ಅನಿಲ್ ಅಂಬಾನಿ ವಹಿಸಿಕೊಂಡಿದ್ದ ವ್ಯವಹಾರಗಳೆಲ್ಲರೂ ಆರ್ಥಿಕ ದಿವಾಳಿತನದತ್ತ ಮುಖಮಾಡಿದ್ರೆ, ಮುಖೇಶ್ ಅಂಬಾನಿ ವ್ಯವಹಾರದಿಂದ ಅವರ ವೈಭವ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ.
ಅನಿಲ್ ಅಂಬಾನಿ ಯಾವುದೇ ಪ್ಲಾನ್ ಇಲ್ಲದೆ ವ್ಯವಹಾರ ಮಾಡಲು ಆತುರದ ನಿರ್ಧಾರ ತೆಗೆದುಕೊಂಡರು. ಇದು ಅವರ ಕೈಸುಡುವಂತೆ ಮಾಡಿತು.
ಅನಿಲ್ ಅಂಬಾನಿ ಟೆಲಿಕಾಂ ಕಿಂಗ್ ಆಗಲು ಪಣತೊಟ್ಟ ಯೋಜನೆಗಳಿಗೆ ನಿರೀಕ್ಷೆಗಿಂತ ಹೆಚ್ಚು ವೆಚ್ಚವಾಯಿತಿ, ಆದರೆ ಆದಾಯವು ಅತ್ಯಲ್ಪವಾಗಿತ್ತು.
ಅನಿಲ್ ಅಂಬಾನಿ ಯಾವುದೇ ಒಂದು ವ್ಯವಹಾರದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗಲಿಲ್ಲ. ಅವರು ಒಂದು ವ್ಯವಹಾರದಿಂದ ಇನ್ನೊಂದಕ್ಕೆ ಬದಲಾಗುತ್ತಿದ್ದರು. ಇದೇ ನ್ಯೂನತೆಯಿಂದ ಅವರ ಬ್ಯುಸಿನೆಸ್ ನೆಲಕಚ್ಚಿತು.
ವೆಚ್ಚ ಜಾಸ್ತಿಯಾದ ಕಾರಣ ಅನಿಲ್ ಅಂಬಾನಿಯವರು ಸಾಲ ಮಾಡಬೇಕಾಯಿತು. ಆದರೆ ಅವರು ಹೂಡಿಕೆ ಮಾಡಿದ್ದ ವ್ಯವಹಾರಕ್ಕೆ ಸರಿಯಾದ ಆದಾಯ ಸಿಗಲಿಲ್ಲ.
ಅನಿಲ್ ಅಂಬಾನಿ ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿಯಲ್ಲಿದ್ದ ವ್ಯವಹಾರಕ್ಕೆ ಕೈಹಾಕಿ ಸುಟ್ಟುಕೊಂಡರು. ಯಾವುದೇ ಪ್ಲಾನ್ ಇಲ್ಲದೆ ಎಂಟ್ರಿ ಕೊಟ್ಟಿದ್ದರಿಂದ ನಷ್ಟ ಅನುಭವಿಸಬೇಕಾಯಿತು.
ಯಾವುದೇ ವ್ಯವಹಾರದಲ್ಲಿ ಬೆಳೆಯಲು ಗುರಿ ಮುಖ್ಯ. ಆದರೆ ಅನಿಲ್ ಅಂಬಾನಿ ಯಾವುದೇ ಗುರಿ ಇಲ್ಲದೆ ವ್ಯವಹಾರಕ್ಕೆ ಕೈಹಾಕಿ ನಷ್ಟ ಅನುಭವಿಸಿದರು.
ಅನಿಲ್ ಅಂಬಾನಿಯವರ ಹಲವು ಕಂಪನಿಗಳು ಸಾಲದ ಹೊರೆಯಲ್ಲಿ ಮುಳುಗಿವೆ. ಕಂಪನಿಗಳ ನಿರಂತರ ನಷ್ಟದಿಂದಾಗಿ ಅವರ ಸಾಲದ ಗ್ರಾಪ್ ನಿರಂತರವಾಗಿ ಹೆಚ್ಚುತ್ತಿದೆ.