)
Chiyaan Vikram: ದಕ್ಷಿಣದ ಸೂಪರ್ಸ್ಟಾರ್ ಚಿಯಾನ್ ವಿಕ್ರಮ್ ತಮ್ಮ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದರು. ಅದು ಅವರ ಜೀವನವನ್ನೇ ಬದಲಾಯಿಸಿದ ಘಟನೆ ಆಗಿತ್ತು.
ಚಿತ್ರದ ಸೆಟ್ಗಳಲ್ಲಿ ಸಂಭವಿಸಿದ ಅಪಘಾತದ ಬಗ್ಗೆಯೂ ನಟ ಚಿಯಾನ್ ವಿಕ್ರಮ್ ಮಾತನಾಡಿದ್ದರು. ಚಿಯಾನ್ ವಿಕ್ರಮ್ ಅವರ ಕಾಲು ಮೊಣಕಾಲಿನಿಂದ ಹಿಮ್ಮಡಿಯವರೆಗೆ ಹರಿದಿತ್ತು. ಈ ಘಟನೆಯ ಬಗ್ಗೆ ಚಿಯಾನ್ ವಿಕ್ರಮ್ ಮಾತನಾಡಿದ್ದರು.
ಚಿಯಾನ್ ವಿಕ್ರಮ್ ಚಿಕ್ಕವರಿದ್ದಾಗ, ಕಾಲೇಜಿನಲ್ಲಿದ್ದಾಗ ಮತ್ತು ನಟನಾಗಲು ಶ್ರಮಿಸುತ್ತಿದ್ದ ಸಮಯದಲ್ಲೇ ಭೀಕರ ಅಪಘಾತ ಸಂಭವಿಸಿತ್ತೆಂದು ಹೇಳಿದರು. ಕಾಲೇಜು ನಾಟಕವೊಂದರಲ್ಲಿ ಭಾಗವಹಿಸಲು ಹೊರಟಿದ್ದರು. ಅದಕ್ಕೂ ಮೊದಲು ಅವರು ಅಪಘಾತಕ್ಕೆ ಒಳಗಾದರು.
ಈ ಅಪಘಾತದಲ್ಲಿ ಚಿಯಾನ್ ವಿಕ್ರಮ್ ಅವರ ಕಾಲು ಮೊಣಕಾಲಿನಿಂದ ಹಿಮ್ಮಡಿಯವರೆಗೆ ಹರಿದಿತ್ತು. ವಿಕ್ರಮ್ ಕಾಲೇಜಿನಲ್ಲಿ ಓದುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ವೈದ್ಯರು ಚಿಯಾನ್ ವಿಕ್ರಮ್ ಕಾಲನ್ನು ಕತ್ತರಿಸಲು ಸಲಹೆ ನೀಡಿದ್ದರಂತೆ.
ಚಿಯಾನ್ ವಿಕ್ರಮ್ ಆಸ್ಪತ್ರೆಯಲ್ಲಿ 3 ವರ್ಷಗಳನ್ನು ಕಳೆಯಬೇಕಾಯಿತು. ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ವೈದ್ಯರು ಗಾಯಗೊಂಡ ಕಾಲನ್ನು ಕತ್ತರಿಸಲು ಸೂಚಿಸಿದರು. ಆದರೆ 3 ವರ್ಷಗಳಲ್ಲಿ 23 ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರ ಅವರ ಕಾಲಿನ ನೋವು ವಾಸಿಯಾಯಿತು.
ಆದರೆ ಇದಾದ ನಂತರವೂ ಅವರಿಗೆ ಕೆಲವೊಮ್ಮೆ ಸೋಂಕುಗಳು ಬರುತ್ತಲೇ ಇದ್ದವು. ಇಷ್ಟೆಲ್ಲದರ ಹೊರತಾಗಿಯೂ, ತನ್ನ ಗುರಿಯನ್ನು ಸಾಧಿಸುವುದನ್ನು ಬಿಡಲಿಲ್ಲ. ಚಿಯಾನ್ ವಿಕ್ರಮ್ ಇಂದು ಖ್ಯಾತ ನಟ.
ಚಿಯಾನ್ ವಿಕ್ರಮ್ ಅವರ ಅದ್ಭುತ ನಟನೆಗೆ ಮಾರು ಹೋಗದವರಿಲ್ಲ. 'ತಂಗಲ್' ಚಿತ್ರೀಕರಣದ ಸಮಯದಲ್ಲಿ ಪಕ್ಕೆಲುಬು ಮುರಿದಿತ್ತು.
ಆಕ್ಷನ್ ದೃಶ್ಯವೊಂದನ್ನು ಚಿತ್ರೀಕರಿಸುವಾಗ ತನ್ನ ಪಕ್ಕೆಲುಬು ಮುರಿದಿದೆ ಎಂದು ನಟ ಚಿಯಾನ್ ವಿಕ್ರಮ್ ಹೇಳಿಕೊಂಡಿದ್ದರು. ಆದರೂ ಅವರು ಚಿತ್ರದ ಚಿತ್ರೀಕರಣವನ್ನು ಮುಂದುವರೆಸಿದರು. ಚಿಯಾನ್ ವಿಕ್ರಮ್ ಅವರ ಈ ಆತ್ಮ ವಿಶ್ವಾಸ ಮತ್ತು ಛಲ ಸಾಧಿಸುವ ಮನೋಭಾವ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.