)
Miss India: ದೀಪ್ತಿ ಭಟ್ನಾಗರ್ 18ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದು ದೇಶದ ಗಮನ ಸೆಳೆದರು. ಮಾಡೆಲಿಂಗ್ ಕ್ಷೇತ್ರದಿಂದ ಬಂದ ದೀಪ್ತಿ, ತನ್ನ ಸೌಂದರ್ಯ ಮತ್ತು ಆತ್ಮವಿಶ್ವಾಸದಿಂದ ಗ್ಲಾಮರ್ ಜಗತ್ತಿಗೆ ಕಾಲಿಟ್ಟರು. ಅವರ ಗೆಲುವೇ ಚಿತ್ರರಂಗಕ್ಕೆ ಪ್ರವೇಶದ ಬಾಗಿಲು ತೆರೆದಿತ್ತು.
ದೀಪ್ತಿ 1996ರಲ್ಲಿ ಬಂದ ತೆಲುಗು ಚಿತ್ರ ಪೆಲ್ಲಿ ಸಂದಡಿಯ ಮೂಲಕ ಟಾಲಿವುಡ್ಗೆ ಪ್ರವೇಶಿಸಿದರು. ಈ ಚಿತ್ರ ಭಾರೀ ಹಿಟ್ ಆಗಿ, ಕೇವಲ ಒಂದೇ ಚಿತ್ರದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು. ಅವರ ನಟನೆಯ ಶೈಲಿ, ನಗು ಮತ್ತು ಸೌಂದರ್ಯವು ತೆಲುಗು ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.
ಹಿಂದಿ ಚಿತ್ರದ ದಿಗ್ಗಜ ಧರ್ಮೇಂದ್ರ ಅವರ ಕುಟುಂಬಕ್ಕೆ ದೀಪ್ತಿ ಮದುವೆಯಾಗಿ ಹೋದರು. ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಭಯ್ ಡಿಯೋಲ್ಗಳಿರುವ ಈ ದೊಡ್ಡ ಕುಟುಂಬದಲ್ಲಿ ದೀಪ್ತಿಗೂ ವಿಶೇಷ ಸ್ಥಾನವಿದೆ. ದೀಪ್ತಿ ನಟ ವೀರೇಂದ್ರ ಅವರ ಮಗ ರಣದೀಪ್ ಆರ್ಯರನ್ನು ವಿವಾಹವಾದರು. ಅವರಿಬ್ಬರಿಗೆ ಶುಭ್ ಮತ್ತು ಶಿವ್ ಎಂಬ ಇಬ್ಬರು ಮಕ್ಕಳು ಕೂಡ ಇದ್ದಾರೆ.
ದೀಪ್ತಿ ಕೇವಲ ತೆಲುಗಲ್ಲಿ ಮಾತ್ರ ಅಲ್ಲ, ಹಿಂದಿ ಮತ್ತು ತಮಿಳು ಚಿತ್ರಗಳಲ್ಲೂ ಅಭಿನಯಿಸಿ ಮೆಚ್ಚುಗೆ ಪಡೆದರು. ಶಾರುಖ್ ಖಾನ್ ಜೊತೆಗೆ ಮಾಡಿದ ಜಾಹೀರಾತು ಅವರಿಗೆ ಮತ್ತಷ್ಟು ಜನಪ್ರಿಯತೆ ತಂದಿತು. ಆದರೆ ಸಿನಿಮಾದಲ್ಲಿ ನಿರಂತರ ಅವಕಾಶಗಳ ಕೊರತೆ ಮತ್ತು ಸ್ಪರ್ಧೆ ಹೆಚ್ಚಾಗಿ, ಅವರು ನಿಧಾನವಾಗಿ ಉದ್ಯಮದಿಂದ ದೂರವಲಾಯಿತು.
ಮಿಸ್ ಇಂಡಿಯಾ ಆದರೂ, ಒಂದು ಹಿಟ್ ಚಿತ್ರ ಇದ್ದರೂ, ದೀಪ್ತಿಗೆ ನಿರೀಕ್ಷಿಸಿದಷ್ಟು ಅವಕಾಶಗಳು ಸಿಗಲಿಲ್ಲ. ಹೊಸ ನಟಿಯರ ಆಗಮನ, ತೀವ್ರ ಸ್ಪರ್ಧೆ ಮತ್ತು ಪಾತ್ರಗಳ ಕೊರತೆಯಿಂದಾಗಿ ಅವರು ಚಿತ್ರರಂಗದಲ್ಲಿ ಮುಂದುವರಿಯಲು ಕಷ್ಟವಾಯಿತು.
ಚಿತ್ರರಂಗದಿಂದ ದೂರವಾದ ನಂತರ, ದೀಪ್ತಿ ನಿರ್ಮಾಪಕಿಯಾಗಿ ಕೆಲಸ ಶುರುಮಾಡಿದರು. ಜೊತೆಗೆ, ಸಾಮಾಜಿಕ ಮಾಧ್ಯಮದಲ್ಲಿ ಟ್ರಾವೆಲ್ ವ್ಲಾಗರ್ ಆಗಿ ದೊಡ್ಡ ಹೆಸರು ಪಡೆದರು. ಅವರು ದೇಶ–ವಿದೇಶಗಳ ಪ್ರವಾಸವನ್ನು ಹಂಚಿಕೊಳ್ಳುತ್ತಾ ಹಲವರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
ಅವಕಾಶಗಳ ಕೊರತೆಯಿಂದ ಚಿತ್ರರಂಗ ತೊರೆಯಬೇಕಾದರೂ, ದೀಪ್ತಿ ಹೊಸ ದಾರಿಯನ್ನು ಆರಿಸಿಕೊಂಡರು. ಇಂದು ಅವರು ಯಶಸ್ವಿ ಬ್ಲಾಗರ್, ತಾಯಿ ಮತ್ತು ಉದ್ಯಮಿಯಾಗಿ ತಮ್ಮದೇ ಆದ ಗುರುತನ್ನು ಕಟ್ಟಿಕೊಂಡಿದ್ದಾರೆ. ಯಶಸ್ಸು ಎಂದರೆ ಕೇವಲ ಸಿನೆಮಾಲೇ ಎಂಬ ಕಲ್ಪನೆಯನ್ನು ಅವರು ತಳ್ಳಿಹಾಕಿದ್ದಾರೆ.