Nimrat Kaur father killed by terrorist: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಈ ದಾಳಿ ಖ್ಯಾತ ನಟಿಗೆ ತನ್ನ ಬಾಲ್ಯದ ದುರಂತವನ್ನು ನೆನಪಿಸಿದೆ. ಈ ಹಿಂದೊಮ್ಮೆ ಕಾಶ್ಮೀರದಲ್ಲಿ ನಡೆದ ಇದೇ ರೀತಿಯ ಭಯೋತ್ಪಾದಕ ದಾಳಿಯಲ್ಲಿ ಬಾಲಿವುಡ್ ನಟಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು.
ನಿಮ್ರತ್ ಕೌರ್ ಬಾಲಿವುಡ್ನ ಪ್ರಸಿದ್ಧ ನಟಿ. 'ಪೆಡ್ಲರ್', 'ದಿ ಲಂಚ್ ಬಾಕ್ಸ್', 'ಏರ್ಲಿಫ್ಟ್' ಮತ್ತು 'ದಾಸವಿ' ನಂತಹ ಚಿತ್ರಗಳಲ್ಲಿನ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಆದರೆ ನಿಮ್ರತ್ ಕೌರ್ ಬಾಲ್ಯದಲ್ಲಿ ಎದುರಿಸಿದ ದುರಂತ ಘಟನೆ ಈಗ ಮುನ್ನೆಲೆಗೆ ಬಂದಿದೆ. ಈ ಘಟನೆ ಬಗ್ಗೆ ತಿಳಿದ ಅವರ ಅಭಿಮಾನಿಗಳ ಹೃದಯದಲ್ಲಿ ನೋವುಂಟು ಮಾಡಿದೆ. ಆ ಸಮಯದಲ್ಲಿ ನಿಮ್ರತ್ ಕೇವಲ 11 ವರ್ಷ ವಯಸ್ಸಿನವರಾಗಿದ್ದರು. ಆದರೆ ಜೀವನದಲ್ಲಿ ಅಳಿಸಲಾಗದ ಗಾಯದ ಗುರುತು ಆಗಲೇ ಬಿದ್ದಿತ್ತು.
ಭಯೋತ್ಪಾದಕರಿಂದ ಹತ್ಯೆಗೀಡಾದ ಮೇಜರ್ ಭೂಪಿಂದರ್ ಸಿಂಗ್ ಅವರು ಖ್ಯಾತ ನಟಿ ನಿಮ್ರತ್ ಕೌರ್ ಅವರ ತಂದೆ. ಭೂಪಿಂದರ್ ಸಿಂಗ್ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. 1994 ರಲ್ಲಿ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಅವರನ್ನು ಭಯೋತ್ಪಾದಕರು ಅಪಹರಿಸಿದರು. ಭೂಪಿಂದರ್ ಸಿಂಗ್ ಬಿಡುಗಡೆಗಾಗಿ ಸರ್ಕಾರದ ಎದುರು ಬೇಡಿಕೆಗಳನ್ನು ಇಟ್ಟಿದ್ದರು. ಆದರೆ ಆ ಬೇಡಿಕೆಗಳು ಈಡೇರದಿದ್ದಾಗ ಅವರ ಕೋಪ ಹೆಚ್ಚಾಯಿತು. ಅಪಹರಣದ ಒಂದು ವಾರದ ನಂತರ ಭೂಪಿಂದರ್ ಸಿಂಗ್ ಅವರನ್ನು ಕ್ರೂರವಾಗಿ ಕೊಲ್ಲಲಾಯಿತು.
ಇದನ್ನೂ ಓದಿ: Pahalgam attack : ಪಹಲ್ಗಾಮ್ ದಾಳಿಯ ಭಯೋತ್ಪಾದಕರ ರೇಖಾ ಚಿತ್ರ ಬಿಡುಗಡೆ..!
ಈ ದುರಂತವು ನಿಮ್ರತ್ ಕೌರ್ ಅವರ ಕುಟುಂಬಕ್ಕೆ ಶಾಶ್ವತವಾದ ಗಾಯವನ್ನ ಉಂಟು ಮಾಡಿತು. ಆಕೆಯ ತಂದೆಯ ಅಗಲಿಕೆ ನಿಮ್ರತ್ ಅವರ ಹೃದಯದಲ್ಲಿ ಅಳಿಸಲಾಗದ ಗಾಯವನ್ನು ಉಂಟು ಮಾಡಿತು. ಅನೇಕ ಸಂದರ್ಶನಗಳಲ್ಲಿ ತನ್ನ ತಂದೆಯ ಬಗ್ಗೆ ನಿಮ್ರತ್ ಕೌರ್ ಮಾತನಾಡಿದ್ದಾರೆ.
ನಿಮ್ರತ್ ಕೌರ್ ಗೆ ಅವರ ತಂದೆ ಕಲಿಸಿದ ಮೌಲ್ಯಗಳು ಮತ್ತು ಧೈರ್ಯ ಅವಳಿಗೆ ಜೀವನದಲ್ಲಿ ಮುಂದುವರಿಯಲು ಶಕ್ತಿಯನ್ನು ನೀಡಿತು. ತನ್ನ ತಂದೆಯನ್ನು ನೆನಪಿಸಿಕೊಳ್ಳುತ್ತಾ, ತನ್ನ ಗುರಿಗಳತ್ತ ಗಮನಹರಿಸಿದರು. ಇಂದು ಬಾಲಿವುಡ್ನಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ.
ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಮೇಜರ್ ಭೂಪಿಂದರ್ ಸಿಂಗ್ ಅವರು ಅಕ್ಟೋಬರ್ 25, 1952 ರಂದು ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಮೋಹನಪುರದಲ್ಲಿ ಜನಿಸಿದರು. ಅವರು ದೇಶ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟರು. ದೇಶಕ್ಕೆ ಅವರು ನೀಡಿದ ಸೇವೆಗಾಗಿ ಮರಣೋತ್ತರ 'ಶೌರ್ಯ ಚಕ್ರ' ಪ್ರಶಸ್ತಿಯನ್ನು ನೀಡಲಾಯಿತು.
ಭೂಪಿಂದರ್ ಸಿಂಗ್ ಅವರ ತ್ಯಾಗವನ್ನು ಸ್ಮರಿಸಲು ಸುಮಾರು 30 ವರ್ಷಗಳ ನಂತರ ಮೋಹನಪುರದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಈ ಕಾರ್ಯಕ್ರಮವನ್ನು ನಿಮ್ರತ್ ಕೌರ್ ತಮ್ಮ ಕುಟುಂಬದೊಂದಿಗೆ ಪ್ರಾರಂಭಿಸಿದರು. ನಿಮ್ರತ್ಗೆ ಅದು ವೈಯಕ್ತಿಕವಾಗಿ ಬಹಳ ಭಾವನಾತ್ಮಕ ಘಟನೆಯಾಗಿ ಉಳಿಯಿತು.
ಇದನ್ನೂ ಓದಿ: 13ನೇ ವಯಸ್ಸಿನಲ್ಲಿ ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.