ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ... ಏನಾಯ್ತು?

ವಿದೇಶಿ ಮಹಿಳೆಯೊಬ್ಬರು ತನ್ನ ತೊಡೆಯ ಮೇಲೆ ಪುರಿ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಂಡು ವಿವಾದಕ್ಕೆ ತುತ್ತಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭುವನೇಶ್ವರದ ಪಾರ್ಲರ್‌ನಲ್ಲಿ ಮಹಿಳೆ ಮಾಡಿಸಿಕೊಂಡ ಹಚ್ಚೆಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

Written by - Bhavishya Shetty | Last Updated : Mar 3, 2025, 05:10 PM IST
    • ತೊಡೆಯ ಮೇಲೆ ಪುರಿ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಂಡು ವಿವಾದ
    • ಭುವನೇಶ್ವರದ ಪಾರ್ಲರ್‌ನಲ್ಲಿ ಮಹಿಳೆ ಮಾಡಿಸಿಕೊಂಡ ಹಚ್ಚೆಯ ಚಿತ್ರ
    • ಕೆಲವು ಜಗನ್ನಾಥ ಭಕ್ತರು ಸಾಹಿದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ
ಇದು ದೇವರ ಶಾಪವೇ..? ತೊಡೆಯ ಮೇಲೆ ಪುರಿ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಈಗ ಕಣ್ಣೀರಿಡುವ ಗತಿ... ಏನಾಯ್ತು?
tattoo of puri jagannath on thigh

tattoo of puri jagannath on thigh: ವಿದೇಶಿ ಮಹಿಳೆಯೊಬ್ಬರು ತನ್ನ ತೊಡೆಯ ಮೇಲೆ ಪುರಿ ಜಗನ್ನಾಥ ದೇವರ ಹಚ್ಚೆ ಹಾಕಿಸಿಕೊಂಡು ವಿವಾದಕ್ಕೆ ತುತ್ತಾಗಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭುವನೇಶ್ವರದ ಪಾರ್ಲರ್‌ನಲ್ಲಿ ಮಹಿಳೆ ಮಾಡಿಸಿಕೊಂಡ ಹಚ್ಚೆಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

Add Zee News as a Preferred Source

ಇದನ್ನೂ ಓದಿ:  3 ಹೊತ್ತು ಊಟಕ್ಕೆ ಅನ್ನ ತಿನ್ನುತ್ತೀರಾ..? ಹೀಗಲೇ ಈ ಅಭ್ಯಾಸ ನಿಲ್ಲಿಸಿ.. ಇಲ್ಲವೇ ಈ ಮಾರಕ ರೋಗಕ್ಕೆ ಒಳಗಾಗಬೇಕಾಗುತ್ತದೆ..

ಕೆಲವು ಜಗನ್ನಾಥ ಭಕ್ತರು ಸಾಹಿದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರಿಗೆ ದೂರು ನೀಡಿದವರಲ್ಲಿ ಒಬ್ಬರಾದ ಸುಬ್ರತಾ ಮೋಹಾನಿ, "ಜಗನ್ನಾಥ ದೇವರ ಹಚ್ಚೆಯನ್ನು ಸೂಕ್ತವಲ್ಲದ ಸ್ಥಳದಲ್ಲಿ ಹಾಕಿಸಿಕೊಳ್ಳುವ ಮೂಲಕ ನಮ್ಮ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಇದು ಎಲ್ಲಾ ಜಗನ್ನಾಥ ಭಕ್ತರಿಗೆ ಮತ್ತು ಸಾಮಾನ್ಯವಾಗಿ ಹಿಂದೂಗಳಿಗೆ ಮಾಡಿದ ಅವಮಾನ. ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ"" ಎಂದು ಹೇಳಿದ್ದಾರೆ .

ಇದನ್ನೂ ಓದಿ: ಎಷ್ಟೇ ಆಸೆಯಾಗಿದ್ರೂ ಸರಿ... ಈ ಕಾಯಿಲೆ ಇದ್ದವರು ಪಪ್ಪಾಯಿ ಹಣ್ಣನ್ನು ತಪ್ಪಿಯೂ ತಿನ್ನಬಾರದು!

ಈ ವಿಷಯದ ಬಗ್ಗೆ ವಿವಾದ ಹೆಚ್ಚಾದ ನಂತರ, ವಿದೇಶಿ ಪ್ರಜೆ ಮತ್ತು 'ಟ್ಯಾಟೂ ಪಾರ್ಲರ್' ಮಾಲೀಕರು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಆ ಮಹಿಳೆ ಕೈಮುಗಿದು ವೀಡಿಯೊದಲ್ಲಿ, "ನಾನು ಜಗನ್ನಾಥ ದೇವರನ್ನು ಅವಮಾನಿಸಲು ಬಯಸಲಿಲ್ಲ. ನಾನು ಕೂಡ ಜಗನ್ನಾಥ ಸ್ವಾಮಿಯ ನಿಜವಾದ ಭಕ್ತೆ ಮತ್ತು ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ನಾನು ತಪ್ಪು ಮಾಡಿದೆ ಮತ್ತು ಅದಕ್ಕಾಗಿ ನನಗೆ ತುಂಬಾ ವಿಷಾದವಿದೆ. ಹಚ್ಚೆ ಹಾಕಿಸಿಕೊಂಡ ಜಾಗ ವಾಸಿಯಾದ ತಕ್ಷಣ, ನಾನು ಅದನ್ನು ತೆಗೆಯುತ್ತೇನೆ. ನನ್ನ ತಪ್ಪಿಗೆ ದಯವಿಟ್ಟು ಕ್ಷಮೆ ಇರಲಿ" ಎಂದು ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News