ಪ್ರೀತಿ ಪ್ರೇಮ ಇಂದೇ ತ್ಯಜಿಸಿ..! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾದ ಟೀಸರ್‌

Congratulations Brother movie : ಪ್ರೀತಿ ಪ್ರೇಮ ಇಂದೇ ತ್ಯಜಿಸಿ.. ಹೆಚ್ಚಿನ ಮಾಹಿತಿಗೆ ಕಾಂಟಾಕ್ಟ್ ಮಾಡಿ" ಇದು ‘Congratulations ಬ್ರದರ್' ಸಿನಿಮಾದ ಟೀಸರ್ ನಲ್ಲಿ ಬರೋ ಡೈಲಾಗ್.. ’Congratulations ಬ್ರದರ್' ಸಿನಿಮಾ ಇದೆ ನವೆಂಬರ್ 21ಕ್ಕೆ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾದ ವೆರಿ ಸ್ಪೆಷಲ್ ಸ್ಟೋರಿ ನಿಮಗಾಗಿ.

Written by - YASHODHA POOJARI | Last Updated : Nov 13, 2025, 03:16 PM IST
    • ಪ್ರೀತಿ ಪ್ರೇಮ ಇಂದೇ ತ್ಯಜಿಸಿ.. ಹೆಚ್ಚಿನ ಮಾಹಿತಿಗೆ ಕಾಂಟಾಕ್ಟ್ ಮಾಡಿ
    • ‘Congratulations ಬ್ರದರ್' ಸಿನಿಮಾದ ಟೀಸರ್ ನಲ್ಲಿ ಬರೋ ಡೈಲಾಗ್..
    • ʼCongratulations ಬ್ರದರ್' ಸಿನಿಮಾ ಇದೆ ನವೆಂಬರ್ 21ಕ್ಕೆ ಅದ್ದೂರಿಯಾಗಿ ರಿಲೀಸ್
ಪ್ರೀತಿ ಪ್ರೇಮ ಇಂದೇ ತ್ಯಜಿಸಿ..! ಕುತೂಹಲ ಮೂಡಿಸುತ್ತಿದೆ ‘Congratulations ಬ್ರದರ್' ಸಿನಿಮಾದ ಟೀಸರ್‌

Sandalwood new movies : ಪ್ರೇಮಿಯ ನೋವು, ಸಂಕಟ, ಪರದಾಟದ ದೃಶ್ಯಗಳು ಇವೆಲ್ಲವನ್ನ ಖುಷಿ ಖುಷಿಯಾಗಿ ‘Congratulations ಬ್ರದರ್' ಸಿನಿಮಾದ ಮೂಲಕ ನೋಡಬಹುದು. ಈ ಚಿತ್ರ ಜನರನ್ನು ಸೆಳೆಯೋದು ಪಕ್ಕಾ ಅಂದ್ಹಾಗೆ ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ.

Add Zee News as a Preferred Source

Congratulations ಬ್ರದರ್ ತ್ರಿಕೋನ ಪ್ರೇಮ ಕಥೆಯ ಸಿನಿಮಾ. ಒಬ್ಬ ಹುಡುಗನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗುತ್ತೆ? ಅನ್ನೋದನ್ನು ಈ ಸಿನಿಮಾ ತಂಡ ಹೇಳುವುದಕ್ಕೆ ಹೊರಟಿದೆ. ಈ ಸಿನಿಮಾದ "ಪ್ರೀತಿ ಪಜೀತಿ.." ಎನ್ನುವ ಹಾಡು ಈಗಾಗಲೇ ಎಲ್ಲರ ಗಮನ ಸೆಳೆದಿದೆ. 

ಇದನ್ನೂ ಓದಿ:ನೀಲಿ ಸೀರೆ, ಅಪರೂಪದ ಸೌಂದರ್ಯ, ರಾತ್ರೋರಾತ್ರಿ ವೈರಲ್‌ ಆದ ಈ ಸುಂದರಿ ಯಾರ್‌ ಗೊತ್ತೆ? ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ

ಇದರ ಬೆನ್ನಲ್ಲೇ 'Congratulations ಬ್ರದರ್' ಸಿನಿಮಾದ ಟೀಸರ್‌ ಕೂಡ ಜೋರಾಗಿ ಸದ್ದು ಮಾಡುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ.

‘Congratulations ಬ್ರದರ್' ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಅನುಭವಿ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರತಾಪ್ ಗಂಧರ್ವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯುವ ನಟ ರಕ್ಷಿತ್ ನಾಗ್ ನಟಿಸಿದ್ದಾರೆ. ನಾಯಕಿಯರಾಗಿ ಸಂಜನಾ ದಾಸ್, ಅನುಶಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಕಾರವಾರ, ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಇದನ್ನೂ ಓದಿ:ಕ್ರೀಡಾಪಟುವಾಗಿದ್ದರೂ ಡಿವೋರ್ಸ್‌ ಬಳಿಕ ಇಂಥಾ ಸ್ಥಿತಿಗೆ ತಲುಪಿದ್ರು ಸಾನಿಯಾ! ಸಂಗಾತಿ ಕಳೆದುಕೊಂಡವರೊಂದಿಗೆ ಆಸರೆಯಾಗಿ ನಿಂತಿದ್ದು ಈ ನಟಿ..

ಇದು ಸಾಪೇಕ್ಷ ಮತ್ತು ಹಾಸ್ಯಮಯ ಪರಿಕಲ್ಪನೆಯಾಗಿದ್ದು, ಪ್ರೇಕ್ಷಕರು ಇದನ್ನು ಆನಂದಿಸುತ್ತಾರೆ ಎಂದು ನಾನು ನಂಬುತ್ತೇನೆ. ನಾವು ಕಾರವಾರ ಮತ್ತು ಬೆಂಗಳೂರಿನಂತಹ ಸ್ಥಳಗಳಲ್ಲಿ ಚಿತ್ರೀಕರಣವನ್ನು 45 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ಹರೀಶ್ ರೆಡ್ಡಿ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದರೆ, ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಚಿತ್ರ ಇದೇ ನವೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ.

About the Author

Trending News