ರಘು 2ನೇ ಬಾರಿಗೆ ಕ್ಯಾಪ್ಟನ್‌ ಆಗಿದ್ದೆ ರಕ್ಷಿತಾ ಶೆಟ್ಟಿಯಿಂದ..! ಕೊನೆಗೂ ವರ್ಕೌಟ್‌ ಆಯ್ತು ಪುಟ್ಟಿ ಪ್ಲಾನ್‌.. ಹೇಗೆ ಗೊತಾ?

Bigg Boss Captain Raghu : ಬಿಗ್‌ ಬಾಸ್‌ ಸೀಸನ್‌ 12 ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಸ್ಪರ್ಧಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಇದರ ಜೊತೆಗೆ ಟಾಸ್ಕ್‌ಗಳನ್ನು ಗೆಲ್ಲಲ್ಲು ಮನೆ ಮಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನು ನಿನ್ನೆ ನಡೆದ ಟಾಸ್ಕ್‌ನಲ್ಲಿ ಗೆದ್ದು ರಘು ಮತ್ತೆ ದೊಡ್ಮನೆ ಕ್ಯಾಪ್ಟನ್‌ ಆಗಿದ್ದಾರೆ...

Written by - Krishna N K | Last Updated : Nov 14, 2025, 10:41 AM IST
    • ಬಿಗ್‌ ಬಾಸ್‌ ಸೀಸನ್‌ 12 ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ.
    • ಟಾಸ್ಕ್‌ಗಳನ್ನು ಗೆಲ್ಲಲ್ಲು ಮನೆ ಮಂದಿ ಹರಸಾಹಸ ಪಡುತ್ತಿದ್ದಾರೆ.
    • ನಿನ್ನೆ ನಡೆದ ಟಾಸ್ಕ್‌ನಲ್ಲಿ ಗೆದ್ದು ರಘು ಮತ್ತೆ ದೊಡ್ಮನೆ ಕ್ಯಾಪ್ಟನ್‌ ಆಗಿದ್ದಾರೆ...
ರಘು 2ನೇ ಬಾರಿಗೆ ಕ್ಯಾಪ್ಟನ್‌ ಆಗಿದ್ದೆ ರಕ್ಷಿತಾ ಶೆಟ್ಟಿಯಿಂದ..! ಕೊನೆಗೂ ವರ್ಕೌಟ್‌ ಆಯ್ತು ಪುಟ್ಟಿ ಪ್ಲಾನ್‌.. ಹೇಗೆ ಗೊತಾ?

Bigg Boss Kannada 12 updates : ಅಶ್ವಿನಿ, ಜಾಹ್ನವಿ, ರಾಶಿಕಾ, ರಿಷಾ ಒಂದು ಟೀಮ್‌ ಆದ್ರೆ ಅವರ ತಂಡದಲ್ಲೇ ಇದ್ದು ರಕ್ಷಿತಾ ಶೆಟ್ಟಿ ರಘುಗೆ ನಾಯಕತ್ವ ಬರಲು ಕಾರಣರಾಗಿದ್ದಾರೆ. ಬಹುಷಃ ಈ ವಿಚಾರ ನಿಮ್ಗೆ ಅರ್ಥವಾಗದಿರಬಹು.. ಆದ್ರೆ ಪುಟ್ಟಿ ಮಾಡಿದ ಒಂದೇ ಒಂದು ಕೆಲಸದಿಂದ ಇಂದು ರಘು 2ನೇ ಬಾರಿಗೆ ಬಿಗ್‌ ಹೌಸ್‌ ಕ್ಯಾಪ್ಟನ್‌ ಆಗಿದ್ದಾರೆ.. ಹೇಗೆ..? ಬನ್ನಿ ನೋಡೋಣ..

Add Zee News as a Preferred Source

ನಾಮಿನೇಟ್‌ ಆದ ತಂಡ ಮತ್ತು ನಾಮಿನೇಟ್‌ ಆಗದ ತಂಡಕ್ಕೆ ಬಿಗ್‌ ಬಾಸ್‌ ಟಾಸ್ಕ್‌ ನೀಡಿತ್ತು. ಆದರೆ ನಾಮಿನೇಟೆಡ್‌ ಟೀಂ ಎರಡು ತಂಡಗಳಲ್ಲಿ ಗೆಲುವು ಸಾಧಿಸಿ, ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆಯಾಯಿತು. ಮೊದಲ ಸುತ್ತಿನಲ್ಲಿ ಪುರುಷರ ತಂಡದಿಂದ ರಘು ಗೆಲುವು ಸಾಧಿಸಿದರೆ ಮಹಿಳೆಯರ ತಂಡದಿಂದ ಜಾಹ್ನವಿ ಗೆದ್ದರು.. ಆಟ ಇನ್ನೂ ಬಾಕಿ ಇರುವಾಗಲೇ ಎರಡನೇ ಬಾರಿಗೆ ರಘು ನಾಯಕನಾಗಿ ಆಯ್ಕೆಯಾದರು.. 

ಇದನ್ನೂಓದಿ: 'ಬಿಗ್ ಬಾಸ್'ನಿಂದ ಹೊರಬಂದ ಚಂದ್ರಪ್ರಭಗೆ ಸಿಕ್ಕ ಬಹುಮಾನ ಎಷ್ಟು? 6 ವಾರಕ್ಕೆ ಗಳಿಸಿದ್ದ ಭರ್ಜರಿ ಅಮೌಂಟ್‌

ನಾಮಿನೇಟ್‌ ತಂಡದಲ್ಲಿ ಅಶ್ವಿನಿ, ಜಾಹ್ನವಿ, ರಾಶಿಕಾ, ರಿಷಾ, ರಕ್ಷಿತಾ ಶೆಟ್ಟಿ, ರಘು, ಕಾಕ್ರೋಚ್‌ ಸುಧಿ, ಧ್ರುವಂತ್‌ ಇದ್ದರು. ಜಿಮ್‌ ಬಾಲ್‌ ಟಾಸ್ಕ್‌ನಲ್ಲಿ ಧ್ರುವಂತ್‌ ಮತ್ತು ಕಾಕ್ರೋಚ್‌ ಸುಧಿಯನ್ನು ಹೊರಗೆ  ತಳ್ಳಿ ರಘು ಬರ್ಜರಿ ಗೆಲುವು ಸಾಧಿಸಿದರು. ಮಹಿಳೆಯರ ತಂಡದಲ್ಲಿ ರಾಶಿಕಾ, ರಕ್ಷಿತಾ, ಅಶ್ವಿನಿಯವರ ವಿರುದ್ಧ ಜಾಹ್ನವಿ ಗೆದ್ದರು. ಕೊನೆಯ ಹಂತದಲ್ಲಿ ರಘು ಹಾಗೂ ಜಾಹ್ನವಿ ನಡುವೆ ಟಾಸ್ಕ್‌ ನಡೆಯಬಹುದು.. ಇದರ ನಡುವೆ ರಘು ಕ್ಯಾಪ್ಟನ್‌ ಸ್ಥಾನ ಗಳಿಸಿದ್ದಾರೆ.

ರಘು ಕ್ಯಾಪ್ಟನ್‌ ಆಗಲು ರಕ್ಷಿತಾ ಕಾರಣ : ಬಹುಷಃ ಈ ವಿಚಾರ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ.. ರಘು ನಾಮಿನೇಟ್‌ ಆಗಲಿಲ್ಲ ಅಂದ್ರೆ ಅವರು ಕ್ಯಾಪ್ಟನ್‌ ಆಗುತ್ತಿರಲಿಲ್ಲ.. ಇಲ್ಲಿ ರಕ್ಷಿತಾ ರಘುವನ್ನು ನಾಮಿನೇಟ್‌ ಮಾಡುವ ಮೂಲಕ ಪರೋಕ್ಷವಾಗಿ ಟ್ವೀಸ್ಟ್‌ಗೆ ಕಾರಣವಾಗಿದ್ದಾರೆ. ನಾಮಿನೇಟ್‌ ಮಾಡಿದಾಗ ರಕ್ಷಿತಾರನ್ನ ಬೈದಿದ್ದ ರಘು ಅಭಿಮಾನಿಗಳು ಇದೀಗ ಥ್ಯಾಂಕ್ಸ್‌ ಹೇಳುತ್ತಿದ್ದಾರೆ.. ಆದರೆ ಪುಟ್ಟಿಗೆ ತನ್ನಿಂದಲೇ ಇದೆಲ್ಲಾ ಆಯ್ತು ಅನ್ನೋದೆ ಗೊತ್ತಿಲ್ಲ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News