ಕೆನರಾ ಬ್ಯಾಂಕ್ :
ರಿಲಯನ್ಸ್ ಕಮ್ಯುನಿಕೇಷನ್ ಸಾಲದಾತರ ಒಕ್ಕೂಟದ ಸದಸ್ಯರಾದ ಕೆನರಾ ಬ್ಯಾಂಕ್, ಕಂಪನಿಯ ಖಾತೆಯನ್ನು ಮತ್ತು ಅನಿಲ್ ಅಂಬಾನಿಯನ್ನು FRAUD ಎಂದು ವರ್ಗೀಕರಿಸಿತ್ತು. ಈ ವಿಷಯ ನ್ಯಾಯಾಲಯವನ್ನು ತಲುಪಿದಾಗ, ಬ್ಯಾಂಕ್ ಯಾವುದೇ ಷರತ್ತುಗಳಿಲ್ಲದೆ ವಂಚನೆ ವರ್ಗೀಕರಣವನ್ನು ಹಿಂತೆಗೆದುಕೊಂಡಿತು. ಯಾಕೆಂದರೆ ಈ ಪ್ರಕರಣ ನ್ಯಾಯಾಲಯದ ಮುಂದೆ ನಿಲ್ಲುವುದಿಲ್ಲ ಎನ್ನುವ ವಿಚಾರವನ್ನು ಬ್ಯಾಂಕ್ ಅರ್ಥಮಾಡಿಕೊಂಡಿತ್ತು ಎಂಬುದು ಸ್ಪಷ್ಟವಾಗಿತ್ತು. ಒಕ್ಕೂಟದ ಒಂದೇ ಬ್ಯಾಂಕಿನ ಇಂತಹ ಅನಿಯಂತ್ರಿತ ಕ್ರಮವು ಬ್ಯಾಂಕಿನ ಕಾರ್ಯನಿರ್ವಹಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ದೊಡ್ಡ ಸೂಚನೆಯಾಗಿದೆ.
5 ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಳಿಗೆ ಎಸ್ಬಿಐ ನೋಟಿಸ್ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲು ಅನಿಲ್ ಅಂಬಾನಿಯವರ ಕಂಪನಿ ರಿಲಯನ್ಸ್ ಕಮ್ಯುನಿಕೇಷನ್ನ 5 ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಳಿಗೆ ನೋಟಿಸ್ ನೀಡಿತು. ಆದರೆ ನಂತರ ಅದನ್ನು ಹಿಂತೆಗೆದುಕೊಂಡಿತು. ನೋಟಿಸ್ ನೀಡಲಾದವರ ವಿರುದ್ಧ ಕಂಪನಿಯ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಯಾವುದೇ ಪಾತ್ರವಿರಲಿಲ್ಲ, ಆದರೂ ಅವರಿಗೆ ನೋಟಿಸ್ ಕಳುಹಿಸಲಾಗಿದೆ.
5 ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಳ ಹೆಸರು ಮತ್ತು ವಿವರ :
ಶ್ರೀ ಅರುಣ್ ಕುಮಾರ್ ಪುರ್ವಾರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಅಧ್ಯಕ್ಷರು,
ಶ್ರೀ ರಾಜ್ ನಾರಾಯಣ್ ಮುರಾರಿ ಎಲ್. ಭಾರದ್ವಾಜ್, ಎಲ್ಐಸಿಯ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು,
ಶ್ರೀಮತಿ ಮಂಜರಿ ಅಶೋಕ್ ಕಾಕರ್, ಕೇಂದ್ರ ನೇರ ತೆರಿಗೆ ಮಂಡಳಿ ಮಾಜಿ ಸದಸ್ಯೆ,
ಶ್ರೀ ದೀಪಕ್ ಹರಿದೇವ್ ಶೌರಿ, ಬಿಬಿಸಿ ವರ್ಲ್ಡ್ವೈಡ್ ಮೀಡಿಯಾ ಮಾಜಿ ನಿರ್ದೇಶಕ,
ಪ್ರೊ. ಜಯರಾಮನ್ ರಾಮಚಂದ್ರನ್, ಐಐಎಂ ಬೆಂಗಳೂರಿನ ಕಾರ್ಪೋರೆಟ್ ಸ್ಟಾಟರ್ಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕರು .