)
ಬೆಂಗಳೂರು : ಜೈಲಿನಿಂದ ನಿನ್ನೆಯಷ್ಟೇ ಬಿಡುಗಡೆ ಆಗಿದ್ದವ ಮನೆಗೆ ಬಂದಿದ್ದ.. ಬಂದವನಿಗೇ ಒಂದು ಕರೆ ಬಂದಿತ್ತು.. ಆತನಿಂದ ಹಲ್ಲೆಗೆ ಒಳಗಾಗಿದ್ದವನೇ ಮಾತುಕತೆಗೆ ಅಂತಾ ಕರೆದು ತನ್ನ ಸ್ನೇಹಿತನ ಜೊತೆಗೂಡಿ ಕೊಚ್ಚಿ ಕೊಲೆ ಮಾಡಿದ್ದಾನೆ.. ಹೀಗೆ ಹತ್ಯೆಗೈದಿದ್ದ ಹಂತಕರನ್ನ ಕಾಲಿಗೆವಗುಂಡೇಟು ಹೊಡೆದು ಜೆಜೆ ನಗರ ಠಾಣೆ ಪೊಲೀಸ್ರು ಬಂಧಿಸಿದ್ದಾರೆ..
ಅಂದ್ಹಾಗೆ ಗುಂಡೇಟು ತಿಂದ ಅರೆಸ್ಟ್ ಆಗಿರೋ ಇವ್ರೇ ನೋಡಿ ಆ ಇಬ್ರು ಹಂತಕರು.. ದೀಪು (28) ಹಾಗೂ ಅರುಣ್ (27).. ಇಬ್ಬರೂ ಜೆಜೆ ನಗರ ಠಾಣೆ ವ್ಯಾಪ್ತಿಯವ್ರೇ.. ನಿನ್ನೆ ರಾತ್ರಿ ಜೆ.ಜೆ.ನಗರದ ಜನತಾ ಕಾಲೋನಿಯಲ್ಲಿ ವಿಜಯ್ (26) ಎಂಬಾತನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು..
ಅಂದ್ಹಾಗೆ ಕೊಲೆಯಾಗಿರೋ ವಿಜಯ್ ಹಾಗೂ ಅರುಣ್ ಮಧ್ಯೆ ಈ ಮುಂಚೆಯಿಂದಲೂ ಗಲಾಟೆ ಇತ್ತು.. ಇಬ್ಬರೂ ಒಬ್ರಿಗೊಬ್ಬರು ಧ್ವೇಷ ಹೆಚ್ಚಿಸಿಕೊಂಡಿದ್ರು. ಅರುಣ್ ಹಾಗೂ ವಿಜಯ್, ಕೆಲ ತಿಂಗಳುಗಳ ಹಿಂದೆ ಕಿತ್ತಾಡಿಕೊಂಡಿದ್ದರು. ಜಗಳದ ವೇಳೆ ಅರುಣ್ಗೆ ಕೊಲೆಯಾದ ವಿಜಯ್ ಚಾಕುವಿನಿಂದ ಇರಿದಿದ್ದ.. ಅರುಣ್ ಆಸ್ಪತ್ರೆ ಸೇರಿದ್ರೆ ಆಫ್ ಮರ್ಡರ್ ಕೇಸ್ ನಲ್ಲಿ ವಿಜಯ್ ಜೈಲಿಗೆ ಹೋಗಿದ್ದ.. ಚಾಕು ಚುಚ್ಚಿಸಿಕೊಂಡು ಹಲ್ಲೆಗೆ ಒಳಗಾಗಿದ್ದ ಅರುಣ್ ಗಲಾಟೆ ನಂತರ ವಿಜಯ್ ಮೇಲೆ ಧ್ವೇಷ ಹೆಚ್ಚಿಸಿಕೊಂಡಿದ್ದ..
ವಿಜಯ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಅರುಣ್ ಕಾಯುತ್ತಿದ್ದ.. ಇದೇ ವೇಳೆ ನಿನ್ನೆಯಷ್ಟೇ ಜೈಲಿನಿಂದ ವಿಜಯ್ ಬಿಡುಗಡೆ ಆಗಿದ್ದ.. ಈ ಬಗ್ಗೆ ಮಾಹಿತಿ ಪಡೆದಿದ್ದ ಆರೋಪಿ ಅರುಣ್ ಬಿಡುಗಡೆಯಾಗಿದ್ದ ವಿಜಯ್ನನ್ನ ರಾಜಿ ಸಂಧಾನಕ್ಕೆಂದು ಜನತಾ ಕಾಲೋನಿ ಬಳಿ ಅರುಣ್ ಕರೆಸಿದ್ದ.. ರಾತ್ರಿ ಮಾತುಕತೆಗೆಂದು ಬಂದ ವಿಜಯ್ನನ್ನ ಅರುಣ್ ಮತ್ತು ದೀಪು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ರು.. ಆರೋಪಿಗಳ ಕೃತ್ಯ ಇಡೀ ಏರಿಯಾವನ್ನೇ ಬೆಚ್ಚಿ ಬೀಳಿಸಿತ್ತು.. ಬಳಿಕ ಪರಾರಿಯಾಗಿದ್ದ ಆರೋಪಿಗಳು ರಾಜರಾಜೇಶ್ವರಿ ನಗರದ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.
ಇನ್ನು ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜೆ.ಜೆ.ನಗರ ಠಾಣೆ ಪೊಲೀಸರಿಗೆ, ಆರೋಪಿಗಳು ಬಚ್ಚಿಟ್ಟಿಕೊಂಡಿದ್ದ ಮಾಹಿತಿ ಗೊತ್ತಾಗಿತ್ತು.. ಬಂಧಿಸೋಕೆ ಹೋಗಿದ್ದ ವೇಳೆ ಆರೋಪಿಗಳಿಬ್ಬರೂ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದರು.. ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್ಸಪೆಕ್ಟರ್ ಕೆಂಪೇಗೌಡ ಅವರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದರು..
ಆದ್ರೂ ಸಹ ಆರೋಪಿಗಳು ಮಾರಕಾಸ್ತ್ರಗಳನ್ನ ಬಳಸಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದರು. ಬಳಿಕ ಇಬ್ಬರ ಕಾಲಿಗೂ ಇನ್ಸ್ಪೆಕ್ಟರ್ ಕೆಂಪೇಗೌಡ ಅವರು ಗುಂಡು ಹೊಡೆದು ಪಡೆದಿದ್ದಾರೆ.. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟು ತಗುಲಿರೋ ಆರೋಪಿಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ