)
Bigg Boss Kannada Season 12: ಬಿಗ್ ಬಾಸ್ ಮನೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ.. ಪ್ರತಿದಿನ ಬಿಗ್ಬಾಸ್ ಮನೆಯಲ್ಲಿ ವಾದ-ಪ್ರತಿವಾದ ನಡೆಯುತ್ತಲೇ ಇದ್ದು ಸುದ್ದಿಯಾಗ್ತಾನೆ ಇರುತ್ತದೆ. ಆದರಿಗ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಎಂಬುವವರು ಅವಮಾನಕಾರಿ ಹೇಳಿಕೆ ಆರೋಪದಡಿ ನಿರೂಪಕರಾದ ಕಿಚ್ಚ ಸುದೀಪ್ ಹಾಗೂ ಅಶ್ವಿನಿಗೌಡ ವಿರುದ್ಧ ರಾಮನಗರ ಡಿವೈಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಕಳೆದ ವಾರ ಕಿಚ್ಚನ ಪಂಚಾಯಿತಿಯಲ್ಲಿ ರಕ್ಷಿತಾ ವಿರುದ್ಧ ಸುದೀಪ್ ಗರಂ ಆಗಿದ್ದರು."ನನ್ನ ಪಿತ್ತ ನೆತ್ತಿಗೇರಿಸಬೇಡಿ" ಅಂತಾ ರಕ್ಷಿತಾಗೆ ಬೆದರಿಕೆ ಹಾಕುವ ರೀತಿ ಮಾತನಾಡಿದ್ದಾರೆ. ಇದೆಲ್ಲವನ್ನೂ ಕೂಡ ಖಾಸಗಿ ವಾಹಿನಿ ಪ್ರಸಾರ ಮಾಡಿ ರಕ್ಷಿತಾ ಮಾನಹಾನಿಯಾಗುವಂತೆ ಮಾಡಿದೆ.. ಮಾತ್ರವಲ್ಲದೇ ಅಶ್ವಿನಿಗೌಡ ಕೂಡ ರಕ್ಷಿತಾ ಮೇಲೆ ಅವಮಾನಕಾರಿ ಶಬ್ದ ಬಳಕೆ ಮಾಡಿದ್ದಾರೆ ಅಂತಾ ಸಂಧ್ಯಾ ಆರೋಪಿಸಿದ್ದಾರೆ.
ಕಳೆದ ವಾರ ರಕ್ಷಿತಾ ನಾಮಿನೇಟ್ ಆದ ತಂಡದಲ್ಲಿ ಇರುತ್ತಾರೆ. ಟಾಸ್ಕ್ಗಳಲ್ಲಿ ಗೆದ್ದು ತಂಡದಲ್ಲಿರುವವ ಪೈಕಿ ಸೇವ್ ಮಾಡುವ ಅವಕಾಶ ಹಾಗೂ ಸೇವ್ ಆದ ತಂಡದಿಂದ ನಾಮಿನೇಟ್ ಮಾಡುವ ಅವಕಾಶವನ್ನ ಬಿಗ್ ಬಾಸ್ ಕೊಟ್ಟಿದ್ದರು. ಈ ವೇಳೆ ರಕ್ಷಿತಾ ತಂಡದ ಒಮ್ಮತಕ್ಕೆ ಒಪ್ಪದೆ ಮೊಂಡುವಾದ ಮಾಡಿದ್ದರು. ಇದೇ ವಿಚಾರಕ್ಕೆ ಸುದೀಪ್ ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಇದರಿಂದ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಅವರು ಬೇಸತ್ತು ಕಿಚ್ಚ ಸುದೀಪ್ ವಿರುದ್ಧ ದೂರು ದಾಖಲಿದ್ದಾರೆ. ಅಲ್ಲದೇ ಸ್ಪರ್ಧಿ ರಿಷಾ ಸಹಸ್ಪರ್ಧಿ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಕಾರ್ಯಕ್ರಮದ ಮುಖ್ಯಸ್ಥರು ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 12ರ ಆರಂಭದಿಂದಲ್ಲೇ ಒಂದಾದ ಮೇಲೆ ಒಂದು ಕಾನೂನು ಸಂಕಷ್ಟ ಎದುರಾಗಿದೆ.. ಆರಂಭವಾದ ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮಕ್ಕೆ ಕಾನೂನಿನ ತೊಡಕು ಉಂಟಾಗಿತ್ತು. ಅಕ್ಟೋಬರ್ 7ರ ಮಂಗಳವಾರ ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ಗೆ ರಾಮನಗರ ಜಿಲ್ಲಾಡಳಿತದ ಅಧಿಕಾರಿಗಳು ಬೀಗ ಹಾಕಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳನ್ನ ಹೊರಗೆ ಕಳುಹಿಸಲಾಗಿತ್ತು. ಕಾನೂನು ಹೋರಾಟ ನಡೆಸಿ ಮತ್ತೆ ಬಿಗ್ ಬಾಸ್ ಮನೆ ಓಪನ್ ಮಾಡಿದ್ದರು ಸಹ ದೊಡ್ಮನೆ ಸ್ಪರ್ಧಿಗಳ ವಿರುದ್ಧ ಮತ್ತೆ ದೂರು ದಾಖಲಾಗ್ತಿದೆ. ಅದರಲ್ಲೂ ಈ ಬಾರಿ ಸುದೀಪ್ ವಿರುದ್ಧವೇ ದೂರು ದಾಖಲಾಗಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
✍️ ರಮ್ಯಾ ಆರ್