ಬಡ್ಡಿ ಹಣ ಕೊಡ್ತಿನಿ ಬಾ ಎಂದು ವೃದ್ಧನ ಮರ್ಡರ್: ಎರಡೇ ದಿನದಲ್ಲಿ ಮೂವರು ಅಂದರ್

ಮೈ ತುಂಬಾ ಸಾಲ ಮಾಡಿಕೊಂಡಿದ್ದವನಿಗೆ ವೃದ್ಧನ  ಮೈ ಮೇಲಿದ್ದ ಬಂಗಾರ ಮಾಡಬಾರದ ಕೆಲಸವನ್ನೇ ಮಾಡಿಸಿದೆ. ಸಾಲದ ಹಣವನ್ನು ಕೇಳಿದ್ದಕ್ಕೆ ವಯೋವೃದ್ಧನನ್ನು ಕೊಂದ ಮೂವರು ಈಗ ಜೈಲುಪಾಲಾಗಿದ್ದು ಇಲ್ಲಿದೆ ವೃದ್ಧನ ಮರ್ಡರ್ ಬಗೆಗಿನ ರಿಪೋರ್ಟ್.

Written by - Chetana Devarmani | Last Updated : Nov 14, 2025, 11:15 PM IST
  • 20 ಸಾವಿರ ಬಡ್ಡಿ ಹಣಕ್ಕೆ ತೆಗೆದೇ ಬಿಡ್ರು ವೃದ್ಧನ ಜೀವ
  • ಸ್ನೇಹಿತನ ಬಂಗಾರದ ಮಾತಿಗೆ ಜೈಲುಪಾಲಾದ ಗೆಳೆಯರು
  • ರಸ್ತೆಬದಿ ಉಸಿರುಟ್ಟಿಸಿ ಕೊಂದು 105 ಗ್ರಾಂ ಚಿನ್ನಾಭರಣ ಕದ್ದವರು ಅಂದರ್
ಬಡ್ಡಿ ಹಣ ಕೊಡ್ತಿನಿ ಬಾ ಎಂದು ವೃದ್ಧನ ಮರ್ಡರ್: ಎರಡೇ ದಿನದಲ್ಲಿ ಮೂವರು ಅಂದರ್

ಚಾಮರಾಜನಗರ : ಸಂಜೆ ಮನೆಯಿಂದ ತೆರಳಿದ್ದ ವ್ಯಕ್ತಿ ಮಾರನೇ ದಿನ ಪತ್ತೆಯಾಗಿದ್ದು ಮಾತ್ರ ಶವವಾಗಿ. ಜೀವನದ ಸಂಧ್ಯಾಕಾಲದಲ್ಲಿದ್ದ ವೃದ್ದನನ್ನು ಮಿಸುಕಾಡದಂತೆ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ ಡೆಡ್ಲಿ ಗ್ಯಾಂಗ್ ಕೊನೆಗೂ ಬಂಧನವಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಬೇಗೂರಿನಲ್ಲಿ ಬದುಕು ಕಟ್ಟಿಕೊಂಡು ವಾಸವಾಗಿದ್ದ 73 ವರ್ಷದ  ಎಚ್.ಎಂ.ಸ್ವಾಮಿ ಕೊಲೆಯಾದ ದುರ್ದೈವಿ.  ಸಾಲದ ಹಣ ಕೊಡ್ತಿನಿ ಬಾ ಎಂದು ಕರೆಸಿಕೊಂಡ ತೊಂಡವಾಡಿ ಗ್ರಾಮದ ಪರಶಿವಮೂರ್ತಿ ಹಾಗೂ ಈತನಿಗೆ ಸಾಥ್ ಕೊಟ್ಟ  ಸಿದ್ದರಾಜು ಮತ್ತು ಮಹೇಶ್ ಎಂಬವರು ಜೈಲುಪಾಲಾಗಿದ್ದಾರೆ.

Add Zee News as a Preferred Source

ವೃದ್ಧ ಸ್ವಾಮಿಯು ಜೀವನೋಪಾಯಕ್ಕಾಗಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅದೇ ರೀತಿ  ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪರಶಿವನಿಗೂ 20 ಸಾವಿರ ಸಾಲ ಕೊಟ್ಟಿದ್ದರು. ಸ್ವಾಮಿ ಅವರಿಗೆ ಚಿನ್ನದ ಮೇಲಿನ‌ ಮೋಹವೂ ಇತ್ತು. ನಾಲ್ಕು ಉಂಗುರ, ಬ್ರೇಸ್ ಲೆಟ್, ಸರ ಹೀಗೆ ಒಟ್ಟು 105 ಗ್ರಾಂ ಚಿನ್ನಾಭರಣ ಧರಿಸುತ್ತಿದ್ದರು. ಮೈತುಂಬಾ ಸಾಲ ಮಾಡಿಕೊಂಡಿದ್ದ ಪರಶಿವ ವೃದ್ದನ ಮೇಲಿನ ಚಿನ್ನ ಕಂಡು ಪ್ಲಾನ್ ಮಾಡಿ ಸಿದ್ದರಾಜು, ಮಹೇಶ್ ಜೊತೆ ಪಿತೂರಿ ನಡೆಸಿ ಕೊಲೆ ಮಾಡಿದ್ದಾರೆ.

ನವೆಂಬರ್ 10 ರ ಸಂಜೆ  ಮೈಸೂರಿನಿಂದ ಊರಿಗೆ ಬಂದಿದ್ದ ಸ್ವಾಮಿ ಅವರಿಗೆ ಬಡ್ಡಿ ಹಣವನ್ನು ಕೊಡುತ್ತೇನೆ ಬನ್ನಿ ಎಂದು ಪೋನ್ ಮಾಡಿ ಕರೆಸಿಕೊಂಡ ಪರಶಿವನ ಗ್ಯಾಂಗ್ ತನ್ನ ಆಟೋದಲ್ಲಿ ಸೋಮಹಳ್ಳಿ, ತೊಂಡವಾಡಿ, ಕಮರಹಳ್ಳಿ ಕಡೆಯೆಲ್ಲಾ ಸುತ್ತಾಡಿಸಿ ಬಳಿಕ ಕಮರಹಳ್ಳಿಯ ಸಮೀಪದ ರಸ್ತೆಬದಿ ಸ್ವಾಮಿ ಕುತ್ತಿಗೆಗೆ ಟವೆಲ್ ಬಿಗಿದು ಕೊಂದು ನಿರ್ಜನ ಪ್ರದೇಶದಲ್ಲಿ ಬೀಸಾಡಿದ್ದರು. 

ಮನೆಯಿಂದ ತೆರಳಿದ್ದ ಪತಿ ಕಾಣದೇ ಮಾರನೆ ದಿನ ಬೆಳಗ್ಗೆ ಶವವಾಗಿ ಬಿದ್ದಿದ್ದನ್ನು ಕಂಡ ಪತ್ನಿ ಅಮ್ಮಯ್ಯಭಾಯಿ ಬೇಗೂರು ಠಾಣೆಗೆ ದೂರು ಕೊಟ್ಟಿದ್ದರು‌. ತನ್ನ ಪತಿ ಸದಾ ಕುತ್ತಿಗೆಯಲ್ಲಿ ಧರಿಸುತ್ತಿದ್ದ ಹುಲಿಯುಗುರಿನ ಚಿನ್ನದ ಸರ ಹಾಗೂ ಕೈಬೆರಳಿನಲ್ಲಿ ಧರಿಸುತ್ತಿದ್ದ ಚಿನ್ನದ ಉಂಗುರಗಳು ಕಾಣೆಯಾಗಿದ್ದು  ಸಂಶಯಾಸ್ಪದವಾಗಿದೆ ಎಂದು ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಬೇಗೂರು ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಮೋಹಿತ್ ಸಹದೇವ್ ಹಾಗೂ ಸಿಬ್ಬಂದಿ   
ಸ್ವಾಮಿಗೆ ಅವರಿಗೆ ಮಾಡಿದ್ದ ಕಡೇ ಫೋನ್ ಕಾಲ್ ನ್ನು ಬೆನ್ನತ್ತಿ ಹೋದಾಗ ಪರಶಿವನ ಗ್ಯಾಂಗ್ ತಗ್ಲಾಕಿಕೊಂಡಿದೆ. 

ಆರೋಪಿಗಳಿಂದ ಚಿನ್ನ ಗಿರವಿಗಿಟ್ಟಿದ ಚೀಟಿ, ಎರಡು ಲಕ್ಷ ಹತ್ತು ಸಾವಿರ ನಗದು, ಚಿನ್ನದ ಬ್ರೇಸ್ ಲೆಟ್ ಹಾಗೂ ಉಂಗುರ ವಶಕ್ಕೆ ಪಡೆದು ಆರೋಪಿಗಳನ್ನು ಬೇಗೂರು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವೃದ್ಧನ ಕೊಂದು ಬಚಾವಾಗಬಹುದು ಎಂದುಕೊಂಡಿದ್ದ ಪರಶಿವನ ಗ್ಯಾಂಗ್ ತಗ್ಲಾಕಿಕೊಂಡಿದೆ. ಹಣ, ಚಿನ್ನಕ್ಕಾಗಿ ವೃದ್ಧನ ಕೊಂದ ಈ ಕಿರಾತಕರು ಮನುಷ್ಯ ಕುಲದಲ್ಲಿ ಹುಟ್ಟಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು ತೀರಿಸಲಾಗದಷ್ಟು ಸಾಲ‌ ಮಾಡಿಕೊಂಡು ಕೊನೆಗೇ ವೃದ್ಧನ ಜೀವ ತೆಗೆದಿರುವುದು ನಿಜಕ್ಕೂ ಘೋರ ಅಪರಾಧವಾಗಿದೆ. 

ಇದನ್ನೂ ಓದಿ :ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು

ಇದನ್ನೂ ಓದಿ : ಕಬ್ಬಿಗೆ ಏಕರೂಪ ಬೆಲೆ ಪಡೆಯುವುದರಲ್ಲಿ ರೈತರ ಕೈ ಮೇಲು

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News