Rukmini Vasanth : ಫೋಟೋ ಜೊತೆ ಬಾಲ್ಯದ ಸವಿ ನೆನಪನ್ನು ಹಂಚಿಕೊಂಡಿರುವ ರುಕ್ಮಿಣಿ ವಸಂತ್ ತಮ್ಮ ಸಹೋದರಿಯೊಂದಿಗೆ ಪ್ರವಾಸಕ್ಕೆ ಹೋದಾಗ ಸಂಭವಿಸಿದ ಘಟನೆಯನ್ನು ನೆನಪಿಸಿಕೊಂಡರು. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಅಷ್ಟಕ್ಕೂ ಆಗಿದ್ದೇನು..? ಬನ್ನಿ ನೋಡೋಣ..
ಫೋಟೋದ ಹಿಂದಿನ ಕಥೆಯನ್ನು ಹಂಚಿಕೊಳ್ಳುತ್ತಾ ರುಕ್ಮಿಣಿ.. "ನಾನು ಸುಮಾರು 6 ವರ್ಷದವಳಿದ್ದಾಗ ನನ್ನ ತಂದೆ-ತಾಯಿ ನನ್ನನ್ನು ಮತ್ತು ನನ್ನ ತಂಗಿಯನ್ನು ನಮ್ಮ ಚಿಕ್ಕಮ್ಮನ ಮನೆಗೆ ಕಳುಹಿಸಿದರು. ಆ ದಿನ ನಾವು ಸಮುದ್ರದಲ್ಲಿ ಈಜಿ ಎಂಜಾಯ್ ಮಾಡಿ.. ನಂತರ, ಚಿತ್ರಾನ್ನ ಮತ್ತು ಮೊಸರನ್ನ ತಿಂದು.."
ಇದನ್ನೂ ಓದಿ:'ಬಾಯಿ ಮುಚ್ಚಿಕೊಂಡು ಇರಿ..', ಪಾಪರಾಜಿಗಳ ಜೊತೆ ಜಯಾ ಬಚ್ಚನ್ ಜಗಳ.. ಕಂಟ್ರೋಲ್ ಕಳೆದುಕೊಂಡು ಅಂಥಾ ಮಾತು ಅನ್ನೋದಾ!
ಆದರೆ ಆ ದಿನ ಒಂದು ಘಟನೆ ಶಾಂತವಾಗಿದ್ದ ದನವನ್ನು ಭಯಾನಕಗೊಳಿಸಿತು.. ಆ ದಿನ ನಾನು ನೀರಿನಲ್ಲಿ ಜಾರುವ ಯಾವುದೋ ವಸ್ತುವಿನ ಮೇಲೆ ಕಾಲಿಟ್ಟೆ.. ತುಂಬಾ ಭಯಭೀತಳಾಗಿ ಮತ್ತೆ ನೀರಿನ ಒಳಗೆ ಹೋಗಲು ನಿರಾಕರಿಸಿದೆ ಎಂದು ನನಗೆ ಸ್ಪಷ್ಟವಾಗಿ ನೆನಪಿದೆ.. ಬಹುಶಃ ಅದಕ್ಕಾಗಿಯೇ ನಾನು ನೀರನ್ನು ತ್ಯಜಿಸಿ ಮರವನ್ನು ಹತ್ತಿದೆ," ಅಂತ ಫೋಟೋಗೆ ವಿವರಣೆ ನೀಡಿದರು.

ಕೊನೆಯದಾಗಿ ರುಕ್ಮಿಣಿ ವಸಂತ್ ಅವರು ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಭಾಗ 1 ರಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರು ಕನಕವತಿ ಪಾತ್ರವನ್ನು ನಿರ್ವಹಿಸಿದ್ದರು. ಕನಕವತಿ ಪಾತ್ರ ಎಷ್ಟು ಪ್ರಭಾವ ಬೀರಿತು ಅಂದ್ರೆ, ರಿಷಬ್ ಬಿಟ್ಟು ಈ ಸಿನಿಮಾದ ಕೇಂದ್ರ ಬಿಂದು ಆಗಿದ್ದೇ ರುಕ್ಮಿಣಿ ವಸಂತ್..









