ಬೆಂಗಳೂರು : ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚವತಾರದ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಸರ್ಕಾರಿ ಅಧಿಕಾರಿಯೊಬ್ಬರಿಂದ ಮಹಾವಂಚನೆ ಆಗಿರುವ ಆರೋಪ ಕೇಳಿ ಬಂದಿದೆ. 75 ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಸೇಲ್ ಡೀಡ್ ಮೂಲಕ ಸಂಬಂಧವೇ ಇಲ್ಲದ ವ್ಯಕ್ತಿಯ ಹೆಸರಿಗೆ ರಿಜಿಸ್ಟ್ರಾರ್ ಮಾಡಿರುವ ಆರೋಪ ಕೇಳಿ ಬಂದಿದೆ.
ಆಗಿರೋದಿಷ್ಟು, ಬೇಗೂರು ಬಳಿಯಲ್ಲಿ ಪ್ರಕರಣದ ದೂರುದಾರ ಮುಕುಂದ ಮತ್ತು ಅವರ ತಂದೆ ನಾಗರಾಜ್ ಶೆಟ್ಟಿ ಹೆಸರಿನಲ್ಲಿ 75 ಎಕರೆ ಜಮೀನು ಇತ್ತು. ಬಿಟಿಎಂ ಲೇಔಟ್ ನ ಈ ಸಬ್ ರಿಜಿಸ್ಟ್ರಾರ್ ರೂಪ
ನಕಲಿ ದಾಖಲೆ ಸೃಷ್ಟಿಸಿ, ಗಣೇಶ್ ಎನ್.ವೈ ಎಂಬಾತನನ್ನು ನಾಗರಾಜ್ ಶೆಟ್ಟಿಯವರ ಪುತ್ರನಂತೆ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಡೀಡ್ ಮಾಡಿಬಿಟ್ಟಿದ್ದಾಳೆ.
ಅಸಲಿಗೆ ನಾಗರಾಜ್ ಶೆಟ್ಟಿಯವರಿಗೆ ಗಣೇಶ್ ಎಂಬ ಮಗನೇ ಇಲ್ಲ. ಅವರಿಗೆ ಇರೋದೆ ಒಬ್ಬನೇ ಮಗ ಮುಕುಂದ.ಇನ್ನೂ ಮುಕುಂದಗೆ ಜಮೀನಿನ ದಾಖಲೆ ಪರಿಶೀಲನೆ ವೇಳೆ ತಮ್ಮ ಜಮೀನನ್ನು ಬೇರೆಯವರ ಹೆಸರಿಗೆ ಅಕ್ರಮವಾಗಿ ರಿಜಿಸ್ಟರ್ ಮಾಡಿರೋದು ಗೊತ್ತಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಅನುಮಾನ ಅವರಿಗೆ ಬಂದಿತ್ತು. ತಮಗೆ ಆಗಿರುವ ವಂಚನೆ ಕುರಿತು ಮುಕುಂದ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ರು.
ಪೊಲೀಸರು ಆರಂಭಿಕ ಹಂತದಲ್ಲಿ ತನಿಖೆ ನಡೆಸಿದಾಗ ದೊಡ್ಡ ಮೊತ್ತದ ಹಗರಣ ಎಂಬುದು ಗೊತ್ತಾಗಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ರು.ತನಿಖೆ ನಡೆಸಿದಾಗ ಈ ರೂಪಳಾ ಸಂಪೂರ್ಣ ಕಳ್ಳಾಟ ಬಯಲಾಗಿದ್ದು, ಸಬ್ ರಿಜಿಸ್ಟ್ರಾರ್ ರೂಪ ಮತ್ತು ಈಕೆಗೆ ಸಹಾಯ ಮಾಡಿದ ಆರೋಪದ ಮೇಲೆ ನವೀನ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು,150 ಕೋಟಿಗೂ ಅಧಿಕ ಮೌಲ್ಯದ ಜಮೀನಿನ ಅಕ್ರಮ ಸೇಲ್ ಡೀಡ್ ಪ್ರಕರಣ ಎಂಬುದು ಗೊತ್ತಾಗಿದೆ. ಇನ್ನೂ ಈ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖೆ ಮುಂದುವರೆಸಿದೆ.
ಇದನ್ನೂ ಓದಿ : ಸೈಲೆಂಟಾಗಿಯೇ ದೆಹಲಿಗೆ ಭೇಟಿ ನೀಡಿದ ಸತೀಶ್ : ಡಿಕೆಶಿ ಸಿಎಂ ಕುರ್ಚಿಗೆ ಆಸೆಗೆ ಹಳ್ಳ ತೋಡ್ತಿದಾರಾ ಸಾವ್ಕಾರ್?
ಇದನ್ನೂ ಓದಿ : ನಾನು ಕೇವಲ ಕುರುಬರಿಗೆ ಅಷ್ಟೇ ಅಲ್ಲ ಎಲ್ಲಾ ಜಾತಿಗಳಿಗೂ ಕೆಲಸ ಮಾಡಿದ್ದೇನೆ-ಸಿಎಂ ಸಿದ್ದರಾಮಯ್ಯ









