)
ಕನ್ನಡ ಚಿತ್ರರಂಗದ ಸ್ಪೂರದ್ರೂಪಿ ನಟರಲ್ಲಿ ಒಬ್ಬರಾದ ದಿಗಂತ್, ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಬಾಲಿವುಡ್ಗೂ ಕಾಲಿಟ್ಟಿದ್ದರು. ಆದರೆ, ಅವರ ಬಾಲಿವುಡ್ ಪಯಣವು ಒಂದು ದುರಂತದ ಘಟನೆಯಿಂದ ಕೊನೆಗೊಂಡಿತು. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ದಿಗಂತ್, 2015ರಲ್ಲಿ ಲಂಡನ್ನಲ್ಲಿ ನಡೆದ ಆ ಘಟನೆಯ ಬಗ್ಗೆ ಮೊದಲ ಬಾರಿಗೆ ಮನದಾಳದಿಂದ ಮಾತನಾಡಿದ್ದಾರೆ.
ದಿಗಂತ್, 'ಟಿಕೆಟ್ ಟು ಬಾಲಿವುಡ್' ಚಿತ್ರದ ಚಿತ್ರೀಕರಣದ ವೇಳೆ ಒಂದು ದೃಶ್ಯದ ಶೂಟಿಂಗ್ ಸಮಯದಲ್ಲಿ ಅವರ ಕೋ-ಸ್ಟಾರ್, ಚಿತ್ರದ ನಾಯಕಿಯಿಂದ ಎಸೆದ ಹೈ ಹೀಲ್ಸ್ ಚಪ್ಪಲಿಯು ಅವರ ಕಣ್ಣಿಗೆ ಬಡಿದು ಗಂಭೀರ ಗಾಯವಾಯಿತು. ಈ ಘಟನೆಯಿಂದಾಗಿ ದಿಗಂತ್ ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು. "ಕಣ್ಣಿಗೆ ಏಟಾದಾಗ ಎಲ್ಲವೂ ಮುಗಿದು ಹೋಯಿತು. ಕರಿಯರ್ ಕೊನೆಯಾಯಿತು ಎಂದು ಭಾವಿಸಿದ್ದೆ," ಎಂದು ದಿಗಂತ್ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಈ ಘಟನೆಯ ನಂತರ ದಿಗಂತ್ ಖಿನ್ನತೆಗೆ ಒಳಗಾಗಿದ್ದರು. "ಮೊದಲ 15-20 ದಿನಗಳ ಕಾಲ ಏನೂ ನೆಮ್ಮದಿ ಇರಲಿಲ್ಲ. ಒಂದು ಕಣ್ಣಿಲ್ಲದ ಜೀವನ ಕಾಡುತ್ತಿತ್ತು," ಎಂದವರು. ವಿಶೇಷವಾಗಿ, ಬ್ಯಾಡ್ಮಿಂಟನ್ ಆಡಲು ಹೋದಾಗ ಶಟಲ್ ಕಾಣದೇ ಇದ್ದಾಗ ಅವರಿಗೆ ತೀವ್ರ ಬೇಸರವಾಗಿತ್ತು. "ಆಟವಾಡಲು ಸಹ ಆಗದೇ ಇದ್ದಾಗ, ದೇವರೇ ಇದೆಂತಹ ಜೀವನ ಎಂದೆನಿಸಿತು," ಎಂದು ದಿಗಂತ್ ತಮ್ಮ ಮನಸ್ಥಿತಿಯನ್ನು ವಿವರಿಸಿದ್ದಾರೆ.
ಆದರೆ, ದಿಗಂತ್ ಈ ಖಿನ್ನತೆಯಿಂದ ಹೊರಬರಲು ಸಾಕಷ್ಟು ಶ್ರಮಪಟ್ಟಿದ್ದಾರೆ. "ಇತರ ನಟರಿಗೆ ಶೂಟಿಂಗ್ ವೇಳೆ ಆದ ಅಪಘಾತಗಳ ಬಗ್ಗೆ ಓದಿದೆ. ಕೆಲವರಿಗೆ ಕುದುರೆಯಿಂದ ಬಿದ್ದು ಬೆನ್ನು ಮುರಿದಿತ್ತು. ಅದೆಲ್ಲ ನೋಡಿದಾಗ, ನನ್ನದು ಅಷ್ಟು ದೊಡ್ಡ ಅಪಘಾತವಲ್ಲ ಎನಿಸಿತು. ಸರ್ಜರಿಗಳಿಂದ, ಲೆನ್ಸ್ ಬಳಕೆಯಿಂದ ಶೂಟಿಂಗ್ ಮಾಡಬಹುದು ಎಂಬ ಆತ್ಮವಿಶ್ವಾಸ ಬಂತು," ಎಂದು ಅವರು ಹೇಳಿದ್ದಾರೆ.
ದಿಗಂತ್ಗೆ ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿದ್ದು, ನಿರ್ದೇಶಕ ಬಿಜೋಯ್ ನಂಬಿಯಾರ್ ಮೂಲಕ. "ಅವರು ಪೆಸಿಟ್ನಲ್ಲಿ ಓದಿದ್ದರು. ನನ್ನ ಕನ್ನಡ ಸಿನಿಮಾಗಳನ್ನು ನೋಡಿ, ಒಂದು ಚಿತ್ರಕ್ಕೆ ಸಂಪರ್ಕಿಸಿದರು. ಬಾಲಿವುಡ್ನ ವಾತಾವರಣ ಇಷ್ಟವಾಯಿತು. ಒಂದರ ನಂತರ ಒಂದರಂತೆ ಆಫರ್ಗಳು ಬಂದವು," ಎಂದು ದಿಗಂತ್ ತಮ್ಮ ಬಾಲಿವುಡ್ ಪ್ರವೇಶದ ಬಗ್ಗೆ ಹೇಳಿಕೊಂಡಿದ್ದಾರೆ.
ಆದರೆ, ಈ ಘಟನೆಯ ಬಗ್ಗೆ ದಿಗಂತ್ಗೆ ಬೇಸರವಿರುವುದು, ಆ ನಟಿಯ ವರ್ತನೆಯ ಬಗ್ಗೆ. "ಅವಳು ಆಸ್ಪತ್ರೆಗೆ ಭೇಟಿಗೆ ಬರಲಿಲ್ಲ. ಕೇವಲ ಒಂದು ಸಂದೇಶ ಕಳಿಸಿ ಸುಮ್ಮನಾದಳು," ಎಂದು ದಿಗಂತ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಹೊರತಾಗಿಯೂ, ದಿಗಂತ್ ಆ ನಟಿಯ ವಿರುದ್ಧ ಯಾವುದೇ ಆರೋಪ ಮಾಡಿಲ್ಲ, ಆದರೆ ಈ ಘಟನೆಯು ಅವರ ಜೀವನದಲ್ಲಿ ಒಂದು ದೊಡ್ಡ ಆಘಾತವಾಗಿ ಉಳಿದಿದೆ.
ಈ ದುರಂತದಿಂದ ಹೊರಬಂದ ದಿಗಂತ್, ಇಂದು ಕನ್ನಡ ಚಿತ್ರರಂಗದಲ್ಲಿ ಮತ್ತೆ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಈ ಸಂದರ್ಶನವು, ಕಷ್ಟದ ಸಮಯದಲ್ಲೂ ಧೈರ್ಯದಿಂದ ಮುನ್ನಡೆಯುವ ಅವರ ಸ್ಫೂರ್ತಿಯ ಕಥೆಯನ್ನು ಎತ್ತಿ ತೋರಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.