)
BBK 12 Today Nominations : ಕ್ಯಾಪ್ಟನ್ ಮಾಳುಗೆ ಬಿಗ್ ಬಾಸ್ ಸ್ಪೆಷಲ್ ಪವರ್ ನೀಡಿದೆ.. ಈ ಪೈಕಿ ಮನೆಯ ಗಾರ್ಡನ್ ಏರಿಯಾದಲ್ಲಿ ಕೆಸರು, ತಣ್ಣಿರು, ಕಪ್ಪು ನೀರು, ಕಸ, ಚಿಣಿಮಿಣಿ ಮತ್ತು ಸಗಣಿ ನೀರನ್ನು ಇರಿಸಲಾಗಿತ್ತು. ಅಲ್ಲದೆ, ಈ ನೀರುಗಳನ್ನು 6 ಜನ ಸ್ಪರ್ಧಿಗಳ ಮೇಲೆ ಸುರಿದು ಕಾರಣ ನೀಡಿ ನಾಮಿನೇಟ್ ಮಾಡಿಬೇಕಿತ್ತು.. ಅದರಂತೆ ಮಾಳು.. ಧ್ರುವಂತ್, ಕಾಕ್ರೋಚ್ ಸುಧಿ, ಜಾಹ್ನವಿ, ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ, ಹಾಗೂ ರಕ್ಷಿತಾ ಶೆಟ್ಟಿಯನ್ನ ನಾಮಿನೇಟ್ ಮಾಡಿದ್ದಾರೆ.
ಸಗಣಿ ನೀರು : ಮೊದಲಿಗೆ ಧ್ರುವಂತ್ ಮೇಲೆ ಸಗಣಿ ನೀರು ಸುರಿದ ಮಾಳು, ಇವರು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.. ಹೆಣ್ಣು ಮಕ್ಕಳೇ ತಮ್ಮ ಕಡೆ ಬರ್ತಾರೆ, ಅವರಿಗೆ ನನ್ನ ಅವಶ್ಯಕತೆ ಕತೆ ಇದೆ ಎನ್ನುವ ರೀತಿ ಮಾತಾಡ್ತಾನೆ.. ಪ್ರೇಕ್ಷಕರಿಗೆ ಇಂತಹ ಮಾತುಗಳು ತಪ್ಪು ಅರ್ಥವನ್ನು ನೀಡುತ್ತವೆ.. ಇವರ ತಲೆಯಲ್ಲಿ ಸಗಣಿ ತುಂಬಿದೆ ಎಂದು ಕಾರಣ ನೀಡಿ ನಾಮಿನೇಟ್ ಮಾಡಿದರು.
ತಣ್ಣೀರು : ಎಷ್ಟು ಸರಿ ಹೇಳಿದ್ರೂ ಕೇಳಲ್ಲ, ಯಾವಾಗಲೂ ಮಲ್ಕೋತಾಳೆ. ನಿದ್ದೇಲಿ ಇರಬೇಡ ಅಂದ್ರೂ ಸಹ ಕೇಳಲ್ಲ.. ಕುಂತಲ್ಲಿ ನಿಂತಲ್ಲಿ ನಿದ್ದೆ ಮಾಡ್ತಾಳೆ.. ಪ್ರತಿ ದಿನ ನಾವು ಎಲ್ಲರೂ ಕುಳಿತು ಮಾತನಾಡುತ್ತಿದ್ದರೆ. ಇವಳು ಹೋಗಿ ನಿದ್ದೆ ಮಾಡ್ತಾಳೆ.. ಇವಳ ನಿದ್ದೆ ಹೋಗ್ಲಿ ಅಂತ ತಣ್ಣೀರು ಎರಚುತ್ತೇನೆ ಅಂತ ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡಿದರು.
ಕೆಸರು : ಮೋಸ ಮಾಡೋದು ಮಾಡಿ ನೋವು ಕೊಟ್ಟು ನಂತರ ಅದನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆಮೇಲೆ ನಾಲ್ಕು ಡೈಲಾಗ್ ಹೇಳಿ ಎಲ್ಲರ ಮನವೊಲಿಸುವ ಕೆಲಸ ಮಾಡ್ತಾರೆ.. ಇನ್ನೊಬ್ಬರ ಮೇಲೆ ಕೆಸರು ಎರಚುವ ಅವರ ಬುದ್ದಿ ನಾನು ಕೆಸರು ಎರಚುತ್ತೇನೆ ಅಂತ ಕಾಕ್ರೋಚ್ ಸುಧಿ ಮೇಲೆ ಮಾಳು ಕೆಸರು ಹಾಕಿ ನಾಮಿನೇಟ್ ಮಾಡಿದರು.
ಕಪ್ಪು ನೀರು : ಇವರಲ್ಲಿ ಬಹಳ ಕಲ್ಮಶ ಇದೆ. ಇಂದು ಒಬ್ಬರ ಜೊತೆ ಚನ್ನಾಗಿರ್ತಾರೆ ನಾಳೆ ಅವರ ಜೊತೆ ಜಗಳವಾಡಿಕೊಂಡು ದೂರವಾಗ್ತಾರೆ. ಒಂದು ದಿನ ಹೆಗಲ ಮೇಲೆ ಕೈ ಹಾಕಿ ನೀವು ಒಳ್ಳೆಯವರು ಅಂತಾರೆ ಮುಂದಿನ ದಿನ ನೀವು ಕೆಟ್ಟವರು ಅಂತ ದೂರ ಮಾಡ್ತಾರೆ ಇವರಿಗೆ ಕಪ್ಪು ನೀರು ಸರಿ ಅಂತ ಅಶ್ವಿನಿ ಗೌಡ ಅವರನ್ನು ಮಾಳು ನಾಮಿನೇಟ್ ಮಾಡಿದರು.
ಚಿಣಿಮಿಣಿ : ಕ್ಯಾಮೆರಾ ಫೋಕಸ್ ಮಾಡುತ್ತೆ.. ನಾನು ಚೆಂದ ಕಾಣಲಿ ಅಂತ ಈ ಮನೆಯಲ್ಲಿ ಇದ್ದಾರೋ ಏನೋ ನನಗಂತೂ ಗೊತ್ತಿಲ್ಲ. ಸರಿಯಾದ ಸಮಯಕ್ಕೆ ಯಾವುದೇ ಕೆಲಸ ಮಾಡೋದಿಲ್ಲ. ಕೇವಲ ಎಲ್ಲರೂ ತಮ್ಮನ್ನ ನೋಡಲಿ ಅಂತ ಇರ್ತಾರೆ ಅಂತ ಜಾಹ್ನವಿಯನ್ನು ಮಾಳು ನಾಮಿನೇಟ್ ಮಾಡಿದರು..
ಕಸ : ಯಾರ ಜೊತೆಗೂ ಮಾತನಾಡಲ್ಲ, ನನ್ನ ಜೊತೆ ಅಂತೂ ಮಾತಾಡೋದೆ ಇಲ್ಲ.. ಬೇಕಾದವರ ಜೊತೆ ಮಾತಾಡ್ತಾರೆ, ಅವರು ಎಲ್ಲರ ಜೊತೆ ಅಷ್ಟೋಂದು ಸರಿಯಾಗಿ ಇಲ್ಲ ಅದಕ್ಕಾಗಿ ನಾನು ರಾಶಿಕಾ ಮೇಲೆ ಕಸವನ್ನು ಎರಚುತ್ತೇನೆ ಅಂತ ಮಾಳು ನಾಮಿನೇಟ್ ಮಾಡಿದರು..