)
Raghavendra Rao on Sridevi: ರಾಘವೇಂದ್ರ ರಾವ್ ತೆಲುಗು ಚಿತ್ರರಂಗದ ದಂತಕಥೆ ನಿರ್ದೇಶಕರಲ್ಲಿ ಒಬ್ಬರು. ಅವರು NTR, ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ನಾಗಾರ್ಜುನ, ಮಹೇಶ್ ಬಾಬು ಮುಂತಾದ ಮೂರು ತಲೆಮಾರುಗಳ ನಾಯಕರೊಂದಿಗೆ ಚಿತ್ರಗಳನ್ನ ನಿರ್ಮಿಸಿದ್ದಾರೆ. NTR ಮತ್ತು ಚಿರಂಜೀವಿ ಅವರೊಂದಿಗೆ ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನ ಮಾಡಿದ್ದಾರೆ. ನಾಯಕಿಯರ ವಿಷಯಕ್ಕೆ ಬಂದರೆ ರಾಘವೇಂದ್ರ ರಾವ್ ಮತ್ತು ಶ್ರೀದೇವಿ ಒಂದು ಕ್ರೇಜಿ ಕಾಂಬಿನೇಷನ್ ಎಂದೇ ಹೇಳಬಹುದು.
ಶ್ರೀದೇವಿ ಜೊತೆ 24 ಸಿನಿಮಾಗಳು
ಶ್ರೀದೇವಿಯನ್ನು ಗ್ಲಾಮರಸ್ ಆಗಿ ತೋರಿಸಿರುವ ನಿರ್ದೇಶಕರಲ್ಲಿ ರಾಘವೇಂದ್ರರಾವ್ ಕೂಡ ಒಬ್ಬರು. ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಶ್ರೀದೇವಿ 24 ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ವೆಟಗಾಡು, ಪದಹರೆಲ್ಲ ವಾಸ, ದೇವತಾ, ಜಗದೇಕ ವೀರುಡು, ಅತಿಲೋಕ ಸುಂದರಿ ಮತ್ತು ಆಖಾರಿ ಪ್ರಭಾಕರ್ ಸೇರಿದಂತೆ ಅನೇಕ ಸ್ಮರಣೀಯ ಚಿತ್ರಗಳಿವೆ. ರಾಘವೇಂದ್ರ ರಾವ್ ಸಂದರ್ಶನವೊಂದರಲ್ಲಿ ನಟಿ ಶ್ರೀದೇವಿ ಅವರನ್ನ ನೆನಪಿಸಿಕೊಂಡಿದ್ದಾರೆ.
ಶ್ರೀದೇವಿಯವರ ಕೊನೆಯ ಆಸೆ ಏನಾಗಿತ್ತು?
"ಶ್ರೀದೇವಿ ತಮ್ಮ ಕೊನೆಯ ಚಿತ್ರ 'ಮಾಮ್' ಪ್ರಚಾರಕ್ಕಾಗಿ ಹೈದರಾಬಾದ್ಗೆ ಬಂದಿದ್ದರು. ಆ ಸಮಯದಲ್ಲಿ ಅವರು ನನ್ನನ್ನ ಭೇಟಿಯಾಗಿದ್ದರು. ನಮ್ಮಿಬ್ಬರ ಕಾಂಬಿನೇಷನ್ನಲ್ಲಿ ಅದಾಗಲೇ 24 ಚಿತ್ರಗಳು ಬಂದಿದ್ದವಯ. ಅವರು ನನ್ನ ಕಾಲಿಗೆ ನಮಸ್ಕರಿಸಿ ನಿಮ್ಮ ನಿರ್ದೇಶನದ 25ನೇ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿ ಎಂದಿದ್ದರು. ಶ್ರೀದೇವಿ ಜೊತೆ 25ನೇ ಚಿತ್ರ ಮಾಡೋಣ ಅಂತಾ ನನಗೂ ಅನಿಸಿತ್ತು. ಆದರೆ ಅಷ್ಟರಲ್ಲಿ ಅವರು ವಿಧಿವಶರಾಗಿದ್ದರುʼ ಎಂದು ರಾಘವೇಂದ್ರ ರಾವ್ ಬೇಸರ ವ್ಯಕ್ತಪಡಿಸಿದರು.
ಇಂತಹ ಸಾವು ಸಂಭವಿಸಬಾರದಿತ್ತು
"ಚಿತ್ರರಂಗಕ್ಕೆ ಅದ್ಭುತ ಸೇವೆ ಸಲ್ಲಿಸಿದ ನಟಿ ಶ್ರೀದೇವಿಯವರಿಗೆ ಇಂತಹ ಸಾವು ಸಂಭವಿಸಬಾರದಿತ್ತು" ಎಂದು ರಾಘವೇಂದ್ರ ರಾವ್ ಭಾವುಕರಾದರು. ಶ್ರೀದೇವಿ ಫೆಬ್ರವರಿ 24, 2018ರಂದು ದುಬೈನಲ್ಲಿ ನಿಧನರಾದರು. ಶ್ರೀದೇವಿ ಅವರ ಪತಿ ಬೋನಿ ಕಪೂರ್ ಬಾಲಿವುಡ್ನಲ್ಲಿ ದೊಡ್ಡ ನಿರ್ಮಾಪಕರು.
ಶ್ರೀದೇವಿ ಪುತ್ರಿ ಜಾನ್ವಿ ಕಪೂರ್
ಶ್ರೀದೇವಿ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ನಟಿಯರಾಗಿ ಮಿಂಚುತ್ತಿದ್ದಾರೆ. ಜಾನ್ವಿ ಕಪೂರ್ ಬಾಲಿವುಡ್ ಜೊತೆಗೆ ಟಾಲಿವುಡ್ನಲ್ಲೂ ಕ್ರೇಜಿ ಹೀರೋಯಿನ್ ಆಗಿದ್ದಾರೆ. ಅವರು ಈಗಾಗಲೇ ಎನ್ಟಿಆರ್ ಅವರ ʼದೇವರʼ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರು ರಾಮ್ ಚರಣ್ ಅವರೊಂದಿಗೆ ʼಪೆದ್ದಿʼ ಚಿತ್ರದಲ್ಲಿ ನಟಿಸುತ್ತಿದ್ದಾರೆ.