ದೆಹಲಿ NCR ನಲ್ಲಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ನಾನು ಪ್ರಶ್ನಿಸಲು ಬಯಸುವುದಿಲ್ಲ.

ಬೆಂಗಳೂರು: ದೆಹಲಿ NCRನಲ್ಲಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ನಿರ್ಧಾರದ ಬಗ್ಗೆ ದೇಶದಲ್ಲೆಡೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಅನೇಕ ಸೆಲಿಬ್ರಿಟಿಗಳು ಸಹ ಧವ್ನಿ ಎತ್ತುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಸಹ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿ NCR ನಲ್ಲಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ನಾನು ಪ್ರಶ್ನಿಸಲು ಬಯಸುವುದಿಲ್ಲ. ಏಕೆಂದರೆ ಈ ನಿರ್ಧಾರಕ್ಕೆ ಅದರದ್ದೇ ಆದ ಕಾರಣಗಳಿರಬಹುದು ಎಂದು ಸುದೀಪ್ ಹೇಳಿದ್ದಾರೆ.
The Supreme Court's decision to round up the stray dogs in Delhi NCR and to be kept in shelters permanently isn't something I wanna question as this decision may have its reasons. But it also raises serious concerns about their well-being and the impact on their lives.
Having… pic.twitter.com/T0fIaiqRiW
— Kichcha Sudeepa (@KicchaSudeep) August 13, 2025
ಆದರೆ ಇದು ನಾಯಿಗಳ ಯೋಗಕ್ಷೇಮ ಮತ್ತು ಅವುಗಳ ಜೀವನದ ಮೇಲೆ ಬೀರುವ ಪರಿಣಾಮದ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕುತ್ತದೆ. ನಾನು ಚಿಕ್ಕಂದಿನಿಂದ ನಾಯಿಗಳನ್ನು ಸಾಕುತ್ತಾ ಬೆಳೆದವನು. ನನ್ನ ಕುಟುಂಬವು ಇಂಡೀಸ್ ನಾಯಿಗಳನ್ನು ದತ್ತು ಪಡೆದಿರುವುದರಿಂದ, ಅವು ತರುವ ಪ್ರೀತಿ ಮತ್ತು ನಿಷ್ಠೆ ಎಂಥದ್ದು ಎಂದು ನನಗೆ ಗೊತ್ತು ಎಂದು ಸುದೀಪ್ ಹೇಳಿದ್ದಾರೆ.
ನಾಯಿಗಳು ಬದುಕಲು ಬೀದಿಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ, ಆದರೆ ನಾವು ಅವುಗಳಿಗೆ ಆಶ್ರಯ ನೀಡಬಹುದು. ನಾವು ಖಂಡಿತವಾಗಿಯೂ ಧ್ವನಿಯಿಲ್ಲದವರಿಗೆ ಧ್ವನಿಯಾಗಬಹುದು. ದಯವಿಟ್ಟು ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಿ ಎಂದು ನಟ ಸುದೀಪ್ ಮನವಿ ಮಾಡಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.