)
ಬೆಳಗಾವಿ : ಹೀಗೆ ಊರಿನ ತುಂಬೆಲ್ಲ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಬ್ಯಾನರ್, ಮನೆಯಲ್ಲಿ ಸಂಬಂಧಿಸಿಕರನ್ನ ಕರೆಸಿ ತಿಥಿ ಊಟ ಹಾಕಿಸಿದ ಕುಟುಂಬಸ್ಥರ ಈವೆಲ್ಲ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ. 19 ವರ್ಷದ ತನ್ನ ಮಗಳೊಬ್ಬಳು ಬೇರೆಯೊಬ್ಬನ ಜೊತೆ ಮನೆ ಬಿಟ್ಟು ಹೋಗಿದರಿಂದ ಮನನೊಂದು ತಂದೆ ತೀಥಿ ಊಟ ಹಾಕಿಸಿದ್ದಾನೆ..
ಸುಶ್ಮೀತಾ ಪಾಟೀಲ ನಾಗರಾಳ ಗ್ರಾಮದ ನಿವಾಸಿ ಅದೇ ಊರಿನ 29 ವರ್ಷದ ವಿಠ್ಠಲ ಬಸ್ತವಾಡೆ ಜೊತೆ ಪರಸ್ಪರ ಪ್ರೀತಿಸಿ ಮನೆಯಿಂದ ಪರಾರಿಯಾಗಿದ್ದಾಳೆ ಇದಕ್ಕೆ ಮನನೊಂದು ತಂದೆ ಶಿವಗೌಡ ಪಾಟೀಲ ಸಂಸ್ಕಾರ ಇಲ್ಲದ ಮಗಳ ಇವತ್ತೇ ನನ್ನ ಪಾಲಿಗೆ ಸತ್ತಳು ಮಾರುನೇ ದಿನ ತಿಥಿ ಕಾರ್ಯ ಮುಗಿಸಿ ತನ್ನ ಕರುಳು ಬಳ್ಳಿ ಸಂಬಂಧವನ್ನೆ ಕತ್ತರಿಸಿಕೊಂಡಿದಾನೆ.
ಇನ್ನು ಶಿವಗೌಡ ಪಾಟೀಲಗೆ 4 ಜನ ಹೆಣ್ಣು ಮಕ್ಕಳು ಇದ್ರಂತೆ ಅದರಲ್ಲಿ ಸುಷ್ಮಿತಾ ಕೊನೆಯವಳ ಆಗಿದ್ದರಿಂದ ಮುದ್ದಾಗಿ ಸಾಕಿದ್ವಿ ಅಂತ ಹೇಳ್ತಾರೆ ತಂದೆ ಶಿವಗೌಡ ಪಾಟೀಲ. ಪ್ರೀತಿ ಮಾಯ ಬಜಾರು ಅಂತಾರೆ ಪ್ರೀತಿ ಪ್ರೇಮದಲ್ಲಿ ಬಿದ್ದ ಮಗಳು ತಂದೆ ತಾಯಿಯನ್ನೆ ಪ್ರಿಯಕರ ಜೊತೆ ಓಡಿ ಹೋಗಿದ್ದು ಹೆತ್ತ ತಂದೆ ತಾಯಿಯ ಮನನೊಂದು ಮಾಡಿದೆ ಅಂದ್ರೆ ತಪ್ಪಾಗಲಾರದು.