ಬೇಕಿದ್ರೆ ಈ ನಟಿಯರನ್ನ ರಾಯಭಾರಿಯನ್ನಾಗಿ ಮಾಡಿ ತಮನ್ನಾ ಬೇಡ..! ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ

ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್‌‌‌ನ ರಾಯಭಾರಿಯಾಗಿ ನಟಿ ತಮನ್ನಾ ಅವರನ್ನ ಆಯ್ಕೆ ಮಾಡಲಾಗಿದೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿರುವ  ಕನ್ನಡ ಪರ ಸಂಘಟನೆಗಳು ಸರ್ಕಾರ ಕನ್ನಡ ನಟ ನಟಿಯರನ್ನೇ ಕಡೆಗಣಿಸಿದೆ ಎಂದು ಆರೋಪಿಸಿತಿದ್ದು ತಮನ್ನಾ ಆಯ್ಕೆ ಕೈ ಬಿಡದಿದ್ರೆ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

Written by - Krishna N K | Last Updated : May 23, 2025, 04:56 PM IST
    • KSDL ರಾಯಭಾರಿಯಾಗಿ ಬಹುಬಾಷ ನಟಿ ತಮನ್ನ ಆಯ್ಕೆ
    • ತಮನ್ನಾ ಆಯ್ಕೆಗೆ ಕೆರಳಿದ ಕನ್ನಡ ಪರ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ
    • ತಮನ್ನಾ ಕೈ ಬಿಟ್ಟು ಕನ್ನಡಿಗರನ್ನೇ ಆಯ್ಕೆ ಮಾಡುವಂತೆ ಆಗ್ರಹ
ಬೇಕಿದ್ರೆ ಈ ನಟಿಯರನ್ನ ರಾಯಭಾರಿಯನ್ನಾಗಿ ಮಾಡಿ ತಮನ್ನಾ ಬೇಡ..! ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳಿಂದ ಎಚ್ಚರಿಕೆ

ಬೆಂಗಳೂರು : ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್‌ ತನ್ನ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾರನ್ನ ನೇಮಕ ಮಾಡಿದೆ. ನಟಿ ತಮನ್ನಾ ರಾಯಭಾರಿಯಾಗಿರೋದು ಗೊತ್ತಾಗ್ತಿದ್ದಂತೆ ಕನ್ನಡಿಗರು ಅಸಮಾಧಾನ ಹೊರಹಾಕ್ತಿದ್ದಾರೆ.. 6 ಕೋಟಿ 20ಲಕ್ಷ ಕೊಟ್ಟು ಪರಭಾಷೆಯ ನಟಿಯನ್ನ ರಾಯಭಾರಿಯನ್ನಾಗಿ ಮಾಡುವ ಅಗತ್ಯವೇನಿತ್ತೆಂದು ಪ್ರಶ್ನಿಸುತ್ತಿದ್ದಾರೆ.

ನಟಿ ತಮನ್ನಾರನ್ನ ರಾಯಭಾರಿ ಮಾಡಿರೋದು ತಿಳಿದು ಕೆರಳಿರೋ ಕರವೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸುದೀರ್ಘವಾಗಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ತಮನ್ನಾರನ್ನ ರಾಯಭಾರಿ ಮಾಡುವ ಮೂಲಕ ಕೆಎಸ್‌ಡಿಎಲ್ ಕನ್ನಡ ನಟ, ನಟಿಯರನ್ನ ಕಡೆಗಣಿಸಿದೆ ಎಂದು ಆರೋಪಿಸಿರೋ ನಾರಾಯಣಗೌಡರು ತಮನ್ನಾರನ್ನ ರಾಯಭಾರಿ ಸ್ಥಾನದಿಂದ ಕೈಬಿಟ್ಟು ಕನ್ನಡ ನಟ ನಟಿಯರನ್ನೇ ನೇಮಿಸಬೇಕೆಂದು ಅಗ್ರಹಿಸಿದ್ದಾರೆ. ಒಂದೊಮ್ಮೆ ಕೆಸ್‌ಡಿಎಲ್ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ನಟಿ ತಮನ್ನಾರನ್ನೇ ರಾಯಭಾರಿಯಾಗಿ ಮುಂದುವರೆಸಿದರೆ ಬ್ರಹತ್ ಹೋರಾಟ ಮಾಡುವ ಎಚ್ಚರಿಕೆಯನ್ನ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ  ನಾರಾಯಣಗೌಡ ನೀಡಿದ್ದಾರೆ‌.

ಇದನ್ನೂ ಓದಿ:ರಶ್ಮಿಕಾ- ವಿಜಯ್‌ ದೇವರಕೊಂಡ ಗುಟ್ಟಾಗಿ ಮದುವೆ.!? ವಿದೇಶಕ್ಕೆ ಕುಟುಂಬ ಸಮೇತ ಪ್ರಯಾಣ ಬೆಳೆಸಿದ ಜೋಡಿ

ಇನ್ನೂ KSDL ರಾಯಭಾರಿಯಾಗಿ ನಟಿ ತಮನ್ನ ಆಯ್ಕೆ ವಿವಾದ ವಾಗ್ತಿದ್ದಂತೆ ಎಚ್ಚೆತ್ತ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ ತಮನ್ನಾ ಆಯ್ಕೆಗೆ ಕಾರಣವನ್ನ ನೀಡಿರೋ ಸಚಿವ ಎಂಬಿ ಪಾಟೀಲ್ ಕೆಎಸ್‌ಡಿಎಲ್ ಹೊರರಾಜ್ಯದ ಮಾರುಕಟ್ಟೆಯಲ್ಲಿ ಪರಿಣಾಮ ಬೀರುವ ಉದ್ದೇಶ ಹೊಂದಿದ್ದು ತಮನ್ನಾ ಆಯ್ಕೆಗೆ ಮಾರುಕಟ್ಟೆ ಎಕ್ಸ್‌ಪರ್ಟ್‌ಗಳ ಅಧಿಪ್ರಾಯ ಪಡೆದಿದ್ದಾಗಿಯೂ ತಿಳಿಸಿದ್ದಾರೆ....

KSDL ರಾಯಭರಿಯಾಗಿ ಪರಭಾಷೆ ತಮನ್ನಾ ಆಯ್ಕೆ ವಿಚಾರವಾಗಿ ಕನ್ನಡ ಪರ ಹೋರಾಟಗಾರ  ರೂಪೇಶ್ ರಾಜಣ್ಣ ಹೋರಾಟ ಮಾಡಿ, ಕನ್ನಡ ನಟ ನಟಿಯರನ್ನ KSDL ರಾಯಭರಿಯಾಗಿ ಮಾಡಬೇಕು 
ಅಮುಲ್ ನನ್ನ ನಾವು ವಿರೋಧ ಮಾಡಿ ನಂದಿನಿಯನ್ನೇ ಯಾಕೆ ಬೇಕು ಅಂದಿದ್ವಿ ನಂದಿನಿ ಕರ್ನಾಟಕದ್ದು ಅಂತ ಪುನೀತ್ ರಾಜ್ ಕುಮಾರ್ ಅವರು ಕೂಡ ನಂದಿನಿಗೆ ರಾಯಭಾರಿ ಆಗಿದ್ರು ಇವರು ಬೇಕಿದ್ರೆ ಐಶ್ವರ್ಯ ರೈ,  ಶಿಲ್ಪಾ ಶೆಟ್ಟಿ ರಶ್ಮಿಕಾ ಅವರನ್ನ ರಾಯಭಾರಿಯನ್ನಾಗಿ ಮಾಡಲಿ ಇವರು ಮಾರುಕಟ್ಟೆ ಹೆಚ್ಚಿಸಲು ಹೀಗೆ ಮಾಡ್ತಿಲ್ಲ ದುಡ್ಡು ಹೊಡೆಯುವ ಪ್ಲಾನ್ ಇದೆ. ಇಂಗ್ಲೆಂಡ್ ರಾಣಿ ನೇ ಮೈಸೂರ್ ಸ್ಯಾಂಡಲ್ ಸೋಪ್ ಬಳಸುತ್ತಿರುವಾಗ ಪ್ರಚಾರದ ಅವಶ್ಯಕತೆ ಇಲ್ಲ ರಾಯಭಾರಿಯನ್ನು ಬದಲಿಸದೇ ಇದ್ದಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿಯುತ್ತೇವೆ ಎಂದಿದ್ದಾರೆ. 

ಇದನ್ನೂ ಓದಿ:ʼನನಗೆ ಅದಿಲ್ಲದೇ ನಿದ್ದೇನೆ ಬರಲ್ಲ.. ತುಂಬಾ ಆಡಿಕ್ಟ್‌ ಆಗಿದ್ದೇನೆʼ.. ನಟಿ ಅದಿತಿ ಶಾಕಿಂಗ್‌ ಕಾಮೆಂಟ್!‌   

ಒಟ್ನಲ್ಲಿ ಕನ್ನಡ ನಟ ನಟಿಯರನ್ನ ಪರಿಗಣಿಸದೆ ಬಹುಬಾಷಾ ನಟಿ ತಮ್ನನ್ನಾರನ್ನ ಕೆಎಸ್‌ಡಿಎಲ್ ರಾಯಭಾರಿ ಮಾಡಿರೊದು ಕನ್ನಡಿಗರನ್ನ ಕೆರಳಿಸಿದ್ದು ತಮನ್ನಾ ಕೈ ಬಿಡುವಂತೆ ಗಟ್ಟಿಯಾದ ಆಗ್ರಹಗಳು ಕೇಳಿ ಬರ್ತಿದೆ...

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News