)
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಅವರ ಹೊಸ ಚಿತ್ರ 'ಕಾಂತಾರ ಚಾಪ್ಟರ್ 1' ಯಶಸ್ವಿಯಾಗಿ ವಿಶ್ವದೆಲ್ಲೆಡೆ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅಕ್ಟೋಬರ್ 2, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಗಿದೆ.ಚಿತ್ರವು ಮೊದಲ ದಿನವೇ 60 ಕೋಟಿ ರೂಪಾಯಿ ಸಂಗ್ರಹಿಸಿ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದಿದೆ.
ಇದೆ ವೇಳೆ ರಿಷಭ್ ಶೆಟ್ಟಿ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಸಿನಿಮಾ ಪಯಣದ ಕುರಿತು ಭಾವನಾತ್ಮಕ ಅನುಭವನ್ನು ಬರೆದುಕೊಂಡಿದ್ದಾರೆ. 2016 ರಲ್ಲಿ ತಮ್ಮ ಮೊದಲ ನಿರ್ದೇಶನದ ಚಿತ್ರ 'ರಿಕ್ಕಿ'ಗೆ ಒಂದು ಸಂಜೆಯ ಪ್ರದರ್ಶನಕ್ಕಾಗಿ ತಾವು ಎದುರಿಸಿದ ಸಂಘರ್ಷವನ್ನು ಸ್ಮರಿಸಿದ ಅವರು, 2025 ರಲ್ಲಿ 'ಕಾಂತಾರ ಚಾಪ್ಟರ್ 1 ಚಿತ್ರಕ್ಕೆ' 5,000 ಕ್ಕೂ ಹೆಚ್ಚು ಪ್ರದರ್ಶನಗಳು ಹೌಸ್ಫುಲ್ ಆಗಿರುವ ಬಗ್ಗೆ ಹೆಮ್ಮೆಯಿಂದ ಬರೆದಿದ್ದಾರೆ' 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು housefull ಶೋಗಳ ಈ ಅದ್ಭುತ ಪಯಣ.ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ' ಎಂದು 9 ವರ್ಷಗಳ ಹಿಂದೆ ಒಂದು ಶೋಗಾಗಿ ಪಟ್ಟಿದ್ದ ಕಷ್ಟವನ್ನು ಉಲ್ಲೇಖಿಸಿದ ಟ್ವೀಟ್ ನನ್ನು ರಿಪೋಸ್ಟ್ ಮಾಡಿ ತಮ್ಮ ಸಿನಿ ಪಯಣವನ್ನು ಸ್ಮರಿಸಿದ್ದಾರೆ.
2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು
housefull ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ.From struggling to get one evening show in 2016 to 5000+ housefull shows in 2025.
This journey is… https://t.co/vuSfaVIAA2— Rishab Shetty (@shetty_rishab) October 2, 2025
ಅಂತು ಇಂತು ಅವರಿವರ ಕೈಕಾಲು ಹಿಡಿದು ಮಂಗಳೂರಿನ Big Cinemas ನಲ್ಲಿ ನಾಳೆಯಿಂದ ಸಂಜೆ 7 PM show ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ticket book ಮಾಡಿ thank u #BigCinemas Rj Eroll ? ? ? ? ?' ಎಂದು ರಿಶಬ್ ಶೆಟ್ಟಿ ಆಗ ತಾವು ಪಟ್ಟಿದ್ದ ಕಷ್ಟವನ್ನು ಹೇಳಿಕೊಂಡಿದ್ದರು.
ರಿಷಭ್ ಶೆಟ್ಟಿಯವರ ಕನ್ನಡ ಚಿತ್ರರಂಗದ ಪಯಣ 2012 ರಲ್ಲಿ 'ತುಗ್ಲಕ್' ಚಿತ್ರದಲ್ಲಿ ಖಳನಾಯಕನ ಪಾತ್ರದಿಂದ ಆರಂಭವಾಯಿತು. 'ಲೂಸಿಯಾ' ಮತ್ತು 'ಉಳಿದವರು ಕಂಡಂತೆ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ನಂತರ, 2016 ರಲ್ಲಿ 'ರಿಕ್ಕಿ' ಚಿತ್ರದ ಮೂಲಕ ನಿರ್ದೇಶಕರಾಗಿ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದರು.
'ಕಿರಿಕ್ ಪಾರ್ಟಿ', 'ಕಾಂತಾರ' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿ, ನಟಿಸಿ ಮತ್ತು ನಿರ್ಮಿಸಿದ ಅವರು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ್ದಾರೆ.ರಿಷಭ್ ಶೆಟ್ಟಿಯವರು 'ಕಿರಿಕ್ ಪಾರ್ಟಿ'ಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು 'ಸರಿಕಾರಿ ಹಿ. ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ' ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು (ಶ್ರೇಷ್ಠ ಮಕ್ಕಳ ಚಿತ್ರ) ಗಳಿಸಿದ್ದಾರೆ.
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 'ಕಾಂತಾರ' ಚಿತ್ರಕ್ಕಾಗಿ ಅವರು ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದರೆ, ಚಿತ್ರವು 'ಶ್ರೇಷ್ಠ ಜನಪ್ರಿಯ ಮನರಂಜನಾ ಚಿತ್ರ' ಪ್ರಶಸ್ತಿಯನ್ನು ಗೆದ್ದಿತು.'ಕಾಂತಾರ ಚಾಪ್ಟರ್ 1'ನ ಈ ಭವ್ಯ ಯಶಸ್ಸು ರಿಷಭ್ ಶೆಟ್ಟಿಯವರ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಪ್ರೇಕ್ಷಕರ ಪ್ರೀತಿಯ ಸಾಕ್ಷಿಯಾಗಿದೆ.ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಈ ಕಲಾವಿದನ ಈ ಸಾಧನೆ ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ಕ್ಷಣ ಎಂದೇ ಹೇಳಬಹುದು.