ಪೊಂಗಲ್ ಹಬ್ಬಕ್ಕೆ ದಳಪತಿ ಧಮಾಲ್.. ʻಜನ ನಾಯಗನ್ʼ ರಿಲೀಸ್‌ ಡೇಟ್‌‌ ಅನೌನ್ಸ್

ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾದಾಳವಾಗಿರುವ ಜನ ನಾಯಗನ್ ಮೇಲೆ ತಮಿಳು ಸಿನಿರಸಿಕರು ಮಾತ್ರ ಇಡೀ ಇಂಡಿಯನ್ ಇಂಡಸ್ಟ್ರೀ ಕಾತುರ ಆತುರದಿಂದ ಕಾಯುತ್ತಿದೆ. 

Written by - Chetana Devarmani | Last Updated : Mar 26, 2025, 03:58 PM IST
  • ʼಜನ ನಾಯಗನ್ʼ ಮೂಲಕ ಪೊಂಗಲ್ ಹಬ್ಬಕ್ಕೆ ವಿಜಯ್-ಕೆವಿಎನ್ ಬಿರುಗಾಳಿ
  • ಪೊಂಗಲ್ ಹಬ್ಬಕ್ಕೆ ದಳಪತಿ ಧಮಾಲ್.. ʼಜನ ನಾಯಗನ್ʼಗೆ ಕೆವಿಎನ್ ಅದ್ಧೂರಿ ಸಾರಥ್ಯ
  • ಪೊಂಗಲ್ ಗೆ ʼಜನ ನಾಯಗನ್ʼಜಾತ್ರೆ..ಕೆವಿಎನ್-ದಳಪತಿ ʼವಿಜಯʼ ಯಾತ್ರೆ
ಪೊಂಗಲ್ ಹಬ್ಬಕ್ಕೆ ದಳಪತಿ ಧಮಾಲ್.. ʻಜನ ನಾಯಗನ್ʼ ರಿಲೀಸ್‌ ಡೇಟ್‌‌ ಅನೌನ್ಸ್

ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಸಿನಿಮಾಗಳಲ್ಲೊಂದು ಜನ ನಾಯಗನ್..ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾದಾಳವಾಗಿರುವ ಜನ ನಾಯಗನ್ ಮೇಲೆ ತಮಿಳು ಸಿನಿರಸಿಕರು ಮಾತ್ರ ಇಡೀ ಇಂಡಿಯನ್ ಇಂಡಸ್ಟ್ರೀ ಕಾತುರ ಆತುರದಿಂದ ಕಾಯುತ್ತಿದೆ. ಅದಕ್ಕೆ ಕಾರಣ ಈ ಚಿತ್ರದ ಬಲವಾಗಿರುವ ಕೆವಿಎನ್. ಹಾಗೂ ಇಂತಿಪ್ಪ ದಳಪತಿ ವಿಜಯ್..

ಸಿನಿರಂಗಕ್ಕೆ ಬೈ ಬೈ ಹೇಳಿ ಖಾದಿ ತೊಟ್ಟು ರಾಜಕೀಯದಲ್ಲಿ ದಾಳ ಹಾಕೋದಿಕ್ಕೆ ರೆಡಿಯಾಗಿರುವ ಮಾಸ್ಟರ್ ಕೊನೆ ಸಿನಿಮಾ ಜನ ನಾಯಗನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಪೊಂಗಲ್ ಹಬ್ಬಕ್ಕೆ ಕಮಾಲ್ ಮಾಡೋದಿಕ್ಕೆ ದಳಪತಿ ಬಾಕ್ಸಾಫೀಸ್ ಅಖಾಡಕ್ಕೆ ಇಳಿಯುತ್ತಿದೆ. 2026 ಜನವರಿ 15ರಂದು ಬಹುನಿರೀಕ್ಷಿತ ಸಿನಿಮಾ ಜನ ನಾಯಗನ್ ತೆರೆಗೆ ಬರ್ತಿದೆ. ನಾವು ಮೊದ್ಲೇ ಹೇಳಿದಂಗೆ ವಿಜಯ್ ಕೊನೆ ಚಿತ್ರವಾಗಿರೋದ್ರಿಂದ ಬಹಳ ಅದ್ಧೂರಿಯಾಗಿ ಕೆವಿಎನ್ ಪ್ರೊಡಕ್ಷನ್ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಈ ಬಾರಿಯ ಪೊಂಗಲ್ ದಳಪತಿ ಅಭಿಮಾನಿಗಳಿಗೆ ಮಾತ್ರವಲ್ಲ ಅಖಂಡ ಸಿನಿಮಾಪ್ರೇಮಿಗಳಿಗೂ ವಿಶೇಷವಾಗಿರುವಂತೆ ಕೆವಿಎನ್ ಸಂಸ್ಥೆ ತಮ್ಮ ನಿರ್ಮಾಣದ ಜನ ನಾಗಯನ್ ಚಿತ್ರವನ್ನು ಪೊಂಗಲ್ ಹಬ್ಬಕ್ಕೆ ಬೆಳ್ಳಿತೆರೆ ಅಖಾಡಕ್ಕೆ ಇಳಿಸುತ್ತಿದೆ. ಈ ಮೂಲಕ ದಳಪತಿ ವಿಜಯ್ ಅವರಿಗೆ ಅಂತಿಮ ಸಿನಿಮಾ ವಿದಾಯ ಹೇಳುವ ಎಲ್ಲಾ ರೀತಿಯ ಸಕಲ ತಯಾರಿ ಮಾಡಿಕೊಂಡಿದೆ. ಒಬ್ಬ ಸೂಪರ್ ಸ್ಟಾರ್ ಕೊನೆಯ ಚಿತ್ರ ಹೇಗೆಲ್ಲಾ ಇರಲಿದೆ? ಅದಕ್ಕೆ ಬೇಕಾದ ಬಲ, ಬೆಂಬಲ ಎಲ್ಲವನ್ನೂ ಕೆವಿಎನ್ ಕೊಂಚವೂ ಏರುಪೇರಾಗದಂತೆ ಒದಗಿಸಿದೆ.

ಇದನ್ನೂ ಓದಿ: Viral Video: ಪೊಲೀಸ್‌ ಠಾಣೆಯಲ್ಲೇ ಪತಿಗೆ ಥಳಿಸಿದ ಬಾಕ್ಸರ್‌ ಸವೀಟಿ ಬೂರಾ! ವಿಡಿಯೋ ವೈರಲ್

ಹೆಚ್ ವಿನೋದ್ ಎಂಬ ಅದ್ಭುತಸಿನಿಮಾಕರ್ಮಿಯಿಂದ ತಯಾರಾಗುತ್ತಿರುವ ಜನ ನಾಯಗನ್ ಗೆ ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ರಾಕಿಂಗ್ ಮ್ಯೂಸಿಕ್ ಕಿಕ್, ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ.   ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಲಿವುಡ್ ನಟ ಬಾಬಿ ಡಿಯೋಲ್, ಗೌತಮ್ ವಾಸುದೇವ ಮೆನನ್, ಪ್ರಿಯಾಮಣಿ, ಪ್ರಕಾಶ್ ರಾಜ್, ವರಲಕ್ಷ್ಮಿ ಶರತ್ ಕುಮಾರ್ ಮುಂತಾದದವರ ತಾರಾಮೆರಗು ಜನ ನಾಯಗನ್ ಅಂದವನ್ನು ಹೆಚ್ಚಿಸಿದೆ.

ದಕ್ಷಿಣ ಭಾರತದ ಸಿನಿರಂಗದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾತೃ ವೆಂಕಟ್ ಕೆ ನಾರಾಯಣ್ ವಿಜಯ್ ಕಟ್ಟ ಕಡೆಯ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹರವಿಡುವ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಹೇಳಿಕೇಳಿ ತಮಿಳು ಚಿತ್ರರಂಗದ ಬಾಕ್ಸಾಫೀಸ್ ಕಿಂಗ್ ಎನಿಸಿಕೊಂಡಿರುವ ಮಾಸ್ಟರ್ ಮೇನಿಯಾ ಪೊಂಗಲ್ ನಲ್ಲಿ ಜೋರಾಗಿರಲಿದೆ ಎಂಬ ಸೂಚನೆಯಂತೂ ಸಿಕ್ಕಿದೆ. ಅದಕ್ಕೆ ಸಂಪೂರ್ಣವಾದ ಸಹಕಾರವೂ ಕೆವಿಎನ್ ನೀಡಿದೆ. ಈ ಮೂಲಕ ದಳಪತಿ ಅಭಿಮಾನಿಗಳು ಪೊಂಗಲ್ ಹಬ್ಬವನ್ನು ವಿಶೇಷವಾಗಿ ಆಚರಿಸುವ ಖುಷಿಯಲ್ಲಿದ್ದಾರೆ.

ಇದನ್ನೂ ಓದಿ: ಎಲ್ಲವೂ ಆಕೆಗಾಗಿ... ಯುಜ್ವೇಂದ್ರ ಚಹಲ್ - ಧನಶ್ರೀ ವರ್ಮಾ ಡಿವೋರ್ಸ್‌ಗೆ ಇದುವೇ ಅಸಲಿ ಕಾರಣ!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News