)
Darshan Case updates : ಜಾಮೀನು ರದ್ದು ಭೀತಿ ಮಧ್ಯೆ ದರ್ಶನ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೊನ್ನೆಯಷ್ಟೇ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಅಂತಿಮ ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ ದರ್ಶನ್ ಗೆ ಜೈಲಾ ಬೇಲಾ ಅನ್ನೋದು ಕೆಲವೇ ದಿನಗಳಲ್ಲಿ ಆದೇಶ ಹೊರಬೀಳಲಿದೆ ಈ ಗೊಂದಲದ ನಡುವೆ ಥಾಯ್ಲೆಂಡ್ ನಲ್ಲಿ ಶೂಟಿಂಗ್ ಮುಗಿಸಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿ ಬೆಂಗಳೂರಿಗೆ ವಾಪಾಸ್ ಆದ ದರ್ಶನ್ ಗೆ ಟೆನ್ಶನ್ ಶುರುವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ವಿದೇಶಕ್ಕೆ ಹೋಗಲು ಕೋರ್ಟ್ನಿಂದ ಅನುಮತಿ ಪಡೆದುಕೊಂಡಿದ್ದರು. 10 ದಿನಗಳ ಹಿಂದೆ ಥಾಯ್ಲೆಂಡ್ ಗೆ ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೇಶ್ ಜೊತೆಗೆ ದರ್ಶನ್ ಪ್ರಯಾಣ ಬೆಳೆಸಿದ್ರು ದಿ ಡೆವಿಲ್' ಸಿನಿಮಾದ ಸಾಂಗ್ ಶೂಟಿಂಗ್ನಲ್ಲಿ ದರ್ಶನ್ ಭಾಗಿಯಾಗಿದ್ದ ಫೋಟೋಗಳು ವೈರಲ್ ಆಗಿದ್ದವು. ಇದೀಗ ಎಲ್ಲಾ ಶೂಟಿಂಗ್ ಮುಗಿಸಿ ಕುಟುಂಬ ಸಮೇತ ತಡರಾತ್ರಿ 11:45ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೊಲೆ ಆರೋಪಿ ದರ್ಶನ್ ಗೆ ಭದ್ರತಾ ಸಿಬ್ಬಂದಿಗಳು ಸೆಲ್ಯೂಟ್ ಹೊಡೆದು ಬರಮಾಡಿಕೊಂಡಿದ್ದಾರೆ.
ಸದ್ಯ ಕೊಲೆ ಆರೋಪಿಯಾಗಿರುವ ದರ್ಶನ್ ಗೆ ಇಷ್ಟೆಲ್ಲ ರಾಜ ಮರ್ಯಾದೆ ಬೇಕಿತ್ತಾ ಅನ್ನೋ ಚರ್ಚೆಗಳು ಕೇಳಿಬರ್ತಿವೆ ಭದ್ರತೆ ನೀಡಿದ ವಿಚಾರ ಸಂಭಂದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿದ್ದು ನಂಗೆ ಈ ಬಗ್ಗೆ ಗೊತ್ತಿಲ್ಲ. ಭದ್ರತೆ ಕೊಟ್ಟಿದ್ದರಾ ಇಲ್ವ ಅಂತಾ ಬೇರೆ ರೀತಿಯಲ್ಲಿ ಏನ್ ಮಾಡಿದ್ದಾರೋ ಗೊತ್ತಿಲ್ಲ ಭದ್ರತೆ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದಾರೆ.
ಇನ್ನು A1 ಪವಿತ್ರಾ ಗೌಡ, A2 ದರ್ಶನ್, A14 ಪ್ರದೂಷ್, A12 ಲಕ್ಷ್ಮಣ್, A11 ನಾಗರಾಜ್, A7 ಅನುಕುಮಾರ್, A6 ಜಗದೀಶ್ ಈ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್ ಮೆಟ್ಟಿಲೇರಿದ್ದು ಸದ್ಯ ಮೊನ್ನೆ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಅಂತಿಮ ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ. ಕಿಲ್ಲಿಂಗ್ ಸ್ಟಾರ್ ದರ್ಶನ್ ಬೆನ್ನು ನೋವು ನೆಪವೊಡ್ಡಿ ಜಾಮೀನು ಮೇಲೆ ಹೊರಬಂದಿದ್ದ ದರ್ಶನ್ ಗೆ ಸುಪ್ರೀಂ ತಕ್ಕ ಪಾಠಕಲಿಸುತ್ತಾ ಕಾದುನೋಡಬೇಕಿದೆ..