ಬೆಂಗಳೂರು: ದೂರದ ಊರಿನಿಂದ ಬಂದವರು ಜೀವನ ಕಟ್ಟಿಕೊಳ್ಳಲು ಶುರು ಮಾಡಿದ್ದರು. ಸಣ್ಣದಾದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಓನರ್ ಬಾಡಿಗೆ ಕೇಳುವುದಕ್ಕೆ ಮನೆಯ ಹತ್ತಿರ ಬಂದಿದ್ದಾರೆ. ಕಿಟಿಕಿ ಓಪನ್ ಮಾಡಿದಾಗ ಒಂದು ಕ್ಷಣ ಶಾಕ್ ಆಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಾಗಾದ್ರೆ ಅಲ್ಲಿ ಆಗಿದ್ದಾದ್ರು ಏನು ಅನ್ನೊದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ..
ಜೋರು ಗಾಳಿ, ಮಳೆ ಬಂದ್ರೆ ಬೀಳುವ ಹಾಗೆ ಇರುವ ಗೊಡೆಗಳು, ಜೋರಾಗಿ ತಳ್ಳಿದ್ರೆ ಮುರಿದು ಬಿಳುವ ಬಾಗಿಲು, ಮನೆಯ ಕಡೆ ಆತಂಕದಿಂದ ನೋಡುತ್ತಿರುವ ಜನ ಮನೆಯ ಒಳಗಡೆ ಯಾರು ಹೋಗದಂತೆ ಟೇಪ್ ಹಾಕಿರುವ ಪೊಲೀಸರು ಇದಕ್ಕೆಲ್ಲ ಕಾರಣ ಗರ್ಭಿಣಿಯ ಅನುಮಾನಸ್ಪದ ಸಾವು.
ಈ ದಂಪತಿಯ ಹೆಸರು ಶುಭಂ ಹಾಗೂ ಸುಮನಾ. ಮೂಲತಃ ಉತ್ತರ ಪ್ರದೇಶದವರು. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಥಣಿಸಂದ್ರದಲ್ಲಿ ಮಹೇಶ ಅನ್ನೊರ ಮನೆಯಲ್ಲಿ ಬಾಡಿಗೆಗೆ ಇದ್ರು. ಶುಭಂ ಪೆಂಟಿಂಗ್ ಕೆಲಸ ಮಾಡ್ತಿದ್ರೆ, ಸುಮನಾ ಮನೆಯಲ್ಲಿಯೇ ಇರಿತ್ತಿದ್ದಳು.ತಾನಾಯಿತು ತನ್ನ ಕೆಲಸವಾಯಿತು ಎಂದು ದಂಪತಿ ಮನೆಯಲ್ಲಿ ಇರ್ತಿದ್ರಂತೆ..
ಇದನ್ನೂ ಓದಿ: ಮೈಸೂರು: ಸ್ಕೂಟರ್ ಸವಾರಿ ಮಾಡುತ್ತಿದ್ದ ವೃದ್ಧನ ಮೇಲೆ ಹರಿದ ಕೆಎಸ್ಆರ್ಟಿಸಿ ಬಸ್
ಕಳೆದ ತಿಂಗಳು ಬಾಡಿಗೆ ಕೊಡದ ಕಾರಣ ಮನೆ ಮಾಲೀಕ ಬಂದು ನೋಡಿದಾಗ ಮನೆಯ ಒಳಗಡೆಯಿಂದ ಏನೋ ವಾಸನೆ ಬರ್ತಿತ್ತಂತೆ. ಆಗ ಕಿಟಿಕಿಯಿಂದ ಇಣುಕಿ ನೋಡಿದ್ದಾರೆ.ಆಗ ಮಹಿಳೆಯು ಮೃತಪಟ್ಟ ಸ್ಥಿತಿಯಲ್ಲಿ ಕಂಡಿದ್ದಾರೆ,ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ.
ಸ್ಪಾಟ್ ಗೆ ಬಂದು ಪರಿಶೀಲನೆ ಮಾಡಿದಾಗ ಸುಮಾನ ಮೃತಪಟ್ಟಿದ್ದಾಳೆ. ಅಲ್ಲದೆ ಎರಡು ದಿನಗಳ ಹಿಂದೆಯೇ ಸುಮಾನಾ ಮೃತಪಟ್ಟಿರೋ ಸಂಶಯವಿದೆಯಂತೆ.ಇನ್ನೂ ಹೆಂಡತಿ ಮೃತಪಟ್ಟಿದ್ರು ಗಂಡ ಮಾತ್ರ ಎರಡು ದಿನ ಮನೆಯಲ್ಲೇ ಎಣ್ಣೆಹಾಕಿಕೊಂಡು,ಎಗ್ ಬುರ್ಜಿ ಮಾಡಿಕೊಂಡು ತಿಂದ್ದಿದ್ದಾನಂತೆ. ಏನು ಆಗಿಲ್ಲವೆಂಬಂತೆ ನಿನ್ನೆ ಬೆಳಗ್ಗೆ ಮನೆಯಿಂದ ಹೊಗಿದ್ದಾನೆ.
ಮಹಿಳೆಯ ಮೃತದೇಹದಿಂದ ಮೂಗು, ಬಾಯಿಯಲ್ಲಿ ರಕ್ತಸ್ರಾವವಾಗಿದೆ. ಮುಖ ಊದಿಕೊಂಡಿದೆ ಆದ್ರೆ ದೇಹದ ಮೇಲೆ ಯಾವುದೇ ಗುರುತುಗಳು ಕಂಡು ಬಂದಿಲ್ವಂತೆ. ಘಟನೆಯ ನಂತರ ಶುಭಂನನ್ನ
ನಿನ್ನೆ ತಡರಾತ್ರಿ ಯಲಹಂಕ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಪೊಲೀಸರು.
ಸದ್ಯ ಮೃತದೇಹವನ್ನು ಅಂಬೇಡ್ಕರ್ ಕಾಲೇಜಿಗೆ ರವಾನೆ ಮಾಡಿದ್ದು ಮರಣೋತ್ತರ ವರದಿ ಬಂದ ನಂತರ ಕೊಲೆಯೋ, ಆತ್ಮಹತ್ಯೆಯೋ ಅಥವಾ ಅಸಹಜ ಸಾವು ಅನ್ನೋದು ತಿಳಿದುಬರಲಿದೆ.
ಇದನ್ನೂ ಓದಿ: ಪತಿ ಕೊಲೆಗೆ ಗ್ರಾಪಂ ಸದಸ್ಯೆ ಸುಪಾರಿ..! ಜನಪ್ರಿಯ ಶಾಸಕರ ಕಾರ್ ಚಾಲಕ ಸಹಿತ 4 ಜನ ವಶ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.









