ಸಾಮಾನ್ಯ ವಿಚಾರಣಾಧೀನ ಬಂದಿಯಂತೆ ಜೈಲುವಾಸ ಅನುಭವಿಸುತ್ತಿರುವ ಪಂಜರದ ಗಿಳಿಗಳು, ಜೊತೆ ಇರುವ ಸಹ ಬಂದಿಗಳ ಜೊತೆಯೂ ಮಾತಿಲ್ಲ ಕತೆಯಿಲ್ಲ, ಇತ್ತ ದರ್ಶನ್ ಆಂಡ್ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಜೈಲಾಧಿಕಾರಿಗಳು, ನಾಲ್ಕು ಗೋಡೆಗಳ ಮಧ್ಯೆಯೆ ಬಹುತೇಕ ಸಮಯ ಕಳೆಯುತ್ತಿರುವ ದಾಸ, ಅಷ್ಟಕ್ಕೂ ಕರಿಯನ 3ನೇ ದಿನದ ದಿನಚರಿ ಹೇಗಿತ್ತು..? ಅಂತೀರಾ. ಈ ಸ್ಟೋರಿ ನೋಡಿ.

Darshan Jail : ಬೆಳ್ಳಿಗ್ಗೆ ಎದ್ದ ತಕ್ಷಣ ಬಣ್ಣದ ಜಗತ್ತನ್ನು ನೋಡುತ್ತಿದ್ದ ದರ್ಶನ್ಗೆ ಈಗ ಬರೀ ಕತ್ತಲೆ ಆವರಿಸಿದೆ, ದೇಹವನ್ನು ದಂಡಿಸಿ ಪೋಷಕಾಂಶ ಭರಿತವಾದ ಆಹಾರವನ್ನು ತಿನ್ನುತ್ತಿದ್ದ ಡೇವಿಲ್ ಜೈಲೂಟ ತಿನ್ನುವಂತಾಗಿದೆ. ಇನ್ನು ಕರಿಯಾ ಟೀಮ್ ನ ಜೈಲುವಾಸ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸಾಮಾನ್ಯ ವಿಚಾರಣಾಧೀನ ಬಂದಿಯಂತೆ ಸೆರೆವಾಸ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಹೌದು.. ಇನ್ನು ಇಂದು ಬೆಳ್ಳಿಗ್ಗೆ ನಿದ್ದೆಯಿಂದ ಎದ್ದ ದರ್ಶನ್ ಎಂದಿನಂತೆ ಬಿಸಿ ನೀರು ಕುಡಿದು, ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ಜೈಲಿನ ಮೆನುವಿನಂಥೆ ಪಲಾವ್ ಸೇವನೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಇತ್ತ ಮಹಿಳಾ ಬ್ಯಾರಕ್ ನಲ್ಲಿರುವ ಪವಿತ್ರಾ ದಿನ ಕಳೆದಂತೆ ಸಹಖೈದಿಗಳ ಜೊತೆ ಬೆರೆಯುತ್ತಿದ್ದು ಇಂದು ಬೆಳ್ಳಿಗ್ಗೆ ಜೈಲು ಸಿಬ್ಬಂದಿ ಕೊಟ್ಟಂತ ಉಪಹಾರವನ್ನು ಸೇವಿಸಿ ಜೈಲು ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಸುಪ್ರೀಂ ಕೋರ್ಟ್ ಜೈಲಾಧಿಕಾರಿಗಳಿಗೆ ಚಾಟಿ ಬೀಸಿರುವ ಹಿನ್ನೆಲೆ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಜೈಲಿನಲ್ಲಿ ಐಷಾರಾಮಿ ಟ್ರೀಟ್ಮೆಂಟ್ ಪಡೆದುಕೊಂಡಿದ್ದ ದರ್ಶನ್ ಅಂಡ್ ಗ್ಯಾಂಗ್ ಮೇಲೆ ಜೈಲು ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ದಾಸ, ದಿನದ ಬಹುತೇಕ ಸಮಯವನ್ನು ನಾಲ್ಕು ಗೋಡೆ ಮಧ್ಯೆಯೇ ಕಳೆಯುತ್ತಿದ್ದಾನೆ. ಬೆನ್ನು ನೋವು ಇದೆ ಅಂತ ಹೇಳಿಕೊಂಡಿರುವ ದರ್ಶನ್ಗೆ ದಿನ ಬೆಳ್ಳಿಗ್ಗೆ ಒಂದು ತಾಸು ಕಾರಿಡಾರ್ ನಲ್ಲಿ ವಾಕ್ ಮಾಡಲು ಅನುಮತಿ ಕೊಟ್ಟಿರುವ ಜೈಲಾಧಿಕಾರಿಗಳು ಕಾಟೇರನಿಗೆ ಇತರೆ ವಿಚಾರಣಾಧೀನ ಖೈದಿಗಳಿಂದಲೂ ದೂರ ಇಟ್ಟಿದ್ದಾರೆ. ಊಟ ತಿಂಡಿ ಕೊಠಡಿಗೆ ಪೂರೈಸುತ್ತಿರುವ ಸಿಬ್ಬಂದಿಯ ಜೊತೆಗೂ ಸಹ ದರ್ಶನ್ ಮಾತನಾಡುವಂತಿಲ್ಲ. ಇನ್ನು ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲದ ಕಾರಣ ಸುಮ್ಮನೆ ಕೂರಬೇಕು ಇಲ್ಲವೇ ಪುಸ್ತಕ ಓದಬೇಕು, ಅಷ್ಟರ ಮಟ್ಟಿಗೆ ದರ್ಶನ್ ಅಂಡ್ ಗ್ಯಾಂಗ್ ಮೇಲೆ ಜೈಲಾಧಿಕಾರಿಗಳು ನಿಗಾ ಇಟ್ಟಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಬಣ್ಣದ ಜಗತ್ತಿನಲ್ಲಿ ರಾಜನ ಹಾಗೆ ಬದುಕುತ್ತಿದ್ದ ದರ್ಶನ್ ಈಗ ಕತ್ತಲ ಕೋಣೆಯಲ್ಲೆ ದಿನ ತಳ್ಳಬೇಕಾಗಿದೆ, ಇನ್ನು ಇನ್ಸ್ಟಾದಲ್ಲಿ ದಿನಕ್ಕೊಂದು ಸಂದೇಶ ರವಾನಿಸುತ್ತಿರುವ ಮಡದಿ ವಿಜಯಲಕ್ಷ್ಮಿ ಅಭಿಮಾನಿಗಳನ್ನ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಳೆ ದರ್ಶನ್ ಭೇಟಿ ಮಾಡಿ ಏನೆಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ..