ಆ ನಿರ್ದೇಶಕ ನಟಿಯರು ಕಾಂಪ್ರಮೈಸ್‌ ಮಾಡಿಕೊಳ್ಳಬೇಕು ಎಂದು ಅಗ್ರಿಮೆಂಟ್‌ನಲ್ಲೇ ಬರೆದಿದ್ದರು: ಕಾಸ್ಟಿಂಗ್‌ ಕೌಚ್ ಕರಾಳ ಮುಖ ತೆರೆದಿಟ್ಟ ನಟಿ

Casting Couch: ಈ ನಟಿ ಅಗ್ರೀಮೆಂಟ್‌ನಲ್ಲೇ ಹೊಂದಾಣಿಕೆ ಬಗ್ಗೆ ಬರೆಯುತ್ತಾರೆ ಎಂದು ಹೇಳುವ ಮೂಲಕ ದೊಡ್ಡ ಬಾಂಬ್‌ ಸಿಡಿಸಿದ್ದಾರೆ.

Written by - Chetana Devarmani | Last Updated : Apr 11, 2025, 11:19 AM IST
  • ನಟಿಯರು ಕಾಂಪ್ರಮೈಸ್‌ ಮಾಡಿಕೊಳ್ಳಬೇಕು
  • ಅಗ್ರೀಮೆಂಟ್‌ನಲ್ಲೇ ಹೊಂದಾಣಿಕೆ ಬಗ್ಗೆ ಬರೆಯುತ್ತಾರೆ
  • ಕಾಸ್ಟಿಂಗ್‌ ಕೌಚ್ ಕರಾಳ ಮುಖ ತೆರೆದಿಟ್ಟ ನಟಿ
ಆ ನಿರ್ದೇಶಕ ನಟಿಯರು ಕಾಂಪ್ರಮೈಸ್‌ ಮಾಡಿಕೊಳ್ಳಬೇಕು ಎಂದು ಅಗ್ರಿಮೆಂಟ್‌ನಲ್ಲೇ ಬರೆದಿದ್ದರು: ಕಾಸ್ಟಿಂಗ್‌ ಕೌಚ್ ಕರಾಳ ಮುಖ ತೆರೆದಿಟ್ಟ ನಟಿ

Casting Couch: ಕಿರುತೆರೆಯ ಪ್ರಸದ್ಧ ನಟಿ ಕಾಸ್ಟಿಂಗ್‌ ಕೌಚ್‌ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ನಟಿ ಚಾಹತ್ ಖನ್ನಾ ಅಗ್ರೀಮೆಂಟ್‌ನಲ್ಲೇ ಹೊಂದಾಣಿಕೆ ಬಗ್ಗೆ ಬರೆಯುತ್ತಾರೆ ಎಂದು ಹೇಳುವ ಮೂಲಕ ದೊಡ್ಡ ಬಾಂಬ್‌ ಸಿಡಿಸಿದ್ದಾರೆ. ನಟಿ ಚಾಹತ್ ಖನ್ನಾ 'ಹೀರೋ: ಭಕ್ತಿ ಹಿ ಶಕ್ತಿ ಹೈ' ಸೀರಿಯಲ್‌ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಬಡೇ ಅಚ್ಛೇ ಲಗ್ತೇ ಹೈ' ನಲ್ಲಿ ಆಯೇಷಾ ಪಾತ್ರದ ಮೂಲಕ ಮನ್ನಣೆ ಪಡೆದರು. ಇದಾದ ನಂತರ ನಟಿ ಚಾಹತ್ ಖನ್ನಾ 'ಕುಬೂಲ್ ಹೈ' ಧಾರವಾಹಿಯಲ್ಲೂ ಕಾಣಿಸಿಕೊಂಡರು.  

Add Zee News as a Preferred Source

ಟಿವಿಯ ಹೊರತಾಗಿ, ಚಾಹತ್ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರೊಂದಿಗೆ 'ಥ್ಯಾಂಕ್ಯೂ' ಸಿನಿಮಾದಲ್ಲಿ ನಟಿಸಿದ್ದಾರೆ. ಇರ್ಫಾನ್ ಖಾನ್ ಮತ್ತು ಜೂಹಿ ಚಾವ್ಲಾ ಅವರೊಂದಿಗೆ '7½ ಫೇರ್: ಮೋರ್ ದ್ಯಾನ್ ಎ ವೆಡ್ಡಿಂಗ್' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದಲ್ಲದೆ, ಅವರು ಸಂಜಯ್ ದತ್ ಮತ್ತು ಅಲಿ ಫಜಲ್ ಅವರೊಂದಿಗೆ 'ಪ್ರಸ್ಥಾನಂ' ಚಿತ್ರದಲ್ಲಿ ಕೆಲಸ ಮಾಡಿದರು ಮತ್ತು ಹರೀಶ್ ವ್ಯಾಸ್ ನಿರ್ದೇಶನದ 'ಯಾತ್ರಿ' ಚಿತ್ರದಲ್ಲೂ ಕಾಣಿಸಿಕೊಂಡರು. ಎಲ್ಲಾ ಚಿತ್ರಗಳಲ್ಲಿಯೂ ಅವರ ನಟನೆಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿತ್ತು. ನಟಿ ಚಾಹತ್ ಖನ್ನಾ ಉದ್ಯಮದಲ್ಲಿನ ಕಾಸ್ಟಿಂಗ್ ಕೌಚ್ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಬರುವ ನಟಿಯರು ಕಾಸ್ಟಿಂಗ್ ಕೌಚ್ ಎದುರಿಸಬೇಕಾಗುತ್ತದೆ ಎಂಬುದನ್ನು ನಟಿ ಚಾಹತ್ ಖನ್ನಾ ಹೇಳಿದರು. ಸಂದರ್ಶನದಲ್ಲಿ, ನಟರು ಅಥವಾ ನಟಿಯರು ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೆಲವು ಒಪ್ಪಂದದಲ್ಲಿ ಸ್ಪಷ್ಟವಾಗಿ ಬರೆಯಲಾಗಿರುತ್ತದೆ ಎಂದು ನಟಿ ಚಾಹತ್ ಖನ್ನಾ ಹೇಳಿದರು. #MeToo ನಂತಹ ಪ್ರಕರಣಗಳಲ್ಲಿ ಅನ್ಯಾಯಕ್ಕೆ ಒಳಗಾದವರು ತಕ್ಷಣವೇ ಮುಂದೆ ಬರಬೇಕು. ವರ್ಷಗಳ ನಂತರ ಅಲ್ಲ ಎಂದು ಚಾಹತ್ ಹೇಳಿದರು.  

ಇದನ್ನೂ ಓದಿ: ಇದ್ದಕ್ಕಿದ್ದಂತೆ ತಲೆ ಬೋಳಿಸಿಕೊಂಡ ಕನ್ನಡದ ಪ್ರಖ್ಯಾತ ನಟಿ! ಫ್ಯಾನ್ಸ್‌ ಮುಖದಲ್ಲಿ ಆತಂಕ

ಕೆಲವು ವಿಷಯಗಳನ್ನು ಬೆಳಕಿಗೆ ತರಬೇಕಾಗಿದೆ. ವೃತ್ತಿಜೀವನದ ಹೊಸತರಲ್ಲಿ 'ಅಮ್ಮಾ, ನೀವು ರಾಜಿ ಮಾಡಿಕೊಳ್ಳಬೇಕಾಗುತ್ತದೆ' ಎಂದು ಹೇಳಲಾಗಿತ್ತು ಎಂದು ಚಾಹತ್ ಖನ್ನಾ ಹೇಳಿದಳು. ಚಾಹತ್ ಅವರ ಪ್ರಕಾರ, ದಕ್ಷಿಣ ಚಿತ್ರೋದ್ಯಮದಲ್ಲಿ ಇಂತಹ ವಿಷಯಗಳನ್ನು ಬಹಿರಂಗವಾಗಿ ಮಾತನಾಡಲಾಗುತ್ತದೆ, ಆದರೆ ಹಿಂದಿ ಚಲನಚಿತ್ರೋದ್ಯಮದಲ್ಲಿ ವಿಷಯಗಳನ್ನು ಸುತ್ತಿಬಳಸಿ ಹೇಳಲಾಗುತ್ತದೆ. ದಕ್ಷಿಣದಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆ, ಆದರೆ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಚಾಹತ್ ಮತ್ತೊಂದು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದಳು. ಕೆಲವು ಸ್ಥಳಗಳಲ್ಲಿ, ನಾಯಕ, ನಿರ್ದೇಶಕ ಅಥವಾ ಬೇರೆಯವರೊಂದಿಗೆ ನಟಿಯರು ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಒಪ್ಪಂದದಲ್ಲಿಯೇ ಕೆಲವು ಬಾರಿ ಬರೆಯಲಾಗಿರುತ್ತದೆ ಎಂದು ಚಾಹತ್ ಹೇಳಿದರು. 'ರಾಜಿ ಮಾಡಿಕೊಳ್ಳುವುದನ್ನು ಒಪ್ಪಂದದ ಭಾಗವನ್ನಾಗಿ ಮಾಡುವ ಜನರನ್ನು ಸಹ ನಾನು ಭೇಟಿ ಮಾಡಿದ್ದೇನೆ' ಎಂದರು. 

ನಟಿ ಚಾಹತ್ ಖನ್ನಾ ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಮೊದಲ ಬಾರಿಗೆ ತನ್ನ ಬಾಲ್ಯದ ಗೆಳೆಯ ಭರತ್ ನರಸಿಂಹನನ್ನು ಮದುವೆಯಾದರು. ಕೆಲವೇ ತಿಂಗಳುಗಳಲ್ಲಿ ಈ ಮದುವೆ ಮುರಿದು ಬಿದ್ದಿತು. ಇದರ ನಂತರ, 2013 ರಲ್ಲಿ ಬರಹಗಾರ ಶಾರುಖ್ ಮಿರ್ಜಾ ಅವರ ಮಗ ಫರ್ಹಾನ್ ಮಿರ್ಜಾ ಅವರನ್ನು ವಿವಾಹವಾದರು. ಆದರೆ ಐದು ವರ್ಷಗಳ ನಂತರ ಈ ಸಂಬಂಧವೂ ಮುರಿದುಬಿತ್ತು.  

ಇದನ್ನೂ ಓದಿ: ಮದುವೆ ಬಳಿಕ ಸಿನಿರಂಗ ತೊರೆದು ಹೋಟೆಲ್‌ ಆರಂಭಿಸಿದ ಕನ್ನಡದ ಸ್ಟಾರ್‌ ಹೀರೋಯಿನ್‌! ಫ್ಯಾನ್ಸ್‌ಗೆ ಭಾರ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News