ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1 ಇಂದು ಆರಂಭವಾಗಿದ್ದು ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಕಷ್ಟು ಕಾಂಟ್ರವರ್ಸಿ ಜೊತೆ ತಮ್ಮ ಜೋತಿಷ್ಯದ ಮೂಲಕ ಚಿರಪರಿಚಿತರಾದ ಆರ್ಯವರ್ಧನ್ ಗುರೂಜಿ‌ ಈಗ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1ರ ಮೊದಲ ಸ್ಪರ್ಧಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನೂ ಆರ್ಯವರ್ಧನ್ ಗುರೂಜಿ‌ಯನ್ನ ಸ್ಟೇಜ್‌ ಮೇಲೆ ಬರಮಾಡಿಕೊಂಡ ಅಭಿನಯ ಚಕ್ರವರ್ತಿ ಸುದೀಪ್ ಅವರು, ಆರ್ಯವರ್ಧನ್ ಜೊತೆ ಕೆಲಕಾಲ ಮಾತನಾಡಿದರು. ಈ ವೇಳೆ ಮಾತನಾಡೋದಕ್ಕೆ ತುಂಬಾ ಚಡಪಡಿಸುತ್ತಿದ್ದ ಆರ್ಯವರ್ಧನ್ ಅವರಿಗೆ ಕಿಚ್ಚ ಸುದೀಪ್‌ ಧೈರ್ಯ ತುಂಬಿದ್ರು. 'ಖಷಿಯಾಗಿ ಮಾತನಾಡಿ ಸರ್‌' ಅಂತಾ ಆತ್ಮವಿಶ್ವಾಸದ ಮಾತುಗಳನ್ನಾಡಿದರು.


ಇದನ್ನೂ ಓದಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿ ಮಾಲಾಶ್ರೀ ಮಗಳು ಚಿತ್ರರಂಗಕ್ಕೆ ಎಂಟ್ರಿ!


ಮಗಳ ಅಪ್ಪುಗೆ


ಇನ್ನು ಸ್ಟೇಜ್‌ ಮೇಲೆ ಮಾತನಾಡಲು ತಡವರಿಸುತ್ತಿದ್ದ ಆರ್ಯವರ್ಧನ್ ಗುರೂಜಿ‌ ಅವರಿಗೆ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಕುರಿತು ಮಾತನಾಡಿಸಿದರು. ಬಿಗ್‌ಬಾಸ್‌ ಮನೆಯ ಒಳಗೆ ಹೋಗುವ ಬಗ್ಗೆ ಮಾತನಾಡಿದಾಗ ಮಗಳನ್ನು ಅಪ್ಪಿಕೊಳ್ಳುವ ಆಸೆ ಹಂಚಿಕೊಂಡರು ಗುರೂಜಿ. ಅಪ್ಪ ಕರೆದ ಕೂಡಲೇ ಆರ್ಯವರ್ಧನ್ ಗುರೂಜಿ‌ಯ ಪುಟಾಣಿ ಪುತ್ರಿ ಸ್ಟೇಜ್‌ ಮೇಲೆ ಓಡೋಡಿ ಬಂದು ಅಪ್ಪನಿಗೆ ಅಪ್ಪುಗೆ ನೀಡಿದರು.


ಇದಾದ ಬಳಿಕ ಆರ್ಯವರ್ಧನ್ ಗುರೂಜಿ‌ ನೇರವಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿಯನ್ನ ಕೊಟ್ಟರು. ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಆರ್ಯವರ್ಧನ್ ಗುರೂಜಿ‌ ಈಗಾಗಲೇ ತಮ್ಮ ಐಪಿಎಲ್‌ ಭವಿಷ್ಯದ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲೂ ಹವಾ ಎಬ್ಬಿಸಿರುವ ಆರ್ಯವರ್ಧನ್ ಗುರೂಜಿ‌ ಈಗ ಬಿಗ್‌ಬಾಸ್‌ ಮನೆಯಲ್ಲಿ ಏನ್‌ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.


ಇದನ್ನೂ ಓದಿ : ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.