)
Pavithra Gowda: ಪವಿತ್ರ ಗೌಡ..ಕರ್ನಾಟಕದಲ್ಲಿ ಸದಾ ಸುದ್ದಿಯಲ್ಲಿದ್ದ ಹೆಸರು. ದರ್ಶನ್ ಗೆಳತಿ ಅನ್ನೋ ಕಾರಣಕ್ಕೆ ಆಕೆ ಕೂತರು ಸುದ್ದಿ, ನಿಂತರೂ ಸುದ್ದಿ ಅನ್ನೋ ತರ ಇತ್ತು. ಕಳೆದ ಜೂನ್ ನಲ್ಲಿ ಆದ ಒಂದೇ ಒಂದೇ ಅವಾಂತರ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ. ಯಸ್ ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಆಯ್ತು ಅನ್ನೋ ನ್ಯೂಸ್ ಬೆಂಕಿಯಂತೆ ಸೌಂಡ್ ಮಾಡ್ತು. ಈ ಕೊಲೆಗೆ ಕಾರಣ ಪವಿತ್ರ ಗೌಡ ಅಂತ ಅವರನ್ನ ಜೈಲಿಗೂ ಕಳಿಸಲಾಯಿತು. ಇದೀಗ ಜಾಮೀನಿನ ಮೂಲಕ ಪವಿತ್ರಗೌಡ ಹೊರ ಬಂದು ಜೀವನಕ್ಕಾಗಿ ದುಡಿಮೆ ಮುಂದುವರೆಸಿದ್ದಾರೆ.
ಆದರೆ ನೀವೆಲ್ಲ ಅಂದುಕೊಂಡಂತೆ ಪವಿತ್ರ ಗೌಡ ಅಹಂ ಇರೋ ಮಹಿಳೆ ಅಲ್ಲವೇ ಅಲ್ಲ. ಪವಿತ್ರಗಿರೋ ಸೌಂದರ್ಯದಷ್ಟೇ ಮೃದು ಸ್ವಭಾವದ ನಟಿ ಈಕೆ. ಸೌಮ್ಯ ಸ್ವಭಾವದ ಈ ಸುಂದರಿ ಸೊಳ್ಳೆ ಕೊಲ್ಲಲು ಕೂಡ ಮನಸ್ಸು ಮಾಡೋದಿಲ್ಲ ಬಿಡಿ. ತನ್ನದಲ್ಲದ ತಪ್ಪಿಗೆ ಜೈಲಿನಲ್ಲಿ ಕಳೆದ ಈಕೆ ಎಂದಿಗೂ ಅಪವಿತ್ರ ಅಲ್ಲ. ಆಕೆಯನ್ನ ಹತ್ತಿರದಿಂದ ನೋಡಿದರೆ ನಮಗನಿಸೋದು ಏನಪ್ಪಾ ಅಂದರೆ ಟೀಕೆ ಟಿಪ್ಪಣಿಗಳನ್ನ ದೇವರಿಗೆ ಒಪ್ಪಿಸಿ ಮೌನವಾಗಿ ಎಲ್ಲವನ್ನೂ ಗಮನಿಸುತ್ತಾ, ದೇವರ ಬಳಿ ನೀನೇ ಎಲ್ಲಾ ನೋಡಿಕೋ ಎಂದು ಮೌನಕ್ಕೆ ಶರಣಾದಂತೆ ಕಾಣುತ್ತದೆ. ಪವಿತ್ರ ಗೌಡ ಅವರದ್ದು ಹುಟ್ಟುತ್ತಲೇ ನಗು ಮುಖ,ದುಃಖದಲ್ಲಿದ್ದರೂ ನಕ್ಕಂತೆ ಕಾಣುತ್ತೆ. ಕೊಲೆ ಮಾಡಿಸಿ ಹೆಂಗ್ ನಗುತ್ತಾಳೆ ನೋಡು ಅನ್ನೋರಿಗೆ ಇದು ಉತ್ತರ.
ಪವಿತ್ರ ಗೌಡ ಯಾವತ್ತಿಗೂ ಯಾವುದಕ್ಕೂ ದರ್ಶನ್ ಅವರಿಗೆ ಒತ್ತಡ ಹಾಕಿಲ್ಲ. ಅದು ಬೇಕು ಇದು ಬೇಕು ಅಂತ ಒತ್ತಾಯಿಸಿಲ್ಲದವರಲ್ಲ . ಪವಿತ್ರ ಗೌಡರ ಈ ವರ್ತನೆಯೇ ದರ್ಶನ್ ಅವರಿಗೆ ಇಷ್ಟ ಆಗಲು ಕಾರಣ ಅನ್ನೋದನ್ನ ಇಂಡಸ್ಟ್ರಿಯಲ್ಲಿ ಕೆಲವರು ಈಗಲೂ ಮಾತನಾಡುತ್ತಾರೆ. 10ರೂಪಾಯಿ ಇದ್ದರೂ ಪಾನಿಪುರಿಗಾಯಿತು ಅಂತ ಇದ್ದಿದ್ರಲ್ಲಿ ಖುಷಿ ಪಡೋ ಮಹಿಳೆ ಪವಿತ್ರ.
ಹೇಳಿಕೇಳಿ ಪವಿತ್ರಗೌಡ ದೈವಭಕ್ತಿ ಹೆಚ್ಚಿರೋ ನಟಿ. ಜೈಲಿನಲ್ಲಿ ಅನ್ನದ ತಟ್ಟೆ ತಳ್ಳಿ ಅನ್ನಕ್ಕೆ ಅವಮಾನ ಮಾಡಲು ಖಂಡಿತಾ ಸಾಧ್ಯವೇ ಇಲ್ಲ. ನಿಮಗೆ ಗೊತ್ತಾ ಪವಿತ್ರ ಗೌಡ ಇದ್ದಷ್ಟು ದಿನ ಜೈಲಿನಲ್ಲಿ ಸಹಖೈದಿಗಳ ಜೊತೆ ಆಪ್ತತೆಯಿಂದ ಇದ್ದರಂತೆ. ಜಾಮೀನಿನ ಮೂಲಕ ಹೊರ ಬರುವಾಗ ಅಲ್ಲಿದ್ದ ಎಲ್ಲಾ ಖೈದಿಗಳು ಕಣ್ಣೀರು ಹಾಕಿದ್ದರು ಅನ್ನೋ ಮಾಹಿತಿ ಜೀ ನ್ಯೂಸ್ ಗೆ ಸಿಕ್ಕಿದೆ. 2ಕೋಟಿ ಹಣ ಬೇರೆ ಅಕೌಂಟ್ ನಿಂದ ಪವಿತ್ರ ಅಕೌಂಟ್ ಗೆ ಜಮೆ ಆಗಿದೆ ಅಂತ ದೊಡ್ಡ ಸುದ್ದಿ ಮಾಡಿದರು ಆ ಹಣದ ಮೂಲ ಹುಡುಕಿ ಕೆದಕಿ ಕೆಟ್ಟ ಮಾತುಗಳನ್ನ ಆಡಿದರು. ಆದರೆ ಆಕೆ ಬಳಿ ಇರೋ ಐಷರಾಮಿ ಕಾರಿನ ಹಣದ ಮೂಲದ ಬಗ್ಗೆ ಯಾಕೆ ಯಾರು ಮಾತನಾಡಿಲ್ಲ. ಯಾಕಂದ್ರೆ ಆ ಕಾರನ್ನ ನನ್ನ ತಂದೆಯವರು ಕೊಡಿಸಿದ್ದು ಅನ್ನೋ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ.
ನಿಮಗೆ ಗೊತ್ತಾ ಪವಿತ್ರ ಗೌಡ ದೊಡ್ಡ ಜಮೀನ್ದಾರರ ಮಗಳು. ಅವರಿಗೆ ಹಣಕಾಸಿನ ತೊಂದರೆ ಇಲ್ಲವೇ ಇಲ್ಲ. ಈಗಲೂ ಕನಕಪುರದ ಬಳಿ ಕೋಟಿಕೋಟಿಗೆ ಬೆಲೆ ಬಾಳೋ ಅಸ್ತಿ ಇದೆ ಅನ್ನೋದನ್ನ ಜೀ ಕನ್ನಡ ನ್ಯೂಸ್ ಪತ್ತೆಹಚ್ಚಿದೆ. ರೇಣುಕಾಸ್ವಾಮಿ ಕೊಲೆ ಆಗಿರೋ ವಿಚಾರ ಕೊನೆ ಹಂತದವರೆಗೂ ಪವಿತ್ರಗೆ ಗೊತ್ತಿಲ್ಲ ಅಂತ ಹೇಳಲಾಗುತ್ತಿದೆ. ದರ್ಶನ್ ಕಾಲ್ ಮಾಡಿ ಸ್ಟೇಷನ್ ಗೆ ಬಾ ಅಂತ ಕರೆದಾಗ್ಲೂ ಯಾಕೆ ಅನ್ನೋ ಪ್ರಶ್ನೆ ಮೂಲಕವೇ ಠಾಣೆ ಬಳಿ ಪವಿತ್ರ ಗೌಡ ಹೋಗಿದ್ದರು . ಇಷ್ಟೇ ಅಲ್ಲ ಪವಿತ್ರ ಗೌಡ ಶೆಡ್ ಬಳಿ ಹೋಗೇ ಇಲ್ಲ ಜೊತೆಗೆ ರೇಣುಕಾಸ್ವಾಮಿಯನ್ನ ನೋಡೆ ಇಲ್ಲ ಇನ್ನ ಚಪ್ಪಲಿಯಲ್ಲಿ ಎಲ್ಲಿಂದ ಹೊಡೆಯಲು ಸಾಧ್ಯ ಹೇಳಿ.
ತಪ್ಪು ಮಾಡಿಲ್ಲ ಅನ್ನೋ ಧೈರ್ಯದಿಂದಲೇ ಆಕೆ ತಲೆ ಎತ್ತಿ ನಡೆಯುತ್ತಿದ್ದಾರೆ ಅನ್ನೋದಕ್ಕೆ ಕಾಲವೇ ಸಾಕ್ಷಿ ಕೊಡುತ್ತೆ ಬಿಡಿ. ಬ್ಯಾಕ್ ಟು ಬ್ಯಾಕ್ ಸಂದೇಶ ಕಳಿಸುತ್ತಿದ್ದ ರೇಣುಕಾಸ್ವಾಮಿಗೆ ಠಾಣೆಗೆ ಹೋಗಿ ಕಂಪ್ಲೇಂಟ್ ಕೊಡಬೇಕು,ಸರಿಯಾಗಿ ಬುದ್ದಿ ಕಲಿಸಬೇಕು ಅನ್ನೋವಷ್ಟರಲ್ಲಿ ಇವೆಲ್ಲಾ ಆಗಿ ಹೋಗಿತ್ತು ಅನ್ನೋದು ಯಾರಿಗೂ ಗೊತ್ತಿಲ್ಲ ಬಿಡಿ.
ಪವಿತ್ರ ಗೌಡಗೆ ಇರೋ ಸೌಂದರ್ಯಕ್ಕೆ ಯಾವ ಬ್ರಾಂಡೆಂಡ್ ಬಟ್ಟೆ, ಒಡವೆನೇ ನಾಚಿ ನೀರಗುತ್ತೆ ಕಣ್ರೀ. ಯಾರನ್ನ ಕೂಡ ಕಾಪಿ ಮಾಡೋ ಅಗತ್ಯ ಇಲ್ಲ ಅನಿಸುತ್ತೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ.
ಒಮ್ಮೊಮ್ಮೆ ಅನಿಸೋದು ಸಹಜ ಅಂತೆಕಂತೆ ಅಂತ ಹೇಳೋ ಬದಲು ಸತ್ಯದ ಹಿಂದೆ ಸುತ್ತಿ ವಿಚಾರ ತಿಳಿದುಕೊಂಡರೆ ಇಂತಹ ಸತ್ಯ ಹೊರಬರುತ್ತೆ.ಒಂದಂತೂ ಸತ್ಯ ಪವಿತ್ರ ಗೌಡ ಅವರನ್ನ ಹತ್ತಿರದಿಂದ ಬಲ್ಲವರು ಮತ್ತು ಆಕೆಯ ಜೊತೆ ಒಡನಾಟ ಇಟ್ಟುಕೊಂಡವರಿಗೆ ಮಾತ್ರ ಆಕೆ ಏನು ಅಂತ ಅರ್ಥ ಆಗಲು ಸಾಧ್ಯ. ಆಕೆ “ಅಪವಿತ್ರ”ಅಲ್ಲ. .!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ