)
actress life: ಚಿತ್ರರಂಗದಲ್ಲಿ ನಟಿ ಸೌಂದರ್ಯ ಹೆಸರನ್ನು ಕೇಳದವರೇ ಇಲ್ಲಾ.. ಏಕೆಂದರೆ ಭಾರತದ ಬಹುತೇಕ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಏಕೈಕ ನಟಿ ಇವರು. ತಮ್ಮ ಉತ್ತಮ ನಟನೆಯ ಮೂಲಕ ಸ್ಟಾರ್ ನಟಿಯಾಗಿ ಮೆರೆದ ಇವರು ಎಂದಿಗೂ ಸಿನಿರಂಗದ ಆಸ್ತಿ ಎಂದರೆ ತಪ್ಪಾಗುವುದಿಲ್ಲ. ನಟನಾ ಶಾರದೆ ಒಲಿದರೂ ಇವರು ಚಿತ್ರರಂಗದಲ್ಲಿ ಬಹಳ ದಿನಗಳ ಕಾಲ ಉಳಿಯಲಿಲ್ಲ. ನಟಿ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದ ದಿನದಲ್ಲಿ ಆ ಒಂದು ಘಟನೆ ಅವರನ್ನು ಬಾರದ ಲೋಕಕ್ಕೆ ಕೆರೆದುಕೊಂಡು ಹೋಯ್ತು.. ಆದರೂ ಕೂಡ ಸೌಂದರ್ಯ ತಮ್ಮ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ.
ಟಾಲಿವುಡ್ನಲ್ಲಿ, ಒಂದು ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಇವರು, ಆ ಸಮಯದಲ್ಲಿ ತಮ್ಮ ಸಹನಟನೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಅವರು ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರಿಂದ, ಬೆಳ್ಳಿ ಪರದೆ ಮೇಲೆ ಇವರ ಜೋಡಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಸಿನಿಮಾಗಳ ಯಶಸ್ಸಿನ ಜೊತೆಗೆ, ಇವರಿಬ್ಬರ ನಡುವಿನ ಆತ್ಮೀಯತೆ ಪ್ರೀತಿಯಾಗಿ ಬದಲಾಗಿದೆ ಎಂದು ಚಿತ್ರೋದ್ಯಮದಲ್ಲಿ ಬಹಳ ಜನ ಊಹಿಸಿದ್ದರು. ಕ್ರಮೇಣ ಈ ಸುದ್ದಿ ಇಂಡಸ್ಟ್ರಿಯಲ್ಲಿ ಹಬ್ಬಲು ಶುರುವಾಯಿತು.
ಇನ್ನು ಈ ಎಲ್ಲ ವದಂತಿಗಳ ನಡುವೆ ನಟಿ ಸೌಂದರ್ಯ ಆ ನಟನೊಂದಿಗೆ ಒಟ್ಟಿಗೆ 5–6 ಸಿನಿಮಾಗಳಲ್ಲಿ ನಟಿಸಿದರು. ಅಷ್ಟಕ್ಕೂ ಯಾರು ಆ ಸ್ಟಾರ್..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಅವರು ಬೇರೆ ಯಾರು ಅಲ್ಲ, ತೆಲುಗು ಖ್ಯಾತ ಹೀರೋ ವೆಂಕಟೇಶ್.. ಟಾಲಿವುಡ್ ಫೇಮಸ್ ಚಿತ್ರಗಳಾದ ರಾಜ, ಇಲ್ಲತರಸಿ, ದೇವಿಪುತ್ರಡು, ಜಯಂ ಮಾನತೇರ, ಪವಿತ್ರ ಬಂಧಂ, ಪೆಲ್ಲಿ ಸೇಸುಕುಂಧಂ, ಸೂಪರ್ ಪೊಲೀಸ್ ಮುಂತಾದವುಗಳಲ್ಲಿ ನಟಿಸುವ ಮೂಲಕ ಈ ಜೋಡಿ ಅಭಿಮಾನಿಗಳ ಹೃದಯ ಗೆದ್ದಿತ್ತು. ಅವರ ಪರದೆ ಮೇಲಿನ ಕೆಮಿಸ್ಟ್ರಿ ಎಷ್ಟು ಚೆನ್ನಾಗಿತ್ತೋ, ಅದೇ ರೀತಿಯಲ್ಲಿ ನಿಜಜೀವನದಲ್ಲಿಯೂ ಅವರು ಜೋಡಿಯಾಗುತ್ತಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಿತು. ಅಷ್ಟೇ ಅಲ್ಲ ಸೌಂದರ್ಯ ಅವರ ತಮ್ಮನ ಮದುವೆಯಲ್ಲಿ ವೆಂಕಟೇಶ್ ಭಾಗಿಯಾಗಿದ್ದರು. ಇದರಿಂದಾಗಿ ಅವರಿಬ್ಬರ ನಡುವಿನ ಪ್ರೇಮದ ವದಂತಿಗಳು ಮತ್ತಷ್ಟು ಬಲ ಪಡೆದವು. ಜನರ ನಡುವೆ “ಇವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ” ಎಂಬ ಮಾತುಗಳು ಹರಡತೊಡಗಿದವು.
ಆದರೆ, ವೆಂಕಟೇಶ್ ಈಗಾಗಲೇ ವಿವಾಹಿತರಾಗಿದ್ದರೂ ಕೂಡ, ಮರುಮದುವೆಯಾಗಲು ಅವರು ತಯಾರಾಗಿದ್ದಾರೆ ಎಂಬ ಮಾತು ಚಿತ್ರರಂಗದಲ್ಲಿ ಹಬ್ಬಿತು. ಈ ವಿಷಯವನ್ನು ತಿಳಿದ ವೆಂಕಿಯ ತಂದೆ ಮತ್ತು ಖ್ಯಾತ ನಿರ್ಮಾಪಕ ರಾಮನಾಯ್ಡು ಮಧ್ಯಪ್ರವೇಶಿಸಿ, ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ ಎಂಬ ಸುದ್ದಿ ಕೂಡ ಹೊರಬಂದಿತ್ತು. ಆ ನಂತರ, ಇಬ್ಬರೂ ದೂರವಾಗಿದ್ದಾರೆ ಎಂಬ ವರದಿಗಳು ಬಂದವು. ಈ ಸುದ್ದಿಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ಸ್ಪಷ್ಟವಾಗದಿದ್ದರೂ, ಅವರ ಆತ್ಮೀಯತೆ ಹಾಗೂ ಜೋಡಿಯ ಯಶಸ್ಸು ಟಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.