Nelamangala News: ಪತಿಯ ದಿನನಿತ್ಯದ ಕಿರುಕುಳಕ್ಕೆ ಬೇಸತ್ತು, ತಾಯಿ ತನ್ನ 5 ವರ್ಷದ ಮಗಳನ್ನು ಕೊಂ*ದು ತಾನೂ ಆತ್ಮಹ*ತ್ಯೆಗೆ ಯತ್ನಿಸಿದ ಮನಕುಲಕುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಕೆ.ಜಿ. ಲೆಕ್ಕೇನಹಳ್ಳಿ ಗ್ರಾಮದಲ್ಲಿ ಮನಕಲಕುವ ಘೋರ ಘಟನೆಯೊಂದು ನಡೆದಿದೆ.
ಮಹಾಲಕ್ಷ್ಮಿ ಎಂಬ ಮಹಿಳೆ, ತನ್ನ ಮಗಳು ಸಿರಿಯನ್ನ ವೇಲ್ನಿಂದ (ದುಪ್ಪಟ್ಟದಿಂದ) ಉಸಿರುಗಟ್ಟಿಸಿ ಕೊಂ*ದು ಹಾಕಿದ ನಂತರ, ತಾನೂ ಮನೆಯ ಸೀಟ್ ಕಂಬಿಗೆ ನೇಣು ಹಾಕಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಶಬ್ದ ಕೇಳಿ ಓಡಿ ಬಂದು ನೋಡಿದ ಪತಿ ಜಯರಾಮ್, ಪಕ್ಕದ ಮನೆಯವರ ಸಹಾಯದಿಂದ ತಾಯಿಯನ್ನು ಬಚಾವ್ ಮಾಡಿದ್ದಾನೆ. ಆದರೆ ಮಗುವನ್ನು ರಕ್ಷಿಸಲು ಆಗಲಿಲ್ಲ.
ಇದನ್ನೂ ಓದಿ- ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ: ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು.. ಇದು Z ಕನ್ನಡ ನ್ಯೂಸ್ ಬಿಗ್ ಇಂಪ್ಯಾಕ್ಟ್
ಮಹಾಲಕ್ಷ್ಮಿ ಈಗ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ ಜಯರಾಮ್ ಪೊಲೀಸ್ ವಶದಲ್ಲಿದ್ದಾರೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ- ಇಸ್ಪೀಟ್ ಅಡ್ಡೆ ಮೇಲೆ ದಾಳಿ: ₹49.50 ಲಕ್ಷ ನಗದು ವಶ
ಮಹಾಲಕ್ಷ್ಮಿ ಮತ್ತು ಜಯರಾಮ್ ಎಂಟು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜಯರಾಮ್ ಬಿಬಿಎಂಪಿಯಲ್ಲಿ ದಿನಗೂಲಿ ನೌಕರನಾಗಿದ್ದು, ಮಹಾಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದರು. ಇತ್ತೀಚೆಗೆ ಇಬ್ಬರೂ ಕೆಲಸ ಬಿಟ್ಟು ಮನೆಯಲ್ಲಿದ್ರು. ಪತಿ ಜಯರಾಮ್ ಅತಿಯಾದ ಮದ್ಯಪಾನ ಚಟಕ್ಕೆ ಬಿದ್ದಿದ್ದು ಇದರ ಪತ್ನಿಗೆ ಶಂಕೆ ವ್ಯಕ್ತಪಡಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಕುರಿತಾಗಿ ಮಹಾಲಕ್ಷ್ಮಿ ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಅದೇ ಕುಟುಂಬದ ಗಲಾಟೆಗೆ ಭೀಮನ ಅಮಾವಾಸ್ಯೆಯಂದು ಇಂತಹ ಭೀಕರ ಘಟನೆ ನಡೆದಿರುವುದು ಎಲ್ಲರಿಗೂ ಬೆಚ್ಚಿ ಬೀಳಿಸುವಂತಹ ಸಂಗತಿಯಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಈ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









